ಕೋಲ್ಕತ:ಕೆಕೆ ಎಂದೇ ಖ್ಯಾತರಾಗಿದ್ದ ಬಾಲಿವುಡ್​ ಗಾಯಕ ಕೃಷ್ಣಕುಮಾರ್​ ಕುನ್ನತ್​ ಅವರು ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ನಡೆದ ಕಾರ್ಯಕ್ರಮದ ಬೆನ್ನಲ್ಲೇ ಕುಸಿದುಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಿನ್ನೆ (ಮೇ.31) ಸಂಜೆ ನಡೆದಿದೆ.
ಕೆಕೆ ಅವರಿಗೆ 53 ವರ್ಷ ವಯಸ್ಸಾಗಿತ್ತು. ಖ್ಯಾತ ಹಿನ್ನೆಲೆ ಗಾಯಕರಾಗಿರುವ ಕೆಕೆ, ನಿನ್ನೆ ಕೋಲ್ಕತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಬೆನ್ನಲ್ಲೇ ಕುಸಿದು ಬಿದ್ದ ಕೆಕೆ ಅವರನ್ನು ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಕೋಲ್ಕತದ ಸಿಎಂಆರ್​ಐ ಆಸ್ಪತ್ರೆಗೆ ರಾತ್ರಿ 10.30ರ ಸುಮಾರಿಗೆ ಕೆಕೆ ಅವರನ್ನು ಕರೆತಂದಾಗ ಅವರಾಗಲೇ ಮೃತಪಟ್ಟಿದ್ದರು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಕೋಲ್ಕತದ ನಜ್ರುಲ್ ಮಂಚದಲ್ಲಿ ನಡೆದ ಅವರ ಸಂಗೀತ ಕಚೇರಿಯ ಫೋಟೋಗಳನ್ನು ಕೆಕೆ ಅವರು ನಿನ್ನೆ ಪೋಸ್ಟ್ ಮಾಡಿದ್ದರು. ಕೆಕೆ ಅವರು ಭಾರತೀಯ ಚಿತ್ರರಂಗದ ಬಹುಮುಖ ಗಾಯಕರಲ್ಲಿ ಒಬ್ಬರು. 1999 ರಲ್ಲಿ ಬಿಡುಗಡೆಯಾದ ಅವರ ಮೊದಲ ಆಲ್ಬಂ ಸಾಂಗ್​ ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು. 2000ರ ದಶಕದ ಆರಂಭದಿಂದ ಕೆಕೆ ಅವರು ಹಿನ್ನೆಲೆ ಗಾಯಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಬಂಗಾಳಿ ಸೇರಿದಂತೆ ಹಲವು ಭಾಷೆಗಳಲ್ಲಿ ಕೆಕೆ ತಮ್ಮ ಧ್ವನಿ ನೀಡಿದ್ದಾರೆ.
A post shared by KK (@kk_live_now)

ಮೃತರ ಸಾವಿಗೆ ಪ್ರಧಾನಿ ಮೋದಿ ಸೇರಿದಂತೆ ಭಾರತೀಯ ಸಿನಿರಂಗದ ಕಲಾವಿದರಿಂದ ಸಂತಾಪಗಳು ಹರಿದುಬರುತ್ತಿವೆ. ಕೆಕೆ ಎಂದೇ ಖ್ಯಾತರಾಗಿರುವ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್​ ಅವರ ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಹಾಡುಗಳು ಎಲ್ಲಾ ವಯೋಮಾನದ ಜನರಲ್ಲೂ ವ್ಯಾಪಕವಾದ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಅವರ ಹಾಡುಗಳ ಮೂಲಕ ನಾವು ಅವರನ್ನು ಸದಾ ಸ್ಮರಿಸುತ್ತೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ. ಓಂ ಶಾಂತಿ ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.
Saddened by the untimely demise of noted singer Krishnakumar Kunnath popularly known as KK. His songs reflected a wide range of emotions as struck a chord with people of all age groups. We will always remember him through his songs. Condolences to his family and fans. Om Shanti.
— Narendra Modi (@narendramodi)May 31, 2022

ಕೋಲ್ಕತದಲ್ಲಿ ಪ್ರದರ್ಶನ ನೀಡುತ್ತಿರುವಾಗ ಅನಾರೋಗ್ಯಕ್ಕೆ ಒಳಗಾಗಿ ಕೆಕೆ ನಿಧನರಾದ ಸುದ್ದಿ ಕೇಳಲು ದುರಂತವಾಗಿದೆ. ಜೀವನವು ಎಷ್ಟು ಸೂಕ್ಷ್ಮ ಎಂಬುದಕ್ಕೆ ಮತ್ತೊಂದು ಜ್ಞಾಪನೆ ಇದು. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ನಟ ಅಕ್ಷಯ್​ ಕುಮಾರ್​, ಗಾಯಕ ಅರ್ಮಾನ್​ ಮಲ್ಲಿಕ್​ ಸೇರಿದಂತೆ ಅನೇಕರು ಟ್ವೀಟ್​ ಮೂಲಕ ಸಂತಾಪಗಳನ್ನು ಸೂಚಿಸುತ್ತಿದ್ದಾರೆ.(ಏಜೆನ್ಸೀಸ್​)
–Virender Sehwag (@VirenderSehwag)31 May 2022

–Madhur Bhandarkar (@imbhandarkar)1 June 2022

From today's performancepic.twitter.com/bS9FFF4TPm
— Indra The_Great (@indra20099)May 31, 2022

ಕೈ 2ನೇ ಅಭ್ಯರ್ಥಿ ಸೋತ್ರೆ ಯಾರು ಹೊಣೆ? ಕಾಂಗ್ರೆಸ್​ನಲ್ಲಿ ಕಸಿವಿಸಿ ಶುರು, ತಿರುಗುಬಾಣವಾದ ತಂತ್ರ

576 ಕೋಟಿ ರೂ. ಆಸ್ತಿ ಒಡೆಯ ಕುಪೇಂದ್ರ ರೆಡ್ಡಿ: ರಾಜ್ಯಸಭಾ ಅಖಾಡಕ್ಕಿಳಿದ 6 ಜನರ ಆಸ್ತಿ ವಿವರ ಇಲ್ಲಿದೆ

ಹೈನೋದ್ಯಮಕ್ಕೆ ಹಲವು ಆಯಾಮ: ಕೆಎಂಎಫ್ ಮಹತ್ವದ ಮೈಲಿಗಲ್ಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 8 =
Remember me
