ಹೈದರಾಬಾದ್​:ತೆಲಂಗಾಣ ರಾಜ್ಯ ಸದರನ್​ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ (ಟಿಎಸ್​ಎಸ್​ಪಿಡಿಸಿಎಲ್​) ​ನ ಜೂನಿಯರ್​ ಲೈನ್​ಮೆನ್​ (ಜೆಎಲ್​ಎಂ) ಹುದ್ದೆಗೆ ನೇಮಕವಾದ ತೆಲಂಗಾಣದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೊಂದಿಗೆ ಬಾಬೂರಿ ಸಿರಿಶಾ ಎಂಬ ಯುವತಿ ಹೊಸ ಇತಿಹಾಸ ಬರೆದಿದ್ದಾಳೆ.
ತೆಲಂಗಾಣ ಇಂಧನ ಸಚಿವ ಜಿ.ಜಗದೀಶ್ ರೆಡ್ಡಿ ಅವರು ಬುಧವಾರ ತಮ್ಮ ಕಚೇರಿಯಲ್ಲಿ ಸಿರಿಶಾಗೆ ನೇಮಕಾತಿ ಪತ್ರ ವಿತರಿಸಿ, ಶುಭಕೋರಿದರು.
ಸಿರಿಶಾ ಅವರು ಸಿದ್ಧಿಪೇಟೆ ಜಿಲ್ಲೆಯ ನಿವಾಸಿ. ಮೇಡ್ಚಲ್​-ಮಲ್ಕಜ್​ಗಿರಿಯಲ್ಲಿ ಸಿರಿಶಾ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಟಿಎಸ್​ಎಸ್​ಪಿಡಿಸಿಎಲ್, ಜೂನಿಯರ್​ ಲೈನ್​ಮೆನ್​ ಹುದ್ದೆಗೆ ನೇಮಕಾತಿ ನಡೆಸಿತ್ತು. ಇದರಲ್ಲಿ ಆಯ್ಕೆಯಾದ ಒಬ್ಬಳೇ ಮಹಿಳೆ ಎಂಬ ಖ್ಯಾತಿಗೆ ಸಿರಿಶಾ ಪಾತ್ರರಾಗಿದ್ದಾರೆ. ತೆಲಂಗಾಣದಲ್ಲಿರುವ ಎರಡೂ ವಿದ್ಯುತ್​ ವಿತರಣಾ ಕಂಪನಿಯ ಜೆಎಲ್​ಎಂ ಹುದ್ದೆಯಲ್ಲಿರುವ ಏಕೈಕ ಮಹಿಳೆಯಾಗಿದ್ದಾಳೆ.
“ಟಿಎಸ್​ಎಸ್​ಪಿಡಿಸಿಎಲ್​ನಲ್ಲಿ ಜೆಎಲ್​ಎಂ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆಯಾಗಿರುವುದು ಹೆಮ್ಮೆಯ ಕ್ಷಣವಾಗಿದೆ. ಪುರುಷರಿಗಿಂತ ಮಹಿಳೆಯರು ಯಾವುದರಲ್ಲೂ ಕಡಿಮೆಯಿಲ್ಲ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಬಲ್ಲರು ಎಂಬುದನ್ನು ನನ್ನ ಆಯ್ಕೆಯು ಸಾಬೀತುಪಡಿಸುತ್ತದೆ. ನನಗೆ ಈ ಅವಕಾಶ ನೀಡಿದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್, ಇಂಧನ ಸಚಿವ ಜಗದೀಶ್ ರೆಡ್ಡಿ, ಟಿಎಸ್‌ಎಸ್‌ಪಿಡಿಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಘುಮಾ ರೆಡ್ಡಿ ಮತ್ತು ಕಂಪನಿಗೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ಕೆಲಸದ ಮೂಲಕ ನನ್ನ ಟಿಎಸ್‌ಎಸ್‌ಪಿಡಿಸಿಎಲ್​ಗೆ ಹೆಮ್ಮೆ ತರುತ್ತೇನೆ ಎಂದು ಸಿರಿಶಾ ಹೇಳಿದರು.
ಇಂಧನ ಸಚಿವ ಜಗದೀಶ್ ರೆಡ್ಡಿ ಮಾತನಾಡಿ, ಮಹಿಳೆಯರು ಹೊಸ ಹಾದಿ ತುಳಿದು ವಿದ್ಯುತ್‌ ವಲಯದ ಜೆಎಲ್‌ಎಂ ಹುದ್ದೆಗೆ ನೇಮಕಗೊಳ್ಳುತ್ತಿರುವುದು ಸಂತಸದ ಕ್ಷಣವಾಗಿದೆ. ಲೈನ್‌ಮೆನ್ ಹುದ್ದೆಗಳಲ್ಲಿ ಮಹಿಳೆಯರೂ ನೇಮಕವಾಗುತ್ತಿರುವುದರಿಂದ ಈ ಹಿಂದೆ ಸೂಚಿಸಿದಂತೆ ಲೈನ್‌ಮೆನ್ ಹುದ್ದೆಯ ಹೆಸರನ್ನು ಬದಲಾಯಿಸಿ ಲಿಂಗ-ತಟಸ್ಥಗೊಳಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಟಿಎಸ್​ಎಸ್​ಪಿಡಿಸಿಎಲ್​ನಲ್ಲಿ 70 ಸಹಾಯಕ ಎಂಜಿನಿಯರ್‌ಗಳು, 201 ಸಬ್ ಎಂಜಿನಿಯರ್‌ಗಳು ಮತ್ತು 1,000 ಲೈನ್‌ಮೆನ್ ಹುದ್ದೆಗಳ ನೇಮಕಾತಿ ಈಗಾಗಲೇ ಪ್ರಾರಂಭವಾಗಿದೆ. ವಿವಿಧ ಹುದ್ದೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯವನ್ನೂ ನೀಡಲಾಗುತ್ತಿದೆ ಎಂದು ಜಗದೀಶ್ ರೆಡ್ಡಿ ಹೇಳಿದರು.(ಏಜೆನ್ಸೀಸ್​)
ಪೊಲೀಸ್​ ಅಧಿಕಾರಿಯಾಗಿ ಪತಿ ಮಾಡಿದ ನೀಚ ಕೃತ್ಯಕ್ಕೆ ಬೇಸತ್ತು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಮಹಿಳೆ

ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದ ಮದುಮಗಳು! ಮಂಡ್ಯ ಯುವತಿಯ ನಡೆಗೆ ಎಲ್ಲೆಡೆ ಮೆಚ್ಚುಗೆ

ಕೊನೆಗೂ ಗುಡ್​ನ್ಯೂಸ್​ ಕೊಟ್ಟ ರಮ್ಯಾ! ಮೋಹಕ ತಾರೆಯ ಈ ನಿರ್ಧಾರದ ಹಿಂದಿದೆಯಾ ಆ ನೋವು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 14 =
Remember me
