ನವದೆಹಲಿ:ಕಳೆದ ಐಪಿಎಲ್​ನಲ್ಲಿ ಎಂ.ಎಸ್​. ಧೋನಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಅವರ ಮಗಳು ಝೀವಾಗೆ ಅತ್ಯಾಚಾರ ಬೆದರಿಕೆ ಬಂದಿದ್ದವು. ಇದೀಗ ವಿರಾಟ್​ ಕೊಹ್ಲಿಯ 9 ತಿಂಗಳ ಮಗಳು ವಮಿಕಾಗೆ ಅದೇ ರೀತಿಯ ಬೆದರಿಕೆಗಳು ಬಂದಿವೆ. ತೀವ್ರ ಟೀಕೆಗೆ ಗುರಿಯಾದ ತಮ್ಮ ಟೀಮ್​ ಮೇಟ್​ ಮೊಹಮ್ಮದ ಶಮಿ ಪರ ನಿಂತಿದ್ದಕ್ಕೆ ಕೊಹ್ಲಿಗೆ ಈ ಬೆದರಿಕೆಗಳು ಬಂದಿವೆ ಎನ್ನಲಾಗಿದೆ. ಕ್ರೀಡೆಯನ್ನು ಕ್ರೀಡಾಸ್ಫೂರ್ತಿಯಿಂದ ನೋಡದ ಕಿಡಿಗೇಡಿಗಳು ಪುಟ್ಟು ಮಗುವಿಗೂ ರೇಪ್​ ಬೆದರಿಕೆ ಹಾಕುತ್ತಾರೆಂದರೆ ಅವರ ಮನಸ್ಥಿಯಿಂದ ಆತಂಕದ ವಾತಾವರಣ ಮೂಡುವುದರಲ್ಲಿ ಸಂಶಯವಿಲ್ಲ.
ಇನ್ನು ಅನುಷ್ಕಾ ಶರ್ಮಾ ಮತ್ತು ವಿರಾಟ್​ ಕೊಹ್ಲಿಯ ಪುಟ್ಟ ಮಗಳಿಗೆ ರೇಪ್​ ಬೆದರಿಕೆ ಹಾಕಿರುವುದರ ಕುರಿತು ದೆಹಲಿಯ ಮಹಿಳಾ ಆಯೋಗ ದೆಹಲಿ ಪೊಲೀಸ್​ ಪೊಲೀಸ್​ಗೆ ನೋಟಿಸ್​ ನೀಡಿದೆ.
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಮ್​ ಇಂಡಿಯಾ ಸೋತ ಬೆನ್ನಲ್ಲೇ ಮೊಹಮ್ಮದ್​ ಶಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದವು. ಪಾಕಿಸ್ತಾನದಿಂದ ಎಷ್ಟು ಹಣ ತೆಗೆದುಕೊಂಡಿದ್ದೀಯಾ? ನೀನು ದೇಶದ್ರೋಹಿ ಎಂಬೆಲ್ಲ ಆರೋಪಗಳನ್ನು ಮಾಡಲಾಯಿತು. ಇದರ ಬೆನ್ನಲ್ಲೇ ಕೊಹ್ಲಿ, ಮೊಹಮ್ಮದ್​ ಶಮಿ ಪರವಾಗಿ ನಿಂತರು. ಇದರ ಬೆನ್ನಲ್ಲೇ ಕೊಹ್ಲಿ ಮಗಳಿಗೆ ರೇಪ್​ ಬೆದರಿಕೆಗಳು ಬಂದಿವೆ.
ದೆಹಲಿ ಡೆಪ್ಯುಟಿ ಕಮಿಷನರ್​ ಆಫ್​ ಪೊಲೀಸ್​ ಮತ್ತು ಸೈಬರ್​ ಕ್ರೈಂ ಬ್ರಾಂಚ್​ಗೆ ನೋಟಿಸ್​ ನೀಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್, ಮಾಧ್ಯಮ ವರದಿಗಳ ಆಧಾರದ ಮೇಲೆ ಆಯೋಗ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ಅಲ್ಲದೆ, ಈ ಪ್ರಕರಣ ಸಂಬಂಧ ಪೊಲೀಸರು ತೆಗೆದುಕೊಂಡಿರುವ ಕ್ರಮದ ಬಗ್ಗೆ ತಿಳಿಸಲು ಕೋರಿದ್ದಾರೆ ಮತ್ತು ದಾಖಲಾಗಿರುವ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ನಕಲು ಮತ್ತು ಬಂಧಿತ ಆರೋಪಿಗಳ ವಿವರಗಳನ್ನು ಕೇಳಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ಈವರೆಗೂ ಯಾವುದೇ ಆರೋಪಿಗಳನ್ನು ಬಂಧಿಸಿಲ್ಲವೆಂದಾದರೆ, ಪೊಲೀಸರು ಈ ಬಗ್ಗೆ ಕೈಗೊಂಡ ಕ್ರಮಗಳನ್ನು ವಿವರಿಸಬೇಕು ಮತ್ತು ವಿವರವಾದ ಕ್ರಮ ಕೈಗೊಂಡ ವರದಿಯನ್ನು ನೀಡಬೇಕು ಎಂದು ಕೇಳಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ಪೊಲೀಸರು ನವೆಂಬರ್ 8ರೊಳಗೆ ಮಹಿಳಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಮಲಿವಾಲ್ ಸಹಿ ಮಾಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಅತ್ಯಾಚಾರ ಬೆದರಿಕೆಗಳ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದ್ದು, ಸಾಕಷ್ಟು ಆಕ್ರೋಶಗಳು ವ್ಯಕ್ತವಾಗಿವೆ. ಆರೋಪಿಯನ್ನು ಹಿಡಿದು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗಿದೆ.(ಏಜೆನ್ಸೀಸ್​)
ನಟ ಪುನೀತ್​ ಬಗ್ಗೆ ಮಂಗಳೂರು‌ ಪೊಲೀಸ್ ಕಮಿಷನರ್​ ಮಾಡಿದ ಟ್ವೀಟ್​ ವೈರಲ್​!

ಎಲ್ಲ ಕೇಸಲ್ಲೂ ಅಟ್ರಾಸಿಟಿ ಕಾಯ್ದೆ ಬೇಡ: ಸಂತ್ರಸ್ತ ದಲಿತನಾದ ಮಾತ್ರಕ್ಕೆ ಕಾಯ್ದೆ ಅನ್ವಯಿಸಲ್ಲ; ಹೈಕೋರ್ಟ್ ಮಹತ್ವದ ಆದೇಶ..

ಉಪಸಮರ | ಕೈ-ಕಮಲ ಸಮಬಲ: ಕಾಂಗ್ರೆಸ್ ತೆಕ್ಕೆಗೆ ಹಾನಗಲ್, ಸಿಂದಗಿ ಬಿಜೆಪಿ ವಶ, ಸಾರ್ವತ್ರಿಕ ಚುನಾವಣೆಯ ನಾಡಿಮಿಡಿತ ಗೋಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 18 =
Remember me
