ನವದೆಹಲಿ; ಕರೊನಾ ನಿರ್ವಹಣೆ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕರೊನಾ ಸಮಸ್ಯೆಯನ್ನು ಒಂದು ಪ್ರಧಾನಿಯವರಾದರೂ ಅರ್ಥ ಮಾಡಿಕೊಳ್ಳಬೇಕು ಅವರಿಗೆ ಅರ್ಥ ಆಗದಿದ್ದರೇ ಕೇಂದ್ರ ಸರ್ಕಾರವಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
ಶುಕ್ರವಾರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಬಗ್ಗೆ ನಾನು ಸೇರಿದಂತೆ ಅನೇಕರು ಮೋದಿಯವರಿಗೆ ಹಾಗೂ ಸರ್ಕಾರಕ್ಕೆ ಅನೇಕ ಎಚ್ಚರಿಕೆ ನೀಡಿದರೂ ನಮ್ಮನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ. ಬದಲಿಗೆ ನಮ್ಮನ್ನು ಅಣಕ ಮಾಡಲಾಯಿತು. ಈಗ ನೋಡಿದರೆ ಕರೊನಾದಿಂದ ದೇಶದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪಿದರು. ಅವೈಜ್ಞಾನಿಕ ಲಾಕ್ಡೌನ್ ನಿಂದಾಗಿ ಅನೇಕ ಲಕ್ಷ ಜನ ನಿರ್ಗತಿಕರಾದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಷ್ಟೆಲ್ಲಾ ಆದರೂ ಮೋದಿಯವರು ಇನ್ನೂ ಸೀರಿಯಸ್ ಆಗದಿರುವುದೇ ನನಗೆ ಆಶ್ಚರ್ಯ ತರಿಸಿದೆ. ಆಕ ಆಕ್ಸಿಜನ್, ಲಸಿಕೆ, ಔಷಧಿಯ ಆಹಾಕಾರದ ಬಗ್ಗೆ ಮೋದಿಯವರು ಏನೂ ಮಾತನಾಡುತ್ತಿಲ್ಲ ಎಂದು ಜರಿದಿದ್ದಾರೆ. ಕೇಂದ್ರ ಸರ್ಕಾರವಾದರೂ ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.
ದೇಶದಲ್ಲಿ ಶೇ 3. ರಷ್ಟು ಜನಕ್ಕೆ ಇನ್ನೂ ವ್ಯಾಕ್ಸಿನ್ ಸಿಕ್ಕಿಲ್ಲ. ಭವಿಷ್ಯದ ಬಗ್ಗೆ ಯೋಚಿಸದೇ ಬೇರೆ ದೇಶಗಳಿಗೆ ಲಸಿಕೆ ಕೊಟ್ಟು ಜಂಭ ಕೊಚ್ಚಿಕೊಂಡಿದ್ದೇ ಮೋದಿ ಸಾಧನೆ ಎಂಬಂತಾಯಿತು. ಅಸಲಿಗೆ ದೇಶದಲ್ಲಿ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ ಇಗಿರುವ ಸಂಖ್ಯೆಗಿಂತ ನಾಲ್ಕು ಪಟ್ಟು ಅಧಿಕ ಇದೆ. ಸಾವಿನ ಪ್ರಮಾಣವನ್ನು ಮುಚ್ಚಿಟ್ಟು ಮೋದಿ ರಾಜಕೀಯ ಮಾಡುತ್ತಿದ್ದಾರೆ ಎಂದು ರಾಹುಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ;ಸಾಲ ತೀರಿಸದಿದ್ರೆ ಒಡವೆ ಹರಾಜಾಕ್ತೇವೆ: ಸುಸ್ತಿದಾರರಿಗೆ ಖಾಸಗಿ ಬ್ಯಾಂಕ್ ನೋಟಿಸ್,  ಸಣ್ಣ ವ್ಯಾಪಾರಿಗಳು ಕಂಗಾಲು ಮರುಪಾವತಿ ಕಷ್ಟ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
