ನವದೆಹಲಿ:2019ರ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಪ್ಪಿತಸ್ಥರೆಂದು ಗುಜರಾತಿನ ಸೂರತ್ ನ್ಯಾಯಾಲಯ ಗುರುವಾರ ಇಂದು ತೀರ್ಪು ನೀಡಿದೆ.
2019 ರ ಲೋಕಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಕೋಲಾರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ಎಲ್ಲಾ ಕಳ್ಳರಲ್ಲೂ ‘ಮೋದಿ’ ಉಪನಾಮ ಸಾಮಾನ್ಯವಾಗಿ ಯಾಕಿದೆ?” ಎಂದು ಕೇಳಿದ್ದರು.
ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ರಾಹುಲ್ ಗಾಂಧಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಚ್ಎಚ್ ವರ್ಮಾ ಅವರ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದ್ದು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಟ್ಟು ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಿತು ಎಂದು ಕಾಂಗ್ರೆಸ್ ನಾಯಕನ ವಕೀಲ ಬಾಬು ಮಂಗುಕಿಯಾ ಹೇಳಿದರು.
ಇದನ್ನೂ ಓದಿ:ರಾಹುಲ್ ಗಾಂಧಿಯ ಕಾರ್ಯಕ್ರಮಕ್ಕೆ ಹೋಗಿದ್ದ ವ್ಯಕ್ತಿ ಸಾವು; ಊಟಕ್ಕೆಂದು ಹೋದವ ಮರಳಲೇ ಇಲ್ಲ!
ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ರಾಹುಲ್ ಗಾಂಧಿ ಅವರ ಸ್ಥಾನಮಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಲೋಕಸಭಾ ಸ್ಪೀಕರ್ ಕಚೇರಿಯ ಮೂಲಗಳು “ಅವರನ್ನು ಅನರ್ಹಗೊಳಿಸುವ ದೂರಿನೊಂದಿಗೆ ಸ್ಪೀಕರ್ ಕಚೇರಿಗೆ ಆದೇಶ ಬರಲಿ. ಆದೇಶದೊಂದಿಗೆ ದೂರು ಟೇಬಲ್ ಮುಂದೆ ಬಂದರೆ, ಕಾನೂನು ತಜ್ಞರೊಂದಿಗೆ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ’ ಎಂದು ಹೇಳಿವೆ.
ಅಪರಾಧಕ್ಕಾಗಿ ಶಿಕ್ಷೆಗೊಳಗಾದ ಸಂಸದರ ಅನರ್ಹತೆಯು ಎರಡು ಸಂದರ್ಭಗಳಲ್ಲಿ ಸಂಭವಿಸಬಹುದು. ಮೊದಲನೆಯದಾಗಿ,1951 ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 (1) ರಲ್ಲಿ ಅವರು ಶಿಕ್ಷೆಗೊಳಗಾದ ಅಪರಾಧವನ್ನು ಪಟ್ಟಿ ಮಾಡಲಾಗಿದೆ. ಇದು ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಲಂಚ ಮತ್ತು ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಅಥವಾ ವ್ಯಕ್ತಿತ್ವದಂತಹ ಕೆಲವು ನಿರ್ದಿಷ್ಟ ಅಪರಾಧಗಳನ್ನು ಒಳಗೊಂಡಿದೆ. ಮಾನಹಾನಿ ಈ ಪಟ್ಟಿಯಲ್ಲಿ ಬರುವುದಿಲ್ಲ.
ಎರಡನೆಯದಾಗಿ, ಶಾಸಕನು ಇತರ ಯಾವುದೇ ಅಪರಾಧಕ್ಕಾಗಿ ಎರಡು ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆಗೊಳಗಾದರೆ. ಆರ್.ಪಿ.ಎ ಸೆಕ್ಷನ್ 8(3)ರ ಪ್ರಕಾರ ಸಂಸದರು ತಪ್ಪಿತಸ್ಥರೆಂದು ಸಾಬೀತಾದರೆ ಅವರನ್ನು ಅನರ್ಹಗೊಳಿಸಬಹುದು ಮತ್ತು ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು.
ಸೆಕ್ಷನ್ 8 (4) ಪ್ರಕಾರ, ಅನರ್ಹತೆಯು ಶಿಕ್ಷೆಯ ದಿನಾಂಕದಿಂದ “ಮೂರು ತಿಂಗಳು ಕಳೆದ ನಂತರ” ಮಾತ್ರ ಜಾರಿಗೆ ಬರುತ್ತದೆ. ಆ ಅವಧಿಯೊಳಗೆ, ರಾಹುಲ್ ಗಾಂಧಿ ಶಿಕ್ಷೆಯ ವಿರುದ್ಧ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬಹುದು.
ಆದರೆ, ಶಿಕ್ಷೆಯ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದರೆ ಅನರ್ಹತೆಗೆ ಕಾನೂನು ಆರಂಭದಲ್ಲಿ ವಿರಾಮವನ್ನು ನೀಡಿದ್ದರೂ, ‘ಲಿಲ್ಲಿ ಥಾಮಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ 2013 ರ ಐತಿಹಾಸಿಕ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ಆರ್ಪಿಎಯ ಸೆಕ್ಷನ್ 8 (4) ಅನ್ನು ಅಸಾಂವಿಧಾನಿಕ ಎಂದು ರದ್ದುಗೊಳಿಸಿತ್ತು.
ಇದರರ್ಥ ಕೇವಲ ಮೇಲ್ಮನವಿ ಸಲ್ಲಿಸಿದರೆ ಸಾಕಾಗುವುದಿಲ್ಲ. ಶಿಕ್ಷೆಗೊಳಗಾದ ಸಂಸದರು ವಿಚಾರಣಾ ನ್ಯಾಯಾಲಯದ ಶಿಕ್ಷೆಯ ವಿರುದ್ಧ ನಿರ್ದಿಷ್ಟ ತಡೆಯಾಜ್ಞೆಯನ್ನು ಪಡೆಯಬೇಕು. ವಿಶೇಷವೆಂದರೆ, ಈ ತಡೆಯಾಜ್ಞೆ ಕೇವಲ ಸಿಆರ್ಪಿಸಿ ಸೆಕ್ಷನ್ 389 ರ ಅಡಿಯಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸುತ್ತಾ ಅದೇ ಸಂದರ್ಭದಲ್ಲಿ ಶಿಕ್ಷೆಗೆ ತಡೆಯಾಜ್ಞೆಯಾಗಿ ಕೆಲಸ ಮಾಡುತ್ತದೆ.
ಸಿಆರ್ಪಿಸಿಯ ಸೆಕ್ಷನ್ 389 ರ ಅಡಿಯಲ್ಲಿ, ಮೇಲ್ಮನವಿ ನ್ಯಾಯಾಲಯವು ಮೇಲ್ಮನವಿ ಬಾಕಿ ಇರುವಾಗ ಅಪರಾಧಿಯ ಶಿಕ್ಷೆಯನ್ನು ಅಮಾನತುಗೊಳಿಸಬಹುದು. ಇದು ಅಪೀಲುದಾರನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದಕ್ಕೆ ಸಮಾನವಾಗಿದೆ.(ಏಜೆನ್ಸೀಸ್)
Boggled by this. Defamation law 101 is that references to a generic class of persons are not actionable unless an individual can show a direct reference to *themselves.*It’s one of the first things you learn in defamation law class.https://t.co/caHbWoWmc2
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + twenty =
Remember me
