ತಿರುವನಂತಪುರಂ:ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗಲು ಅಗತ್ಯವಾದ ಗುಣಗಳನ್ನು ಹೊಂದಿರುವ ಹಲವಾರು ಮಹಿಳಾ ನಾಯಕರಿದ್ದಾರೆ.ಮುಂಬರುವ 10 ವರ್ಷಗಳಲ್ಲಿ ಶೇಕಡಾ 50ರಷ್ಟು ಮಹಿಳೆಯರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಗುರಿಯನ್ನು ಪಕ್ಷ ಇಟ್ಟುಕೊಳ್ಳಬೇಕು. ಸಂಘಟನೆಯ ಸಂರಚನೆಯಲ್ಲಿ ಮಹಿಳೆಯರನ್ನು ಸಕ್ರಿಯವಾಗಿ ಉತ್ತೇಜಿಸಬೇಕು…
ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಗಾಂಧಿ ಅವರು ಎರ್ನಾಕುಲಂನಲ್ಲಿ ‘ಉತ್ಸಾಹ” ಎಂಬ ಕೇರಳ ಮಹಿಳಾ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಇಂತಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದು ನಮಗೆ ಒಬ್ಬ ಮಹಿಳಾ ಮುಖ್ಯಮಂತ್ರಿ ಇಲ್ಲ. ಆದರೆ, ಕಾಂಗ್ರೆಸ್ ಪಕ್ಷದ ಅನೇಕ ಮಹಿಳೆಯರು ಉತ್ತಮ ಮುಖ್ಯಮಂತ್ರಿಯಾಗುವ ಗುಣಗಳನ್ನು ಹೊಂದಿದ್ದಾರೆಂದು ನನಗೆ ತಿಳಿದಿದೆ ಎಂದು ರಾಹುಲ್​ ಹೇಳಿದರು.
ಭಾರತದ ರಾಜಕೀಯ ರಚನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದ ರಾಹುಲ್​, ಮುಂಬರುವ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಪ್ರತಿ ಹಂತದಲ್ಲೂ ಹೆಚ್ಚಿನ ಮಹಿಳೆಯರು ಭಾಗವಹಿಸುವುದನ್ನು ಖಚಿತಪಡಿಸಲಾಗುವುದು. ಕಾಂಗ್ರೆಸ್‌ಗೆ ಉತ್ತಮ ಗುರಿ ಎಂದರೆ ಇಂದಿನಿಂದ ಹತ್ತು ವರ್ಷಗಳಲ್ಲಿ ನಮ್ಮ ಮುಖ್ಯಮಂತ್ರಿಗಳಲ್ಲಿ ಶೇಕಡಾ 50ರಷ್ಟು ಮಹಿಳೆಯರು ಇರಬೇಕು ಎಂಬುದು ಎಂದೂ ಅವರು ಹೇಳಿದರು.
ಪ್ರಧಾನ ಮಂತ್ರಿಗಳಾಗಿ ಮತ್ತು ಪಕ್ಷದ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದಲ್ಲಿ ಈ ಹಿಂದೆ ಮಹಿಳೆಯರು ನಿರ್ವಹಿಸಿದ ಪ್ರಮುಖ ಪಾತ್ರಗಳನ್ನು ವಿವರಿಸಿದ ರಾಹುಲ್​, ಮಹಿಳೆಯರು ದೇಶದಲ್ಲಿ ಅಧಿಕಾರ ಹಂಚಿಕೊಳ್ಳಬೇಕು ಎಂದು ಕಾಂಗ್ರೆಸ್ ಮೂಲಭೂತವಾಗಿ ನಂಬುತ್ತದೆ. ಮಹಿಳೆಯರು ವಾಸ್ತವವಾಗಿ, ಅನೇಕ ವಿಧಗಳಲ್ಲಿ ಪುರುಷರಿಗಿಂತ ಶ್ರೇಷ್ಠ ಎಂದರು.
“ಅವರಿಗೆ ಪುರುಷರಿಗಿಂತ ಹೆಚ್ಚು ತಾಳ್ಮೆ ಇದೆ, ಅವರು ಪುರುಷರಿಗಿಂತ ದೀರ್ಘಾವಧಿಯ ದೃಷ್ಟಿ ಹೊಂದಿದ್ದಾರೆ, ಅವರು ಹೆಚ್ಚು ಸಂವೇದನಾಶೀಲರು, ಅವರು ಹೆಚ್ಚು ಸಹಾನುಭೂತಿ ಹೊಂದಿದ್ದಾರೆ. ಇಂದು ನಾವು ಒಬ್ಬ ಮಹಿಳಾ ಮುಖ್ಯಮಂತ್ರಿ ಹೊಂದಿಲ್ಲ” ಎಂದು ರಾಹುಲ್​ ಹೇಳಿದರು.
ಹಿಂದೂ ಬಲಪಂಥೀಯ ರಾಷ್ಟ್ರೀಯತಾವಾದಿ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್​, ಆರ್​ಎಸ್​ಎಸ್​ ಸಂಘಟನೆಯಲ್ಲಿ ಮಹಿಳೆಯರನ್ನು ಸೇರಿಸಿಕೊಳ್ಳದಿರುವುದನ್ನು ಟೀಕಿಸಿದರು. ಇದು ಕಾಂಗ್ರೆಸ್ ಅನ್ನು ಬಿಜೆಪಿಯಿಂದ ಪ್ರತ್ಯೇಕಿಸುತ್ತದೆ ಎಂದು ಪ್ರತಿಪಾದಿಸಿದರು.
“ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಕೇಂದ್ರೀಯ ಹೋರಾಟವು ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದರ ಕುರಿತಾಗಿದೆ. ತನ್ನ ಸಂಪೂರ್ಣ ಇತಿಹಾಸದಲ್ಲಿ, ಆರ್​ಎಸ್​ಎಸ್​ ಮಹಿಳೆಯರ ಹಕ್ಕುಗಳಿಗೆ ಅವಕಾಶ ನೀಡಿಲ್ಲ. ಆರ್​ಎಸ್​ಎಸ್​ ಸಂಪೂರ್ಣವಾಗಿ ಪುರುಷ ಸಂಘಟನೆಯಾಗಿದೆ. ಮಹಿಳೆಯರಿಗೆ ಆಯ್ಕೆ ಮಾಡಲು ಅವಕಾಶ ನೀಡಬೇಕು ಎಂದು ನಾವು ನಂಬುತ್ತೇವೆ” ಎಂದು ರಾಹುಲ್​ ಹೇಳಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಅನುಮೋದನೆ ಪಡೆದಿದ್ದರೂ ಮಹಿಳಾ ಮೀಸಲಾತಿ ಮಸೂದೆಯ ಅನುಷ್ಠಾನವನ್ನು ತಡೆಹಿಡಿಯುತ್ತಿದೆ ಎಂದು ಗಾಂಧಿ ಟೀಕಿಸಿದರು. “ಸಂಸತ್ತಿನಲ್ಲಿ ಅಂಗೀಕಾರವಾದ ಹತ್ತು ವರ್ಷಗಳ ನಂತರ ಜಾರಿಗೆ ಬರಲಿದೆ ಎನ್ನುವ ಬೇರಾವ ಮಸೂದೆಯನ್ನು ನಾನು ನೋಡಿಲ್ಲ. ಅಂಗೀಕರಿಸಿದ ಹತ್ತು ವರ್ಷಗಳ ನಂತರ ಬಿಜೆಪಿ ಜಾರಿಗೆ ತರುತ್ತಿರುವ ಏಕೈಕ ಮಸೂದೆಯು ಮಹಿಳಾ ಶಕ್ತಿಯದ್ದಾಗಿದೆ ” ಎಂದು ಅವರು ಹೇಳಿದರು.
“ನಾನು ಬಲಪಂಥೀಯ ನಾಯಕರ ಹೇಳಿಕೆಗಳನ್ನು ಕೇಳಿದ್ದೇನೆ. ಅಲ್ಲಿ ಅವರು ಹೇಳುವ ಪ್ರಕಾರ ಹುಡುಗಿ ಸರಿಯಾಗಿ ಬಟ್ಟೆ ಧರಿಸಿದ್ದರೆ ಅತ್ಯಾಚಾರಕ್ಕೆ ಒಳಗಾಗುತ್ತಿರಲಿಲ್ಲ. ಇದು ದೇಶದ ಪ್ರತಿಯೊಬ್ಬ ಮಹಿಳೆಗೆ ಮಾಡಿದ ಅವಮಾನ. ಇದು ಬಲಿಪಶುವನ್ನು ವಿಲನ್ ಆಗಿ ಪರಿವರ್ತಿಸುತ್ತದೆ. ಇದು ನಮ್ಮ ಮತ್ತು ಆರ್​ಎಸ್​ಎಸ್​ ನಡುವಿನ ವ್ಯತ್ಯಾಸವಾಗಿದೆ” ಎಂದು ಗಾಂಧಿ ಹೇಳಿದರು.
ಎಕ್ಸಿಟ್​ ಪೋಲ್​ ನಂತರ ಮರಭೂಮಿ ರಾಜ್ಯದಲ್ಲಿ ರಾಜಕೀಯ ತಾಪಮಾನ ಉಲ್ಬಣ: ಮಿತ್ರರ ಅನ್ವೇಷಣೆಯಲ್ಲಿ ಬಿಜೆಪಿ, ಕಾಂಗ್ರೆಸ್​

ತೆಲಂಗಾಣ ವಿಧಾನಸಭೆ ಚುನಾವಣೆ: ಮತದಾನ ಪ್ರಮಾಣ ಶೇ.70.60

ಏನಿದು ಪಕಡವಾ ವಿವಾಹ?: ಗನ್​ ಪಾಯಿಂಟ್​ನಲ್ಲಿ ಶಿಕ್ಷಕನಿಗೆ ಬಲವಂತದ ಮದುವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − six =
Remember me
