ಹೈದರಾಬಾದ್​:ಎರಡು ರಾಜ್ಯಗಳಿಗೆ ಸೀಮಿತವಾಗಿದ್ದ ತೆಲುಗು ಚಿತ್ರರಂಗವನ್ನು ಜಗತ್ತಿಗೆ ಪರಿಚಯಿಸಿದ ಕನ್ನಡಿಗ ರಾಜಮೌಳಿ ಭಾರತೀಯ ಚಿತ್ರರಂಗದ ರಾಜನೇ ಸರಿ. ಕೇವಲ 12 ಸಿನಿಮಾ ಮಾಡಿದ್ದರೂ ಸುಮಾರು 158 ಕೋಟಿ.ರೂ. ಒಡೆಯ ಈ “ರಾಜ”ಮೌಳಿ ಎನ್ನಲಾಗುತ್ತಿದೆ.
ಭಾರತೀಯ ಚಿತ್ರರಂಗದಲ್ಲಿ ಚಲನಚಿತ್ರವೊಂದು ಸಾವಿರಾರು ಕೋಟಿ ರೂ. ಮಾಡುವ ರುಚಿ ತೋರಿಸಿದವರೇ ರಾಜಮೌಳಿ. ಅವರು ತಮ್ಮ ನಿಘಂಟಿನಿಂದ ಫ್ಲಾಪ್ ಪದವನ್ನು ತೆಗೆದು ಹಾಕಿದ್ದಾರೆಂದರೆ ತಪ್ಪಾಗದು. ಟಾಲಿವುಡ್ ತಾರೆಯರು ಕನಸಿನಲ್ಲೂ ಊಹಿಸಿರದ ತಮ್ಮ ಸಿನಿಮಾದ ಮೂಲಕ ಆಸ್ಕರ್ ಪ್ರಶಸ್ತಿ ಗಳಿಸಿದರು. ಇಂದು (ಅಕ್ಟೋಬರ್ 10) ರಾಜಮೌಳಿ ಹುಟ್ಟುಹಬ್ಬ. ಈ ಸಂದರ್ಭದಲ್ಲಿ, ಅವರು ತಮ್ಮ ಜೀವನದ ವೈಶಿಷ್ಟ್ಯಗಳೊಂದಿಗೆ ಎಷ್ಟು ಆಸ್ತಿಯನ್ನು ಗಳಿಸಿದ್ದಾರೆ ಎಂಬುದನ್ನು ನೋಡೋಣ.
ಇದನ್ನೂ ಓದಿ:ನನ್ನನ್ನು ಎಷ್ಟು ಅಳಿಸುತ್ತೀರಿ ಎಂದ ಬಿಗ್​ ಬಿ; ಕೆಬಿಸಿ ವೇದಿಕೆ ಮೇಲೆಯೇ ಅಮಿತಾಭ್ ಕಣ್ಣೀರು
ಕಿರುತೆರೆ ಧಾರಾವಾಹಿ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದ ರಾಜಮೌಳಿ, ‘ಸ್ಟೂಡೆಂಟ್ ನಂ.1’ ಚಿತ್ರದ ಮೂಲಕ ಚಲನಚಿತ್ರ ನಿರ್ದೇಶಕರಾದರು. ಆ ನಂತರ ಚಿತ್ರದಿಂದ ಚಿತ್ರಕ್ಕೆ ತಮ್ಮ ಮಟ್ಟವನ್ನು ಹೆಚ್ಚಿಸಿಕೊಂಡು ತೆಲುಗು ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದರು.
ಅವರು ‘ಬಾಹುಬಲಿ’ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ವಿಧ್ವಂಸಕತೆಯನ್ನು ಸೃಷ್ಟಿಸಿದರು. ‘RRR’ ಮೂಲಕ ಆಸ್ಕರ್ ಶ್ರೇಣಿಗೆ ಹೋದರು. ಇದುವರೆಗೆ 12 ಚಿತ್ರಗಳನ್ನು ಮಾಡಿರುವ ರಾಜಮೌಳಿ ದೇಶಾದ್ಯಂತ ಅತ್ಯುತ್ತಮ ಮನ್ನಣೆ ಗಳಿಸಿದ್ದಾರೆ. ಗಳಿಸಿದ ಹಣದಲ್ಲಿ ಮನೆ, ಕಾರು, ಬಂಗಲೆ ಮತ್ತಿತರ ಆಸ್ತಿಗಳನ್ನೂ ಹೊಂದಿ ಕುಟುಂಬದೊಂದಿಗೆ ಸುಂದರ ಜೀವನ ಕಟ್ಟಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸಿನಿ ಜಗತ್ತು ಬಿಟ್ಟರೆ ಹೊರಗಡೆ ಹೆಚ್ಚು ಕಾಣಿಸದ ರಾಜಮೌಳಿ, ಹೈದರಾಬಾದ್ ನ ಮಣಿಕೊಂಡದಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಅಲ್ಲದೆ, ಹೊರವಲಯದಲ್ಲಿ ತೋಟದ ಮನೆಯ ಜತೆಗೆ ಜಮೀನನ್ನೂ ಹೊಂದಿದ್ದಾರೆ. ಇನ್ನು ವಿವಿಧ ನಗರಗಳಲ್ಲಿ ಫ್ಲಾಟ್‌ಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲದರ ಹೊರತಾಗಿ ಅವರ ಬಳಿ ಬಿಎಂಡಬ್ಲ್ಯು 7 ಸಿರೀಸ್, ರೇಂಜ್ ರೋವರ್, ವೋಲ್ವೋ ಮತ್ತಿತರ ದುಬಾರಿ ಕಾರುಗಳಿವೆ. ಒಟ್ಟು ಆಸ್ತಿ 158 ಕೋಟಿ ರೂ.ವರೆಗೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಾಹುಬಲಿ ಮತ್ತು ಆರ್‌ಆರ್‌ಆರ್ ಚಿತ್ರಗಳ ಮೂಲಕ ನಿರೀಕ್ಷೆಗೂ ಮೀರಿ ರಾಜಮೌಳಿ ಬೆಳೆದು ನಿಂತಿದ್ದಾರೆ. ಇದರ ನಡುವೆ ರಾಜಮೌಳಿ ತಮ್ಮ ಮುಂದಿನ ಚಿತ್ರವನ್ನು ಸೂಪರ್‌ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಮಾಡಲಿದ್ದಾರೆ. ಈ ಯೋಜನೆಯನ್ನು ನಾಲ್ಕು ವರ್ಷದ ಹಿಂದೆಯೇ ಘೋಷಿಸಲಾಗಿದ್ದರೂ, ಮುಂದಿನ ವರ್ಷ ಏಪ್ರಿಲ್‌ನಲ್ಲಿ ಸೆಟ್‌ ಏರಲಿದೆ ಎಂದು ಹೇಳಲಾಗುತ್ತಿದೆ. ಇದೊಂದು ಜಂಗಲ್ ಆಕ್ಷನ್ ಸಾಹಸ ವಿಷಯ ಹೊಂದಿದ ಕಥೆಯಾಗಿದೆ.
ಫೆಬ್ರವರಿಯಲ್ಲಿ ಮಾಲಿವುಡ್​​ ಮೆಗಾಸ್ಟಾರ್ ಫ್ಯಾನ್ಸ್​ಗೆ​ ಡಬಲ್ ಧಮಾಕಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
