ತಲೈವಾ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಆಗಸ್ಟ್‌ 10ರಂದು ಬಿಡುಗಡೆಯಾಗಿ ಈಗಾಗಲೆ 11 ದಿನ ಯಶಸ್ವಿ ಪ್ರದರ್ಶನ ಕೊಟ್ಟು 500 ಕೋಟಿ ಕಲೆಕ್ಷನ್ ಮಾಡಿದೆ. ಇದೇ ಸಮಯದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಭೋಳ ಶಂಕರ್ ಸಿನಿಮಾ ಮೊದಲ ದಿನವೇ ಹೀನಾಯವಾಗಿ ಸೋತಿದೆ.
2015ರಲ್ಲಿ ತೆರೆ ಕಂಡ ವೇದಾಲಂ ಸಿನಿಮಾದ ರಿಮೇಕ್ ಸಿನಿಮಾ ಈ ಭೋಳ ಶಂಕರ್ ಹೀಗಾಗಿ ಜನರಿಗೆ ಅಷ್ಟಾಗಿ ಕ್ಯೂರಿಯಾಸಿಟಿ ಅಲ್ಲ ಅನ್ಸುತ್ತೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಿಟ್ ಆಂಡ್ ಫ್ಲಾಪ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.
ವಿಜಯ ದೇವರಕೊಂಡ ಹೇಳಿದ್ದೇನು?ರಜನಿ ಸರ್ ಅವರು ಸತತವಾಗಿ 6 ಫ್ಲಾಪ್ ಚಿತ್ರಗಳನ್ನು ನೀಡಡಬಹುದು ಆದರೂ ಅವರ ಜೈಲರ್ ಸಿನಿಮಾ 500 ಕೋಟಿ ಕೆಲೆಕ್ಷನ್ ಮಾಡಿ ತೋರಿಸಿದ್ದಾರೆ. ಅದನ್ನು ನಾವೆಲಾ ಮುಚ್ಕೊಂಡು ನೋಡಬೇಕು. ಅದೇ ರೀತಿ ಚಿರಂಜೀವಿ ಸರ್ ಸಹ ಸತತ ಆರೇಳು ಫ್ಲಾಪ್ ಸಿನಿಮಾಗಳನ್ನು ಹೊಂದಿರಬಹುದು ಆದರೆ ಅವರು ಸರಿಯಾಗಿ ಯೋಚಿಸಿ ಚಿತ್ರ ಮಾಡಿದರೆ ಈ ಬಾರಿ ಸಂಕ್ರಾಂತಿ ಅಷ್ಟರಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿ ಚಿತ್ರ ಕೊಡುತ್ತಾರೆ. ಸರಿಯಾದ ನಿರ್ದೇಶಕರು ಸಿಕ್ಕರೆ ಅವರ ಎನರ್ಜಿಯನ್ನು ಮ್ಯಾಚ್ ಮಾಡಿದರೆ ಒಳ್ಳೆಯ ಚಿತ್ರ ಬರುತ್ತೆ’ ಎಂದು ಖುಷಿ ಪ್ರೆಸ್‌ಮೀಟ್‌ನಲ್ಲಿ ವಿಜಯ್ ದೇವರಕೊಂಡ ಹೇಳಿದ್ದಾರೆ.
ವಿಜಯ್​​​ಗೆ ವಾರ್ನಿಂಗ್​ ಕೊಟ್ಟ ತಲೈವಾ-ಚಿರಂಜೀವಿ ಫ್ಯಾನ್ಸ್​​ಈಗಷ್ಟೇ ಚಿತ್ರರಂಗಕ್ಕೆ ಕಾಲಿಟ್ಟು ಮೊದಲ ಸಿನಿಮಾ ಹಿಟ್ ಆಯ್ತು ಅಂತ ಮೆರೆಯೇಬೇಡ…ಚಿರಂಜೀವಿ ಮಾಡಿರುವ ಒಂದೆರಡು ಸಿನಿಮಾ ಎನರ್ಜಿ ಕೂಡ ನಿನಗಿಲ್ಲ ಸುಮ್ಮನೆ ಮಾತನಾಡಬೇಡ. ಸೀನಿಯರ್ಸ್‌ಗೆ ಗೌರವ ಕೊಡದಿದ್ದರೆ ಹೊರ ಕಳುಹಿಸಿ ಬಿಡುತ್ತೀವಿ ಹುಷಾರ ಎಂದು ಫ್ಯಾನ್ಸ್‌ಗಳು ವಾರ್ನಿಂಗ್ ಕೊಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 6 =
Remember me
