ನವದಹಲಿ:ಕರೊನಾ ಸೋಂಕಿತರಿಗೆ ಬಳಸುತ್ತಿರುವ ರೆಮ್​ಡಿಸಿವಿರ್ ಔಷಧಿಗೆ ಈಗ ಭಾರೀ ಡಿಮ್ಯಾಂಡ್ ಬಂದಿದೆ. ಆದರೆ, ಈ ಔಷಧಿ ಬಗ್ಗೆ ದೆಹಲಿ ಏಮ್ಸ್​ ವೈದ್ಯರು ಆಘಾತಕಾರಿ ಅಂಶವನ್ನು ಪ್ರಸ್ತಾಪಿಸಿದ್ದಾರೆ.
ದೆಹಲಿ ಏಮ್ಸ್​ ಆಸ್ಪತ್ರೆ ನಿರ್ದೇಶಕ ರಂದೀಪ್ ಗುಲೇರಿಯಾ ಅವರು ಈ ಬಗ್ಗೆ ಮಾತನಾಡಿದ್ದು, ಶೇ 90ರಷ್ಟು ಸೋಂಕಿತ ಪ್ರಕರಣಗಳಲ್ಲಿ ರೆಮ್​ಡಿಸಿವಿರ್ ಔಷಧಿಯ ಅಗತ್ಯವಿಲ್ಲ. ಒಂದು ವೇಳೆ ಇವರು ಈ ಔಷಧಿ ತೆಗೆದುಕೊಂಡರೆ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂದು ಎಚ್ಚರಿಸಿದ್ದಾರೆ. ಅನವಶ್ಯಕವಾಗಿ ಕರೊನಾದ ಮೆದು ಲಕ್ಷಣಗಳುಳ್ಳ ರೋಗಿಗಳಿಗೆ ರೆಮ್​ಡಿಸಿವಿರ್​ನ್ನು ಬಳಸಿದರೆ ಔಷಧಿ ತೆಗೆದುಕೊಂಡ ರೋಗಿಗಳು ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಲ್ಲದೇ ಕೊರೊನಾ ಬಂದ ತಕ್ಷಣ ಆಕ್ಸಿಜನ್ ಎಂದು ಓಡಿಹೋಗುವುದು, ಆಕ್ಸಿಜನ್ ಸಂಗ್ರಹಿಸುವುದು, ರೆಮ್​ಡಿಸಿವಿರ್ ಬೇಕು ಎಂದು ಒತ್ತಾಯಿಸುವುದು ಸರಿಯಲ್ಲ. ಇದು ಅನವಶ್ಯಕ. ಒಂದು ವೇಳೆ ಆಕ್ಸಿಮೀಟರ್ 94ಕ್ಕಿಂತ ಕೆಳಗೆ ಇಳಿಯತೊಡಗಿದರೆ ವೈದ್ಯರ ಸಲಹೆ ಮೇರೆಗೆ ಆಕ್ಸಿಜನ್ ಹಾಗೂ ರೆಮ್​ಡಿಸಿವಿರ್ ಬಳಸಬಹುದು. ಆದರೆ, ರೆಮ್​ಡಿಸಿವಿರ್ ಮ್ಯಾಜಿಕ್ ಮಾಡುವುದಿಲ್ಲ ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.
ಆಕ್ಸಿಮೀಟರ್ 94ಕ್ಕಿಂತ ಮೇಲೆ ಇದ್ದರೆ ಕರೊನಾ ಪೀಡಿತರು ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲೇ ಐಸೋಲೇಷನ್​ಗೆ ಒಳಗಾಗಬಹುದು. ಉತ್ತಮ ಆಹಾರ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ಪಡೆದು ಮನೆಯಲ್ಲೇ ಎಚ್ಚರಿಕೆಯಿಂದ ಇರಬೇಕು ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.
ರೋಗಿಗಳ ಸಂಬಂಧಿಕರಂತೆ ಸೋಗು ಹಾಕಿ ರೆಮ್​ಡೆಸಿವಿರ್ ಸಂಗ್ರಹಿಸಿದ ಕಾಳಸಂತೆಕೋರರು !

ಗರ್ಭಿಣಿ ಹೆಂಡತಿಗಾಗಿ ಆಕ್ಸಿಜನ್​ ಸಿಲಿಂಡರ್​ ಇದ್ದ ಆ್ಯಂಬುಲೆನ್ಸ್​ನ್ನೇ ಹೈಜಾಕ್ ಮಾಡಿದ ಗಂಡ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 15 =
Remember me
