ನಟ ವಿಜಯ ರಾಘವೇಂದ್ರ ಪತ್ನಿ, ನಿರ್ಮಾಪಕಿ ಸ್ಪಂದನಾ ಹೃದಯಾಘಾತದಿಂದ ನಿಧನ ಹೊಂದಿರುವ ಸುದ್ದಿ ಸ್ಯಾಂಡಲ್ ವುಡ್ ಗೆ ಶಾಕ್ ನೀಡಿದೆ. ಈ ರೀತಿಯ ಹೃದಯಾಘಾತಗಳು ಯಾಕೆ ಆಗುತ್ತಿವೆ ಎನ್ನುವ ಚರ್ಚೆ ಕೂಡ ನಡೆದಿದೆ. ಈ ಮಧ್ಯ ಮಲಯಾಳಂ ಸಿನಿಮಾ ರಂಗದಲ್ಲೂ ಆತಂಕ ಮನೆಮಾಡಿದೆ.ಮಲಯಾಳಂ ಸಿನಿಮಾ ರಂಗದ ಖ್ಯಾತ ನಿರ್ದೇಶಕ ಸಿದ್ದಕಿ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಆಗಸ್ಟ್‌ 7ರಂದು ಸುಮಾರು 3ಗಂಟೆ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದರು. ನ್ಯುಮೋನಿಯಾ ಮತ್ತು ಯಕೃತ್ತಿನ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಸಿದ್ದಿಕಿ ಹೃದಯಾಘಾತದಿಂದ ಅಗಸ್ಟ್‌ 8ರಂದು ಕೊನೆಯುಸಿರೆಳೆದಿದ್ದಾರೆ.
Extracorporeal Membrane Oxygenation ಸಹಾಯದಿಂದ ಸಿದ್ದಿಕಿ ಉಸಿರಾಡುತ್ತಿದ್ದರು. ಗಂಭೀರ ಸ್ಥಿತಿ ಪರಿಗಣಿಸಿ ಮುಂದೆ ಏನು ಮಾಡಬೇಕು ಎಂದು ವೈದ್ಯರು ಚರ್ಚೆ ಮಾಡುವಷ್ಟರಲ್ಲಿ ಅಗಲಿದ್ದಾರೆ. 1989ರಲ್ಲಿ ಸಿದ್ದಿಕಿ ರಾಮಾಜಿ ರಾವ್ ಸ್ಪೀಕಿಂಗ್ ಹೆಸರಿನ ಮಲಯಾಳಂ ಸಿನಿಮಾ ನಿರ್ದೇಶನ ಮಾಡಿದರು. ಮೊದಲ ಚಿತ್ರದಲ್ಲಿ ಅಪಾರ ಸಂಖ್ಯೆಯಲ್ಲಿ ಮೆಚ್ಚುಗೆ ಪಡೆದುಕೊಂಡರು. ಸಿನಿಮಾ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿದ ಸಿದ್ದಿಕಿ ನಿರ್ದೇಶಕರಾಗಿ ಮಾತ್ರವಲ್ಲದೆ ಸ್ಕ್ರಿನ್‌ರೈಟರ್‌ ಆಗಿಯೂ ಕೆಲಸ ಮಾಡಿದ್ದಾರೆ. ಅದರಲ್ಲಿ ‘ಪಪ್ಪನ್ ಪ್ರಿಯಪ್ಪೆಟ್ಟ ಪಪ್ಪನ್’ ಮತ್ತು ‘ಬಿಗ್ ಬ್ರದರ್’ ಹೆಸರು ಮಾಡಿರುವ ಸಿನಿಮಾಗಳು.
ನೋಡಲು ಸಖತ್ ಸಾಫ್ಟ್‌ ವ್ಯಕ್ತಿತ್ವದವರಾಗಿದ್ದರೂ ಅವರಲ್ಲಿ ಒಂದು ತಮಾಷೆ ಮಾಡುವ ಗುಣವಿತ್ತು. ನಮ್ಮ ಚಿತ್ರರಂಗಕ್ಕೆ ಅದ್ಭುತ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ನನ್ನ ದಿನದ ಮಾತುಕಥೆಯಲ್ಲಿ ಅವರು ಆಗಾಗ ಪಾಪ್ ಕಲ್ಚರ್‌ನ ತರುತ್ತಿದ್ದರು. ಇದು ನಮಗೆ ದೊಡ್ಡ ನಷ್ಟ. ಈ ನೋವು ನಷ್ಟ ತಡೆದುಕೊಳ್ಳಲು ಸಿದ್ದಿಕಿ ಕುಟುಂಬಕ್ಕೆ ದೇವರು ಶಕ್ತಿ ಕೊಡಲಿ’ ಎಂದು ನಟ ದುಲ್ಕರ್ ಸಲ್ಮಾನ್ ಬರೆದಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
