ಬೆಂಗಳೂರು: ‘ಸಜ್ಜನರು ಮಾಡಬೇಕಾದ್ದು ಇಷ್ಟೇ.. ಸಮಯೋಚಿತ ಸಹಾಯ’. ಇಂಥದ್ದೊಂದು ಸಹಾಯವನ್ನು ಪೊಲೀಸ್​ ಕಮಿಷನರ್​ವೊಬ್ಬರು ಮಾಡಿದ್ದು ಅಕ್ಷರಶಃ ಸಜ್ಜನರೆನಿಸಿಕೊಂಡಿದ್ದಾರೆ.
ಹೀಗೆ ಸಜ್ಜನರೆನಿಸಿಕೊಂಡವರ ಹೆಸರೂ ಸಜ್ಜನರ್ ಎಂತಲೇ. ಹೌದು.. ಸೈಬರಾಬಾದ್​ನ ಪೊಲೀಸ್ ಕಮಿಷನರ್ ವಿ.ಸಿ.ಸಜ್ಜನರ್​ ಅವರ ಈ ಕೆಲಸ ಇದೀಗ ಮೆಚ್ಚುಗೆಗೆ ಪಾತ್ರವಾಗಿದೆ. ಸೆ. 16ರ ರಾತ್ರಿ ನಡೆದ ಘಟನೆಯೊಂದನ್ನು ಉಲ್ಲೇಖಿಸಿರುವ ಸಾಮಾಜಿಕ ಕಾರ್ಯಕರ್ತೆ ಸುನೀತಾ ಕೃಷ್ಣನ್ ಎಂಬುವವರು ಈ ಬಗ್ಗೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.
https://www.facebook.com/sunitha.krishnan.33/posts/5040300585995634
“ರಾತ್ರಿ ಬಾಂಗ್ಲಾದ ಹುಡುಗಿಯೊಬ್ಬಳನ್ನು ಹೈದರಾಬಾದ್​ಗೆ ಮಾನವ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಎಸ್​ಒಎಸ್​ ಕಾಲ್​ ಬಂದಿತ್ತು. ಬಾಂಗ್ಲಾದಿಂದ ರಾತ್ರಿ 9.30ಕ್ಕೆ ಸರಿಯಾಗಿ ಕರೆ ಬಂದಿದ್ದು, ತಕ್ಷಣ ಸೈಬರಾಬಾದ್​ನ ಪೊಲೀಸ್ ಕಮಿಷನರ್ ಸಜ್ಜನರ್ ಅವರನ್ನು ಸಂಪರ್ಕಿಸಿ, ವಿಷಯ ತಿಳಿಸಿದೆ. ಅಲ್ಲಿಂದ ಮುಂದಿನ ಮುಕ್ಕಾಲು ಗಂಟೆ ಸಮಯ ನಿಜಕ್ಕೂ ರೋಚಕವಾಗಿತ್ತು. ಕಾರ್ ಚೇಸ್​, ಆಡಿಯೋ ಮೆಸೇಜ್​ಗಳು, ಲೊಕೇಷನ್​ ಟ್ರ್ಯಾಕಿಂಗ್ ಇತ್ಯಾದಿ ಎಲ್ಲವೂ ಆ ಸಮಯದಲ್ಲಿ ನಡೆದು ಹೋಗಿದ್ದವು. ಅವೆಲ್ಲದರ ಪ್ರತಿಫಲವಾಗಿ 10.25ಕ್ಕೆ ಆ ಹುಡುಗಿ ರಕ್ಷಿಸಲ್ಪಟ್ಟಿದ್ದಳು. ಇದು ಸಜ್ಜನರ್ ಅವರ ತಂಡದ ತಕ್ಷಣದ ಸ್ಪಂದನೆ ಹಾಗೂ ತುರ್ತು ಕಾರ್ಯಾಚರಣೆ ಇಲ್ಲದಿದ್ದರೆ ಸಾಧ್ಯವಾಗಿರುತ್ತಿರಲಿಲ್ಲ” ಎಂದಿರುವ ಸುನೀತಾ ಕೃಷ್ಣನ್​ ಅವರು, ಸಜ್ಜನರ್​ ಮತ್ತವರ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + fourteen =
Remember me
