ನವದೆಹಲಿ:ಕರೊನಾ ವೈರಸ್ ದಾಂಗುಡಿಯಿಂದ ಈಗಾಗಲೇ ಎರಡು ಹಂತಗಳ ಲಾಕ್​ಡೌನ್​ ಕಂಡಿರುವ ದೇಶದಲ್ಲಿ ಆರ್ಥಿಕ ಚಟುವಟಿಕೆ ಪೂರ್ತಿ ಕುಸಿದಿದೆ. ಈಗ ಮೂರನೇ ಹಂತಕ್ಕೆ, ಅಂದರೆ ಮೇ 17ರವರೆಗೆ ಮತ್ತೆ ಲಾಕ್​ಡೌನ್ ವಿಸ್ತರಣೆಯಾಗಿದೆ.
ಕರೊನಾ ವೈರಸ್​ಗೆ ಸಂಬಂಧಪಟ್ಟಂತೆ ದೇಶವನ್ನು ಮೂರು ವಲಯಗಳನ್ನಾಗಿ ವಿಭಜಿಸಲಾಗಿದ್ದು ಹಸಿರು ವಲಯದಲ್ಲಿ ಲಾಕ್​ಡೌನ್​ ಸಡಿಲಿಕೆಗೆ ಕೇಂದ್ರ ಅವಕಾಶ ಕೊಟ್ಟಿದೆ. ಅದೂ ಕೆಲವು ಷರತ್ತುಗಳು ಅನ್ವಯ ಆಗುತ್ತವೆ ಮತ್ತು ಕಡ್ಡಾಯವಾಗಿ ಸಾಮಾಜಿಕ ಅಂತರ, ಸುರಕ್ಷತಾ ಕ್ರಮಗಳ ಪಾಲನೆ ಆಗಬೇಕು ಎಂದಿದೆ. ಆಯಾ ಜಿಲ್ಲೆಗಳ, ಸ್ಥಳೀಯ ಆಡಳಿತಕ್ಕೆ ಜವಾಬ್ದಾರಿ ವಹಿಸಿಕೊಡಲಾಗಿದೆ.
ಆದರೆ ಕರೊನಾ ಸೋಂಕು ಹೆಚ್ಚಾಗಿ ಕಂಡುಬಂದಿರುವ ರೆಡ್​ ಝೋನ್​ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕಡ್ಡಾಯ. ದೇಶಾದ್ಯಂತ ವಿಧಿಸಿರುವ ನಿರ್ಬಂಧದ ಜತೆಗೆ ಇನ್ನೂ ಕೆಲವು ಹೆಚ್ಚುವರಿ ನಿಷೇಧಗಳು ಇಲ್ಲಿರುತ್ತವೆ.ಹಾಟ್​ಸ್ಫಾಟ್ ಎನಿಸಿಕೊಂಡಿರುವ ಪ್ರದೇಶಗಳಲ್ಲಿ ಸೈಕಲ್​ ರಿಕ್ಷಾ, ಆಟೋ ರಿಕ್ಷಾ, ಟ್ಯಾಕ್ಸಿ, ಕ್ಯಾಬ್​ಗಳ ಚಾಲನೆ ಮಾಡುವಂತಿಲ್ಲ. ಹಾಗೇ ಬಸ್​ ಸಂಚಾರವೂ ಇರುವುದಿಲ್ಲ. ಕೌರಿಕ ಅಂಗಡಿಗಳು, ಸಲೂನ್​ಗಳು, ಸ್ಪಾಗಳು ತೆರೆಯುವಂತಿಲ್ಲ.
ಕಾರಿನಲ್ಲಿ ಮೂರೇ ಜನರಿಗೆ ಅವಕಾಶ:ಇನ್ನು ಈ ರೆಡ್​ ಝೋನ್​ಗಳಲ್ಲಿ ಕೆಲವು ಚಟುವಟಿಕೆಗಳಿಗೆ ಷರತ್ತಿನೊಂದಿಗೆ ಅನುಮತಿ ನೀಡಲಾಗಿದೆ. ಪಾಸ್​ ಹೊಂದಿರುವವರು, ಅನುಮತಿ ಪಡೆದವರು ಸಂಚಾರ ಮಾಡಬಹುದು. ಅದರಲ್ಲೂ ಕಾರು ಸೇರಿ ನಾಲ್ಕು ಚಕ್ರದ ವಾಹನಗಳಲ್ಲಿ ಡ್ರೈವರ್​ ಹೊರತು ಪಡಿಸಿ, ಇನ್ನಿಬ್ಬರು (ಒಟ್ಟು ಮೂವರು) ಮಾತ್ರ ಪ್ರಯಾಣ ಮಾಡಬಹುದು. ಬೈಕ್​ನಲ್ಲಿ ಇಬ್ಬರು ಸಂಚಾರ ಮಾಡುವಂತಿಲ್ಲ.
ಆರ್ಥಿಕ ಚಟುವಟಿಕೆ ಪ್ರಾರಂಭ, ನಿಯಮ ಪಾಲನೆ ಕಡ್ಡಾಯ:ನಗರ ಪ್ರದೇಶಗಳಲ್ಲಿರುವ ಕೈಗಾರಿಕಾ ಉದ್ಯಮಗಳು, ವಿಶೇಷ ಆರ್ಥಿಕ ವಲಯಗಳು, ರಫ್ತು ಆಧಾರಿತ ಘಟಕಗಳು, ಇಂಡಸ್ಟ್ರಿಯಲ್​ ಎಸ್ಟೇಟ್​ಗಳು ಕಾರ್ಯ ಆರಂಭ ಮಾಡಬಹುದು. ಆದರೆ ಇಲ್ಲಿ ನಿಯಮಗಳ ಪಾಲನೆ ಕಡ್ಡಾಯ. ಕಾರ್ಮಿಕರು ಸೇರಿ ಹೊರಗಿನವರ ಪ್ರವೇಶದಲ್ಲಿ ನಿಯಂತ್ರಣ ಇರಬೇಕು.
ಹಾಗೇ, ನಗರ ಪ್ರದೇಶಗಳಲ್ಲಿರುವ ಅಗತ್ಯ ವಸ್ತುಗಳ ತಯಾರಿಕಾ ಕಾರ್ಖಾನೆಗಳು ಕೆಲಸ ಶುರು ಮಾಡಬಹುದು. ಔಷಧ, ವೈದ್ಯಕೀಯ ಸಾಧನಗಳು, ಅವುಗಳ ಕಚ್ಚಾ ವಸ್ತು ಪೂರೈಕೆ ಉದ್ಯಮಗಳು, ಹಾಗೇ ಉತ್ಪಾದನಾ ಘಟಕಗಳು, ಐಟಿ ಹಾರ್ಡ್​ವೇರ್​ ತಯಾರಿಕಾ ಘಟಕಗಳು, ಸೆಣಬು ಕಾರ್ಖಾನೆಗಳನ್ನೂ ತೆರೆಯಲು ಅವಕಾಶ ಇದೆ.ಇಲ್ಲಿ ಕೆಲಸಗಾರರು ಒಂದೇ ಬಾರಿ ಎಲ್ಲರೂ ಬರುವಂತಿಲ್ಲ. ಸ್ವಲ್ಪ ಜನರ ಶಿಫ್ಟ್ ಮಾಡಬೇಕು. ಸಾಮಾಜಿಕ ಅಂತರ ಪಾಲನೆಯ ನಿಯಮ ಕಡ್ಡಾಯವಾಗಿ ಪಾಲನೆ ಆಗಬೇಕು.
ನಗರ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕೆಲಸಗಳನ್ನೂ ಶುರು ಮಾಡಬಹುದು. ಆದರೆ ಹೊರಗಿನಿಂದ ಯಾವುದೇ ಕೆಲಸಗಾರರನ್ನು ಕರೆತರುವಂತಿಲ್ಲ. ಸ್ಥಳೀಯವಾಗಿಯೇ ಇರುವ ಕಾರ್ಮಿಕರನ್ನೇ ತೊಡಗಿಸಿಕೊಳ್ಳಬೇಕು. ಉಳಿದಂತೆ ಅಗತ್ಯವಿಲ್ಲದ ವಸ್ತುಗಳ ಅಂಗಡಿಗಳು ತೆರೆಯುವಂತಿಲ್ಲ. ಮಾಲ್​ಗಳು, ಮಾರ್ಕೆಟ್​ಗಳು, ಮಾರುಕಟ್ಟೆ ಸಂಕೀರ್ಣಗಳಿಗೆ ಅವಕಾಶವಿಲ್ಲ.
ನಗರ ಪ್ರದೇಶಗಳ ಕಾಲನಿಗಳಲ್ಲಿ ಇರುವ, ಅಗತ್ಯ ವಸ್ತುಗಳ, ಅನಿವಾರ್ಯವಲ್ಲ ವಸ್ತುಗಳ ಮತ್ತು ಇ-ಕಾಮರ್ಸ್​ಗೆ ಸಂಬಂಧಪಟ್ಟ ಚಿಕ್ಕಪುಟ್ಟ ಅಂಗಡಿಗಳು, ವಸತಿ ಸಂಕೀರ್ಣದ ಒಳಗೆ ಇರುವ ಶಾಪ್​ಗಳನ್ನು ತೆರೆಯಬಹುದು.
ಇನ್ನುಳಿದ ಹಸಿರು ಮತ್ತು ಆರೆಂಜ್​ ವಲಯಗಳಲ್ಲಿ ಸಡಿಲಿಕೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದ್ದರೂ, ಸಂಬಂಧಪಟ್ಟ ಮಾರ್ಗಸೂಚಿ ಇನ್ನೂ ಬಿಡುಗಡೆಯಾಗಿಲ್ಲ. ಶೀಘ್ರವೇ ಅದನ್ನೂ ಬಿಡುಗಡೆ ಮಾಡುವುದಾಗಿ ತಿಳಿಸಿದೆ.  (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
