ನವದೆಹಲಿ:ಮಹಾನಗರಗಳಲ್ಲಿ ಕೊಳೆಗೇರಿಗಳ ಸಂಖ್ಯೆಯಂತೂ ಹೇಳತೀರದು. ಅದರಲ್ಲಿಯೂ ರಾಷ್ಟ್ರ ರಾಜಧಾನಿಯಲ್ಲಿ ಇವುಗಳು ಸಂಖ್ಯೆ ವಿಪರೀತವಾಗಿದೆ.ಇದೀಗ ಸುಮಾರು 48 ಸಾವಿರ ಕೊಳೆಗೇರಿ ನಿವಾಸಿಗಳಿಗೆ ಶಾಕ್‌ ಎನ್ನುವಂಥ ಆದೇಶವೊಂದು ಸುಪ್ರೀಂಕೋರ್ಟ್‌ನಿಂದ ಹೊರಬಂದಿದೆ. ಅದೇನೆಂದರೆ, ದೆಹಲಿಯಲ್ಲಿ ರೈಲ್ವೆ ಹಳಿಯ 140 ಕಿ.ಮೀ ಅಂತರದಲ್ಲಿರುವ ಕೊಳೆಗೇರಿಗಳನ್ನು ಮೂರು ತಿಂಗಳ ಅವಧಿಯಲ್ಲಿ ತೆರವುಗೊಳಿಸಬೇಕು ಎಂದು ಕೋರ್ಟ್‌ ಹೇಳಿದೆ.
ಇದರಿಂದಾಗಿ ಸುಮಾರು 48 ಸಾವಿರ ಕೊಳೆಗೇರಿಗಳನ್ನು ರೈಲ್ವೆ ಇಲಾಖೆ ತೆರವುಗೊಳಿಸಬೇಕಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪಕ್ಕೆ ಆಸ್ಪದವಿರಬಾರದು ಎಂದೂ ಕೋರ್ಟ್‌ ಸರ್ಕಾರಕ್ಕೆ ಖಡಕ್‌ ವಾರ್ನಿಂಗ್‌ ನೀಡಿದೆ.
ಇದನ್ನೂ ಓದಿ:ಸೇನಾ ರಹಸ್ಯ ಕಾಪಾಡಲು ಫೋನ್‌ ಬಳಕೆಗೆ ಯೋಧರಿಗೆ ಹೊಸ ಮಾರ್ಗಸೂಚಿ ಪ್ರಕಟ
ಅಷ್ಟೇ ಅಲ್ಲದೇ, ಈ ಪ್ರದೇಶದಲ್ಲಿ ಇರುವ ಕೊಳೆಗೇರಿಗಳ ತೆರವಿಗೆ ಯಾರಾದರೂ ಅರ್ಜಿ ಸಲ್ಲಿಸಿದರೆ ಅದನ್ನು ಮಾನ್ಯ ಮಾಡದಂತೆಯೂ ಹೈಕೋರ್ಟ್‌ಗೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ, ಸೂಚನೆ ನೀಡಿದೆ. ಒಂದು ವೇಳೆ ಇದಾಗಲೇ ತೆರವು ಪ್ರಕ್ರಿಯೆಗೆ ಏನಾದರೂ ತಡೆಯಾಜ್ಞೆ ಇದ್ದಲ್ಲಿ ಅದು ಊರ್ಜಿತವಾಗುವುದಿಲ್ಲ ಎಂದೂ ಹೇಳಿದೆ.
ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಸಲ್ಲಿಸಿದ್ದ ವರದಿಯನ್ನು ಆಧರಿಸಿ ಕೋರ್ಡ್‌ ಈ ಆದೇಶ ಹೊರಡಿಸಿದೆ. ಈ ಪ್ರದೇಶದ ಅತಿಕ್ರಮಣ ಮತ್ತು ತ್ಯಾಜ್ಯವನ್ನು ತೆರವುಗೊಳಿಸಲು ಕೈಗೊಂಡ ಕ್ರಮಗಳ ಬಗ್ಗೆ ತಿಂಗಳಲ್ಲಿ ವರದಿ ನೀಡಬೇಕು ಎಂದು ಸೂಚಿಸಿದೆ.
ಹಲವು ದಶಕ ನಿರಾತಂಕವಾಗಿದ್ದ ಕುಖ್ಯಾತ ಹವಾಲಾ ಡೀಲರ್ ಅರೆಸ್ಟ್‌: ಆರು ದೇಶಗಳ ಮೋಸ್ಟ್‌ ವಾಂಟೆಡ್‌ ಈತ!

‘ಅಂಡರ್‌-40‘ ವಿಶ್ವದ ಪ್ರಭಾವಿಗಳ ಪಟ್ಟಿಯಲ್ಲಿ ಅಂಬಾನಿ ಅವಳಿ ಮಕ್ಕಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 4 =
Remember me
