ಲಂಡನ್​:ಪಶ್ಚಿಮ ಬಂಗಾಳ ನಟಿ ಹಾಗೂ ತೃಣಮೂಲ ಕಾಂಗ್ರೆಸ್​ ಸಂಸದೆ ನುಸ್ರತ್ ಜಹಾನ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ದುರ್ಗಾದೇವಿಯ ಅವತಾರ ಹಾಕಿ ಪೋಸ್​ ಕೊಟ್ಟಿರುವುದಕ್ಕೆ ಜೀವಬೆದರಿಕೆ ಎದುರಿಸುತ್ತಿದ್ದಾರಂತೆ.
ಮುಸ್ಲಿಂ ಧರ್ಮದ ಪರಿವಾರದಲ್ಲಿ ಹುಟ್ಟಿ ಹಿಂದುವನ್ನು ಮದುವೆಯಾಗಿರುವ ನುಸ್ರತ್​. ತಮಗೆ ರಕ್ಷಣೆ ನೀಡುವಂತೆ ಲಂಡನ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಕೋರಿದ್ದಾರೆ. ಸದ್ಯ ಲಂಡನ್​ನಲ್ಲಿ ಬಂಗಾಳಿ ಚಲನಚಿತ್ರದ ಶೂಟಿಂಗ್​ನಲ್ಲಿ ನಿರತರಾಗಿರುವ ನಟಿ, ಅಲ್ಲಿಯ ಭಾರತೀಯ ರಾಯಭಾರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಜತೆಗೆ ಬಂಗಾಳ ಸರ್ಕಾರವನ್ನೂ ಕೋರಿದ್ದಾರೆ.
https://www.instagram.com/p/CFWUK1UnWNh/?utm_source=ig_web_button_share_sheet
ಇವರು ಈ ಹಿಂದೆ ಕುಂಕುಮ, ಮಂಗಳಸೂತ್ರ ಧರಿಸಿ ಪತಿ ನಿಖಿಲ್‌ ಜೈನ್‌ ಜತೆ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಕಂಡ ಮುಸ್ಲಿಂ ಸಂಪ್ರದಾಯವಾದಿಗಳು ನುಸ್ರತ್ ಮೇಲೆ ಹರಿಹಾಯ್ದಿದ್ದರು. ‘ಪಶ್ಚಿಮ ಬಂಗಾಳದಲ್ಲಿ ನಾವೆಲ್ಲರೂ ಒಟ್ಟಾಗಿ ದುರ್ಗಾಪೂಜೆ ಕೈಗೊಳ್ಳುತ್ತೇವೆ. ಇದು ಒಗ್ಗಟ್ಟಿನ ಭಾರತದ ಸೂಚಕವಾಗಿದೆ’ ಎಂದು ನುಸ್ರತ್ ಅವರಿಗೆ ತಿರುಗೇಟು ನೀಡಿದ್ದರು.
ಆದರೆ ಇದೀಗ ಮತ್ತೆ ಇಂಥವರಿಂದ ತಮಗೆ ಜೀವಬೆದರಿಕೆ ಬರುತ್ತಿದೆ. ನನಗೆ ರಕ್ಷಣೆ ನೀಡಿ ಎಂದು ಕೋರಿದ್ದಾರೆ.
ಮಹಾಲಯ ನಿಮಿತ್ತ ದುರ್ಗಾ ಅವತಾರವಿರುವ ಫೋಟೋಶೂಟ್ ಮಾಡಿಸಿಕೊಂಡು ಅದರ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ಹಲವಾರು ಮಂದಿ ಕಿಡಿಕಾರಿ ಕಮೆಂಟ್​ ಹಾಕಿದ್ದಾರೆ.
ನಿನಗೆ ಅಲ್ಹಾ ಅಂದರೆ ಭಯವಿಲ್ಲವೆ. ನಿಮ್ಮ ಸಾವಿನ ಸಮಯ ಹತ್ತಿರ ಬಂದಿದೆ. ನಿಮ್ಮ ದೇಹವನ್ನು ಮುಚ್ಚಿಡಲು ಆಗುವುದಿಲ್ಲವೇ ಎಂದು ಕಮೆಂಟ್ ಮಾಡಿದ್ದಾರೆ.
ರಾಮಮಂದಿರಕ್ಕೆ ಶುಭಕೋರಿದ್ದಕ್ಕೆ ಅತ್ಯಾಚಾರದ ಬೆದರಿಕೆ! ಕ್ರಿಕೆಟಿಗನ ಪತ್ನಿಗೆ ಭದ್ರತೆ ನೀಡಿ ಎಂದ ಹೈಕೋರ್ಟ್​

ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣ: ಯೋಗಿ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್​

ಪೂರ್ವಯೋಜನೆ ಇಲ್ಲದೇ ಐದು ಗಂಟೆಗಳಲ್ಲಿ ಮಸೀದಿ ಕೆಡವಲು ಸಾಧ್ಯವೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − ten =
Remember me
