ನವದೆಹಲಿ:ಇನ್ಮುಂದೆ ಸಂಸತ್ತಿನಲ್ಲಿ ‘ಸರ್​’ ಎಂಬ ಪದಕ್ಕೆ ಫುಲ್​ಸ್ಟಾಪ್​ ಬೀಳಲಿದೆ. ಏಕೆಂದರೆ ಈ ಶಬ್ದದ ಬಳಕೆಯನ್ನು ಕೈಬಿಡುವಂತೆ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಮನವಿ ಮಾಡಿದ್ದು, ಅದಕ್ಕೆ ಅನುಮೋದನೆ ಸಿಕ್ಕಿದೆ.
‘ಸರ್’​ ಪದದ ಬದಲು ಲಿಂಗ ತಟಸ್ಥ ಪದ ಬಳಸಲು ನಿರ್ಧರಿಸಲಾಗಿದೆ. ಸಂಸತ್ತಿನ ಪ್ರಶ್ನೋತ್ತರ ಸಮಯದಲ್ಲಿ ‘ಸರ್​​, ‘ನೋ ಸರ್’​ ಬಳಕೆ ಹೆಚ್ಚಾಗುತ್ತಿದೆ. ಸಂಸತ್ತಿನಲ್ಲಿ ಮಹಿಳೆಯರು ಇದ್ದರೂ ಇದೇ ಪದದ ಬಳಕೆ ಹೆಚ್ಚಿರುವುದು ಲಿಂಗ ತಾರತಮ್ಯವನ್ನು ತೋರಿಸುತ್ತಿದೆ ಎಂದು ಪ್ರಿಯಾಂಕಾ ಅವರು, ಕಳೆದ ತಿಂಗಳ ಆಗಸ್ಟ್‌ 8 ರಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪತ್ರ ಬರೆದಿದ್ದರು. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ.
‘ಪ್ರಜಾಪ್ರಭುತ್ವದ ದೇಗುಲವೆಂಬ ಸಂಸತ್ತಿನಲ್ಲಿ ಸಂಸದೆಯಾಗಿ ಲಿಂಗ ಬೇಧವಿಲ್ಲದ ಪದ ಬಳಸಬೇಕೆಂದು ನಾನು ಮನವಿ ಮಾಡುತ್ತೇನೆ. ಇದು ಒಂದು ಸಣ್ಣ ಬದಲಾವಣೆಯಂತೆ ತೋರುತ್ತದೆಯಾದರೂ, ಸಂಸತ್ತಿನ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ತಮ್ಮ ಪ್ರಾತಿನಿಧ್ಯವನ್ನು ನೀಡುವಲ್ಲಿ ಇದು ದೂರದೃಷ್ಟಿಯನ್ನು ಹೊಂದಿದೆ’ ಎಂದು ಪತ್ರದಲ್ಲಿ ಸಂಸದೆ ಹೇಳಿದ್ದರು.
“ಸದನದ ಎಲ್ಲಾ ಪ್ರಕ್ರಿಯೆಗಳನ್ನು (ಸಂಸದೀಯ ಪ್ರಶ್ನೆಗಳಿಗೆ ಉತ್ತರಗಳನ್ನು ಸೇರಿದಂತೆ) ಸಭಾಧ್ಯಕ್ಷರಿಗೆ ತಿಳಿಸಲಾಗುತ್ತದೆ. ಆದರೂ ರಾಜ್ಯಸಭೆಯ ಮುಂದಿನ ಅಧಿವೇಶನದಿಂದ ಲಿಂಗ-ತಟಸ್ಥ ಉತ್ತರಗಳನ್ನು ಒದಗಿಸಲು ಸಚಿವಾಲಯಗಳಿಗೆ ತಿಳಿಸಲಾಗುವುದು ಎಂದು ಸಂಸದೆಗೆ ಬಂದಿರುವ ಪ್ರತ್ಯುತ್ತರದಲ್ಲಿ ತಿಳಿಸಲಾಗಿದೆ.
ಈ ಪತ್ರವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ಸಂಸದೆ ಪ್ರಿಯಾಂಕಾ, ‘ಸಣ್ಣ ಹೆಜ್ಜೆ, ದೊಡ್ಡ ಬದಲಾವಣೆ ತರುತ್ತದೆ. ಮಹಿಳಾ ಸಂಸದರಿಗೆ ಸಚಿವಾಲಯಗಳಿಂದ ಸಂಸತ್ತಿನ ಪ್ರಶ್ನೆಯ ಪ್ರತಿಕ್ರಿಯೆಗಳಲ್ಲಿ ಅಸಹಜತೆಯನ್ನು ಸರಿಪಡಿಸಿದ್ದಕ್ಕಾಗಿ ರಾಜ್ಯಸಭಾ ಸಚಿವಾಲಯಕ್ಕೆ ಧನ್ಯವಾದಗಳು. ಇನ್ನು ಮುಂದೆ ಸಚಿವಾಲಯಗಳಿಂದ ಲಿಂಗ ತಟಸ್ಥ ಪ್ರತ್ಯುತ್ತರಗಳು ಇರುತ್ತವೆ’ ಎಂದು ಅವರು ತಮ್ಮ ಪತ್ರದ ಫೋಟೋಗಳೊಂದಿಗೆ ಟ್ವೀಟ್ ಮಾಡಿದ್ದಾರೆ.(ಏಜೆನ್ಸೀಸ್​)
Small step, big difference. Thank the Rajya Sabha Secretariat for correcting the anomaly in parliament question responses from ministries to women MPs. Henceforth the replies will be gender neutral from the ministries.pic.twitter.com/1m0hxBGmvn— Priyanka Chaturvedi🇮🇳 (@priyankac19)September 21, 2022
Small step, big difference. Thank the Rajya Sabha Secretariat for correcting the anomaly in parliament question responses from ministries to women MPs. Henceforth the replies will be gender neutral from the ministries.pic.twitter.com/1m0hxBGmvn
ಎಐಸಿಸಿ ಅಧ್ಯಕ್ಷರ ಚುನಾವಣೆಗೆ ಅಧಿಸೂಚನೆ ಪ್ರಕಟ: 22 ವರ್ಷಗಳ ದಾಖಲೆ ಮುರಿಯುವುದೆ? ಇಲ್ಲಿಯವರೆಗೆ ಆಗಿದ್ದೇನು?
ಕನ್ನಡ ಭಾಷೆ ಕಡ್ಡಾಯಕ್ಕೆ ಮಂಡನೆಯಾಯ್ತು ಮಸೂದೆ: ತಪ್ಪು ಮಾಡಿದ್ರೆ ಇರಲಿದೆ ದಂಡ- ಇಲ್ಲಿದೆ ಡಿಟೇಲ್ಸ್​
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four × two =
Remember me
