ಆಗ್ರಾ (ಉತ್ತರ ಪ್ರದೇಶ):ಪತ್ನಿ ತನ್ನಿಂದ ಬೇರ್ಪಟ್ಟು ಬೇರೊಬ್ಬನ ಜತೆ ಇರುವುದನ್ನು ಸಹಿಸಲಾಗದ ಪತಿಯೊಬ್ಬ ಆಕೆಯ ಕೈ ಕಟ್ಟಿ ನಾಲ್ಕನೇ ಮಹಡಿಯಿಂದ ಎಸೆದು ಕೊಲೆ ಮಾಡಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಖ್ಯಾಗ ಬ್ಲಾಗರ್​ ರಿತಿಕಾ ಸಿಂಗ್ (30) ಕೊಲೆಯಾದ ಮಹಿಳೆ. ಇವರು ಆಹಾರಕ್ಕೆ ಸಂಬಂಧಿಸಿದ ಬ್ಲಾಗ್​ ಮಾಡಿದ್ದು, ಅದರಲ್ಲಿ ತುಂಬಾ ಖ್ಯಾತರಾಗಿದ್ದರು. ಘಟನೆಗೆ ಸಂಬಂಧಿಸಿದಂತೆ ಪತಿ ಆಕಾಶ್ ಗೌತಮ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ರಿತಿಕಾ ಮತ್ತು ಆಕಾಶ್​ ಗೌತಮ್​ 2014ರಲ್ಲಿ ಮದುವೆಯಾಗಿದ್ದರು, ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ 2018ರಲ್ಲಿ ಬೇರೆ ಬೇರೆಯಾಗಿದ್ದರು. ಬಳಿಕ ರಿತಿಕಾ ಅವರಿಗೆ ಫೇಸ್‍ಬುಕ್‍ನಲ್ಲಿ ವಿಪುಲ್ ಅಗರ್​ವಾಲ್​ ಎಂಬುವವರ ಪರಿಚಯವಾಗಿತ್ತು. ಇಬ್ಬರೂ ತಾಜ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗ್ಲಾ ಮೇವಾಟಿಯ ಅಪಾರ್ಟ್‍ಮೆಂಟ್‍ನಲ್ಲಿ ಜತೆಯಲ್ಲಿ ಇದ್ದರು.

ಇದು ಪತಿ ಆಕಾಶ್​ಗೆ ತಿಳಿದು ಕೆಂಡಾಮಮಡಲವಾಗಿದ್ದಾನೆ. ಆತ ತನ್ನ ಸ್ನೇಹಿತೆ, ಸ್ನೇಹಿತರನ್ನು ಕರೆದುಕೊಂಡು ಪತ್ನಿ ನೆಲೆಸಿದ್ದ ಅಪಾರ್ಟ್‍ಮೆಂಟ್‍ಗೆ ಹೋಗಿ, ಇಬ್ಬರ ಜತೆ ಜಗಳವಾಡಿ ಹಲ್ಲೆ ಮಾಡಿದ್ದಾರೆ. ನಂತರ ವಿಪುಲ್​ ಮತ್ತು ರಿತಿಕಾರ ಕೈ ಕಟ್ಟಿಹಾಕಿದ್ದಾರೆ. ವಿಪುಲ್​ನನ್ನು ಬಾತ್​ರೂಮ್​ನ ಒಳಗೆ ಲಾಕ್​ ಮಾಡಿ, ರಿತಿಕಾರನ್ನು ಮೇಲಿನಿಂದ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‍ಎಸ್‍ಪಿ) ಸುಧೀರ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸದ್ಯ ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
The body of the woman has been sent for post mortem and her family members have been informed about the incident.#bloggerpic.twitter.com/s0pLV95yvu
— Anuja Jaiswal (@AnujaJaiswalTOI)June 24, 2022

ಗಾಯಕ ಕಿಶೋರ್​ ಕುಮಾರ್​ರನ್ನೇ ಬ್ಯಾನ್​ ಮಾಡಿದ್ರು, ಆಮೇಲೆ ಆಗಿದ್ದು… ತುರ್ತು ಪರಿಸ್ಥಿತಿಯ ಕರಾಳ ದಿನ ನೆನಪಿಸಿದ ಪ್ರಧಾನಿ

VIDEO: ಹಲೋ… ನನಗೀಗ ಒಂದು ತಿಂಗಳು, ನನ್ನ ಪರಿಚಯ ಹೀಗಿದೆ… ಇನ್​ಸ್ಟಾಗ್ರಾಂನಲ್ಲಿ ಹೆಸರು ರಿವೀಲ್​ ಮಾಡಿದ ಸಂಜನಾ ಪುತ್ರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − five =
Remember me
