ಪಟ್ನಾ:ಕಳ್ಳನನ್ನು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡ ಪೊಲೀಸ್​ ಅಧಿಕಾರಿಯಾಗಿದ್ದ ಮಗನ ಶವವನ್ನು ನೋಡಿ ತಾಯಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟ ವಿಷಾದಕರ ಘಟನೆ ಪಟ್ನಾದಲ್ಲಿ ನಡೆದಿದೆ.
ಪಟ್ನಾದ ಕಿಷನ್‌ಗಂಜ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಆಗಿದ್ದ ಅಶ್ವಿನಿಕುಮಾರ್ ಅವರು ಕಳ್ಳರನ್ನು ಹಿಡಿಯಲು ಹೋಗಿ ಬಲಿಯಾದವರು. ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯಲ್ಲಿನ ಹಳ್ಳಿಯೊಂದರಲ್ಲಿ ಕಳವು ಪ್ರಕರಣದ ಆರೋಪಿಯ ಪತ್ತೆಗಾಗಿ ದಾಳಿ ನಡೆಸಲು ತೆರಳಿದ್ದಾಗ ಅವರ ಮೇಲೆ ಹಲ್ಲೆ ಮಾಡಿ ಸಾಯಿಸಲಾಗಿತ್ತು.
ಮೋಟಾರ್ ಸೈಕಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಅಶ್ವಿನಿ ಕುಮಾರ್ ಅವರು ಹೋಗಿದ್ದರು. ಇವರ ಜತೆಗೆ ಇನ್ನೂ ಏಳು ಮಂದಿ ಪೊಲೀಸರು ತೆರಳಿದ್ದರು. ಆದರೆ ಗ್ರಾಮಸ್ಥರು ಹಲ್ಲೆ ನಡೆಸುತ್ತಿದ್ದಾಗ ಉಳಿದ ಪೊಲೀಸರು ಅಲ್ಲಿಂದ ಓಡಿಹೋಗಿದ್ದರು. ಯಾರ ನೆರವೂ ಇಲ್ಲದ ಕಾರಣ, ಗ್ರಾಮಸ್ಥರು ಥಳಿಸಿ ಅಶ್ವಿನಿಕುಮಾರ್​ ಅವರನ್ನು ಕೊಂದಿದ್ದರು.
ಅವರ ಶವವನ್ನು ನೋಡುತ್ತಿದ್ದಂತೆಯೇ ಅವರ ವಯಸ್ಸಾದ ತಾಯಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹಗಳನ್ನೂ ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿನ ಅವರ ಗ್ರಾಮದಲ್ಲಿ ಅಕ್ಕಪಕ್ಕವೇ ಅಂತ್ಯಸಂಸ್ಕಾರ ಮಾಡಲಾಗಿದೆ.
ಅಶ್ವಿನಿಕುಮಾರ್​ ಅವರನ್ನು ಒಂಟಿಯಾಗಿ ಬಿಟ್ಟು ಓಡಿಬಂದ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಸಾರಿಗೆ ಇಲಾಖೆಯಿಂದ ಬೇವು-ಬೆಲ್ಲ: 10 ಸಾವಿರ ಸಿಬ್ಬಂದಿಗೆ ಸಿಹಿ- 50 ಸಾವಿರ ನೌಕರರಿಗೆ ಕಹಿ ಕಹಿ…

ತಟ್ಟೆ- ಲೋಟ ಬಡಿಯುತ್ತ ಬೀದಿಗಿಳಿದ ಮಕ್ಕಳು: ಪಾಲಕರು ಪೊಲೀಸ್​ ಠಾಣೆಯಲ್ಲಿ; ಕಂಗೆಟ್ಟ ಮಕ್ಕಳು ರಸ್ತೆಯಲ್ಲಿ!

ಪತ್ನಿಗೆ ಕೋಪ ಬಂದಾಗ ಒದೀತಾಳೆ, ಸೌಟಿನಿಂದ ಹೊಡೀತಾಳೆ, ಸಂಶಯ ಪಿಶಾಚಿ ಬೇರೆ- ನಾ ಏನು ಮಾಡಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + four =
Remember me
