ಕೈರೊ (ಈಜಿಪ್ಟ್​):ಸದಾ ಸುಂದರವಾಗಿರಬೇಕು, ಮುಪ್ಪೇ ಬರಬಾರದು ಎಂದು ಯಾರು ತಾನೆ ಬಯಸಲ್ಲ? ಮಹಿಳೆಯರಾಗಲೀ, ಪುರುಷರಾಗಲಿ ಎಲ್ಲರಿಗೂ ಸೌಂದರ್ಯದ ಬಗ್ಗೆ ಕಾಳಜಿ ಇದ್ದೇ ಇದೆ. ಅದಕ್ಕಾಗಿಯೇ ಬೀದಿ ಬೀದಿಗಳಲ್ಲಿ ಸ್ತ್ರೀಯರ, ಪುರುಷರ ಪಾರ್ಲರ್​ಗಳು ತಲೆ ಎತ್ತಿರುವುದು.
ಸೌಂದರ್ಯದ ಮಾತು ಒಂದೆಡೆಯಾದರೆ, ಇನ್ನೊಂದೆಡೆ, ಮೈಕೈ ನೋವಿನ ಸಮಸ್ಯೆ. ಸಿಕ್ಕಾಪಟ್ಟೆ ಕೆಲಸ ಮಾಡಿದಾಗ ಸುಸ್ತಾದರೆ ಒಂದು ಘಳಿಗೆ ಹಾಯಾಗಿ ಕುಳಿತುಕೊಂಡರೆ ಎಷ್ಟು ಖುಷಿಯಾಗುತ್ತದೆ ಅಲ್ಲವೆ? ಅದರಲ್ಲಿಯೂ ಸ್ವಲ್ಪ ಹೊತ್ತು ಮಲಗಿದರೆ ಇನ್ನೂ ಖುಷಿ… ಯಾರಾದರೂ ಕೈ ಕಾಲುಗಳನ್ನು ಒತ್ತಿ ಮಸಾಜ್​ ಮಾಡಿದರೆ? ಸುಸ್ತೆಲ್ಲಾ ಹೊರಟುಹೋಗಿ ನೆಮ್ಮದಿ ಎನಿಸುತ್ತದೆ ಅಲ್ಲವೆ?
ಇವೆಲ್ಲದಕ್ಕೂ ಉತ್ತರವೇ ಮಸಾಜ್​. ಮಸಾಜ್​ ಮೂಲಕ ಮೈಕೈ ನೋವು ಮಾತ್ರವಲ್ಲದೇ ಹಲವಾರು ತೆರನಾದ ದೈಹಿಕ ಸಮಸ್ಯೆಗಳನ್ನು ದೂರ ಮಾಡಲು ಸಾಧ್ಯವಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಮಸಾಜ್​ ಮೂಲಕವೇ ಚರ್ಮದ ಅಂದವನ್ನು ಹೆಚ್ಚಿಸುವುದೂ ಇದೆ.ಅಂಥದ್ದೇ ಒಂದು ಮಸಾಜ್​ ಬಗ್ಗೆ ಇಲ್ಲಿ ಹೇಳುತ್ತಿರುವುದು. ಹಾಗೆ ಸ್ವಲ್ಪ ಡಿಫರೆಂಟ್​ ಎನ್ನಿಸುವ ಮಸಾಜ್​ ಇದು. ಈ ಮಸಾಜ್​ ಮಾಡಿಕೊಂಡರೆ ಚಿರಯೌವನವೂ ಇರುತ್ತಂತೆ. ಮೈಕೈ ನೋವೂ ಕಡಿಮೆಯಾಗುತ್ತದೆಯಂತೆ.
This massage at a Cairo spa is not for the faint-heartedpic.twitter.com/YWAsHrHn1e
— Reuters (@Reuters)December 29, 2020

ಇಂಥದ್ದೊಂದು ಮಸಾಜ್​ ಸೆಂಟರ್​ ಇರುವುದು ಈಜಿಪ್ಟಿನ ಕೈರೋದ ಸ್ಪಾ ಒಂದರಲ್ಲಿ. ಈ ಮಸಾಜ್​ ವಿಶೇಷ ಎಂದರೆ ಮೈಮೇಲೆ ಹಾವನ್ನು ಬಿಟ್ಟು ಇಲ್ಲಿ ಮಸಾಜ್​ ಮಾಡಲಾಗುತ್ತದೆ! ಬರೀ ಹಾವಲ್ಲ, ಹೆಬ್ಬಾವೂ ಇದರಲ್ಲಿ ಇರುತ್ತವೆ! ಕೇಳಿದರೆ ಮೈ ಝುಂ ಎನ್ನುತ್ತದೆಯಲ್ಲವೆ? ಆದರೆ ನಿಜವಾಗಿಯೂ ಇಲ್ಲಿ ಹಾವಿನ ಮೂಲಕ ಮಸಾಜ್​ ಮಾಡಲಾಗುತ್ತದೆ. ಮೈಮೇಲೆ, ಮುಖದ ಮೇಲೆ ಎಲ್ಲೆಡೆ ಹಾವುಗಳನ್ನು ಬಿಟ್ಟು ಸೌಂದರ್ಯವನ್ನೂ ವರ್ಧಿಸಲಾಗುತ್ತದೆ ಜತೆಗೆ ಶರೀರದ ನೋವುಗಳನ್ನೂ ನಿವಾರಣೆ ಮಾಡಲಾಗುತ್ತದೆ.
ಮೊದಲು ಗ್ರಾಹಕರ ಶರೀರದ ಮೇಲೆ ವಿಶೇಷವಾದ ತೈಲವನ್ನು ಉಜ್ಜಲಾಗುತ್ತದೆ. ನಂತರ ವಿಷಪೂರಿತ ಹೆಬ್ಬಾವುಗಳನ್ನು ಮೈಮೇಲೆ ಹರಿಸಲಾಗುತ್ತದೆ. ಸುಮಾರು 30 ನಿಮಿಷ ಮಸಾಜ್​ ಮಾಡುತ್ತವೆ ಈ ಹಾವು.
ಇದನ್ನು ಕಂಡು ಮೊದಮೊದಲು ಜನರು ಇಲ್ಲಿಗೆ ಬರಲು ಹೆದರುತ್ತಿದ್ದರಂತೆ. ಆದರೆ ಅನೇಕ ಮಂದಿಗೆ ಇದರಿಂದ ಪ್ರಯೋಜನ ಆಗಿರುವುದನ್ನು ಕಂಡು ಇದೀಗ ಈ ಸ್ಪಾಕ್ಕೆ ಬಾರಿ ಡಿಮಾಂಡ್​ ಬಂದಿದೆ. ಮೊದಲೇ ಬುಕ್ಕಿಂಗ್​ ನಡೆಯುತ್ತದೆ. ತಿಂಗಳುಗಟ್ಟಲೆ ಕಾದ ನಂತರ ಸರದಿ ಬರುವುದೂ ಇದೆ.
ಎಷ್ಟೆಂದರೂ ಸೌಂದರ್ಯದ ಮಾತಲ್ಲವೆ? ಇದು ನುರಿತರು ಮಾತ್ರ ಮಾಡುತ್ತಿದ್ದು, ಇದನ್ನು ನೋಡಿ ಎಲ್ಲರೂ ಟ್ರೈ ಮಾಡಲು ಹೋಗಬೇಡಿ. ಜೀವಕ್ಕೆ ಅಪಾಯವಿದೆ ಎಂದೂ ಸ್ಪಾ ಮಾಲೀಕರು ಎಚ್ಚರಿಕೆ ನೀಡಿದ್ದಾರೆ.
ಧರ್ಮೇಗೌಡರ ಡೆತ್​ನೋಟ್​ ಸಿಕ್ಕಿದೆ- ಅದರಲ್ಲಿ ಅನೇಕ ರಹಸ್ಯಗಳಿವೆ: ಸಿಎಂ ಯಡಿಯೂರಪ್ಪ

ಹೊಸ ಮನೆ ನಿರ್ಮಾಣಕ್ಕೆ ಖುಷಿಯಿಂದ ಗುದ್ದಲಿಪೂಜೆ ಮಾಡಿ ರೈಲಿಗೆ ತಲೆಕೊಟ್ಟರೇಕೆ ಧರ್ಮೇಗೌಡ?

ತುಟಿ ಸದಾ ಒಣಗಿ ಕಪ್ಪು ಕಲೆಯಾಗುತ್ತದೆ- ಮನೆಮದ್ದು ಏನಾದರೂ ಇದೆಯೆ?

ಒಂದೇ ತಿಂಗಳಲ್ಲಿ 49 ಲವ್​ ಜಿಹಾದಿಗಳು ಅರೆಸ್ಟ್​! ಬಾಯಿಬಿಡಲು ಹೆದರುತ್ತಿರುವ ಯುವತಿಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 1 =
Remember me
