ಜೈಪುರ (ರಾಜಸ್ಥಾನ): ಧಾನ್ಯಗಳನ್ನು ತುಂಬಿಸಿ ಇಡುವ ಡಬ್ಬದೊಳಕ್ಕೆ ಆಡವಾಡುತ್ತ ಇಳಿದ ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ರಾಜಸ್ಥಾನದ ಬಿಕನೇರ್ ಎಂಬಲ್ಲಿ ನಡೆದಿದೆ.
ಮಾಲಿ, ಪೂನಮ್, ರವಿನಾ, ರಾಧಾ, ಸೇವರಾಂ ಎಂಬ ನಾಲ್ಕರಿಂದ ಐದು ವರ್ಷಗಳ ಒಳಗಿನ ಮಕ್ಕಳು ಈ ದುರಂತ ಸಾವು ಕಂಡಿದ್ದಾರೆ. ಆಗಿದ್ದೇನೆಂದರೆ, ಧಾನ್ಯಗಳನ್ನು ತುಂಬಲು ಇಟ್ಟಿರುವ ಡಬ್ಬಗಳ ಸಮೀಪ ಮಕ್ಕಳು ಆಟವಾಡುತ್ತಿದ್ದರು. ಆಗ ಎಲ್ಲಾ ಮಕ್ಕಳು ಒಬ್ಬರಾದ ಮೇಲೆ ಒಬ್ಬರು ಆ ಡಬ್ಬದೊಳಕ್ಕೆ ಆಟವಾಡುತ್ತಾ ಇಳಿದಿದ್ದಾರೆ.
ಆದರೆ ದುರದೃಷ್ಟಕ್ಕೆ ಆ ಡಬ್ಬವು ತಂತಾನೇ ಲಾಕ್​ ಆಗಿಬಿಟ್ಟಿದೆ. ಒಳಗಿರುವ ಮಕ್ಕಳು ಕೂಗಿಕೊಂಡರೂ ಸಮೀಪದಲ್ಲಿ ಯಾರೂ ಇರದ ಕಾರಣ, ಅವರು ಕೂಗಿದ್ದು ಯಾರಿಗೂ ಕೇಳಿಸಲೇ ಇಲ್ಲ.
ನಿನ್ನೆ ಮಧ್ಯಾಹ್ನದ ವೇಳೆ ಈ ದುರಂತ ಸಂಭವಿಸಿದೆ. ಸಂಜೆ ಮಕ್ಕಳನ್ನು ಹುಡುಕುತ್ತ ಪಾಲಕರು ಬಂದಾಗ ಮಕ್ಕಳು ಎಲ್ಲಿಯೂ ಕಾಣಿಸಲಿಲ್ಲ. ಮಕ್ಕಳು ಧಾನ್ಯ ತುಂಬುವ ಡಬ್ಬಗಳ ಸಮೀಪ ಆಡವಾಡುತ್ತಿರುವ ಬಗ್ಗೆ ಕೆಲವರು ಹೇಳಿದರು. ನಂತರ ಸಂದೇಹ ಬಂದು ಡಬ್ಬವನ್ನು ತೆಗೆದು ನೋಡಿದಾಗ ಅದಾಗಲೇ ಅಷ್ಟೂ ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸೇರಿಸಿದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
ಮಿಸ್ಡ್ ಕಾಲ್​ನಿಂದ ಶುರುವಾದ ಪರಿಚಯ ಈಗ ಏನೇನೋ ಆಗಿದೆ… ಇದು ನಿಜವಾದ ಪ್ರೀತಿಯೆ? ಹೇಗೆ ತಿಳಿಯಲಿ?

VIDEO: ಜನತಾ ಕರ್ಫ್ಯೂಗೆ ಒಂದು ವರ್ಷ- ಕರೊನಾ ಯೋಧರಿಗೆ ಗೌರವ ಸಲ್ಲಿಸಿದವರು ಹಲವರು, ಹುಚ್ಚಾಟ ಮಾಡಿದರು ಕೆಲವರು…

ಶರಣಾಗಿ ಎಂದರೆ ಗುಂಡಿನ ದಾಳಿ ನಡೆಸಿದ ಜೈಶ್​ ಸಂಘಟನೆಯ ಉಗ್ರರನ್ನು ಮಣ್ಣುಮುಕ್ಕಿಸಿದ ಯೋಧರು
–
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × four =
Remember me
