ನವದೆಹಲಿ:ಇಂಗ್ಲಿಷ್​ ಮಾತನಾಡಿದ ಯುವಕನ ಮೇಲೆ ಕೋಪಗೊಂಡ ವ್ಯಕ್ತಿಯೊಬ್ಬ ನಾಯಿ ಛೂ ಬಿಟ್ಟು ನಾಲ್ಕಾರು ಬಾರಿ ಕಚ್ಚಿಸಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ.
ಮಾಜಿ ಲೆಫ್ಟಿನೆಂಟ್​ ಸಿ.ವಿ. ಬಹದ್ದೂರ್​ ಅವರ ಮೊಮ್ಮಗ ಅಂಶುಮಾನ್​ ಅವರು ನಾಯಿ ಕಚ್ಚಿಸಿಕೊಂಡವರಾಗಿದ್ದಾರೆ. ಡೆಹ್ರಾಡೂನ್​ ನಿವಾಸಿಯಾಗಿರುವ ಅಂಶುಮಾನ್​ ಸದ್ಯ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಅಂಗಡಿಗೆ ಹೋದಾಗ ಇಂಗ್ಲಿಷ್​ನಲ್ಲಿ ಮಾತನಾಡಿದ್ದಾರೆ. ಇದನ್ನು ಕೇಳಿ ಅಲ್ಲಿದ್ದ ವ್ಯಕ್ತಿಯೊಬ್ಬ ಕೆರಳಿದ್ದಾನೆ. ನೀನು ನೇಪಾಳಿಗನಾ ಎಂದು ಕೇಳಿದ್ದಾನೆ. ಆಗ ಅಂಶುಮಾನ್​ ಅವರು ತಮ್ಮ ಪರಿಚಯ ಮಾಡಿಕೊಂಡು, ನೇಪಾಳಿಗ ಅಲ್ಲ ಎಂದಿದ್ದಾರೆ.
ಆದರೂ ಸುಮ್ಮನೆ ಇರದ ವ್ಯಕ್ತಿ, ನೀನು ನೇಪಾಳಿಗನೇ. ಅದಕ್ಕೆ ಇಂಗ್ಲಿಷ್​ನಲ್ಲಿ ಮಾತನಾಡುತ್ತಿರುವೆ, ಮಗನೇ ನಿಲ್ಲು ನಿನಗೆ ಮಾಡಿಸುವೆ ಎಂದು ತನ್ನ ಜತೆ ತಂದಿರುವ ನಾಯಿಯನ್ನು ಅಂಶುಮಾನ್​ ಮೇಲೆ ಛೂ ಬಿಟ್ಟಿದ್ದಾನೆ. ಅದು ಹೋಗಿ ಕಚ್ಚಿದೆ. ಇದರಿಂದ ಹೆದರಿಗೆ ಅಂಶುಮಾನ್​ ಅವರು ಅಂಗಡಿಯೊಳಕ್ಕೆ ಓಡಿಹೋಗಿದ್ದಾಋಎ. ಆದರೂ ಬಿಡದ ವ್ಯಕ್ತಿ ನಾಯಿಯನ್ನು ಅಲ್ಲಿಯೇ ಬಿಟ್ಟು ನಾಲ್ಕಾರು ಬಾರಿ ಕಚ್ಚಿಸಿದ್ದಾನೆ.
ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಹೋದ ಅಂಶುಮಾನ್​ ಚಿಕಿತ್ಸೆ ಪಡೆದು ಅಪರಿಚಿತ ವ್ಯಕ್ತಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
VIDEO: ‘ಹುಡುಗಿಗೆ ಪ್ರಶಸ್ತಿ ಕೊಡೋದಾ? ಛೇ… ನಮ್ಮ ನಿರ್ಧಾರ ಏನು ಅಂತ ಗೊತ್ತಿಲ್ವಾ ನಿಮ್ಗೆ?’

ಪಿಎಸ್​ಐ ಪರೀಕ್ಷೆ: ಗೋಲ್​ಮಾಲ್​ ದಂಪತಿ ಜೈಲಲ್ಲಿ ಭೇಟಿ- ಕಣ್ಣೀರ ಧಾರೆ, ಸಿಂಗಲ್​ ಸೆಲ್​ ಬೇಡ ಎಂದು ಅವಲತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 9 =
Remember me
