ಇಂಡೋನೇಷ್ಯಾ:ಇಂಡೋನೇಷ್ಯಾದಲ್ಲಿ ಇಸ್ಲಾಂ ಅತಿದೊಡ್ಡ ಧರ್ಮವಾಗಿದ್ದು, ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಆದರೆ ಇದೀಗ ಇಲ್ಲಿಯ ಮಾಜಿ ಅಧ್ಯಕ್ಷ, ಇಂಡೋನೇಷ್ಯಾದ ಸ್ಥಾಪಕ ಸುಕರ್ಣೋ ಅವರ ಪುತ್ರಿ 70 ವರ್ಷದ ಸುಕ್ಮಾವತಿ ಸುಕರ್ಣೋಪುತ್ರಿ ಹಿಂದೂ ಧರ್ಮದ ಬಗ್ಗೆ ಒಲವು ತೋರಿದ್ದು, ಇಸ್ಲಾಂ ಧರ್ಮ ಬಿಡಲು ಸಿದ್ಧತೆ ನಡೆಸಿದ್ದಾರೆ. ತಾವು ಹಿಂದೂ ಧರ್ಮಕ್ಕೆ ಮತಾಂತರ ಆಗಲಿರುವುದಾಗಿ ಅವರು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಮುಸ್ಲಿಂ ದೇಶದಲ್ಲಿ ಇದೀಗ ಸಂಚಲನ ಮೂಡಿದೆ.
ಇದೇ 26ರಂದು ಈ ಮತಾಂತರ ಕಾರ್ಯ ನಡೆಯಲಿದ್ದು, ಬಾಲಿ ಅಗುಂಗ್ ಸಿಂಗರಾಜದಲ್ಲಿ ಸುಕರ್ಣೋ ಸೆಂಟರ್ ಹೆರಿಟೇಜ್ ಏರಿಯಾದಲ್ಲಿ ಸಮಾರಂಭ ಆಯೋಜಿಸಲಾಗಿದೆ. ಈ ಮತಾಂತರದಲ್ಲಿ ಇವರು ಮಕ್ಕಳು ಮತ್ತು ಕುಟುಂಬಸ್ಥರು ಸಂಪೂರ್ಣವಾಗಿ ಸಹಕಾರ ಸೂಚಿಸಿದ್ದಾರೆ ಎನ್ನಲಾಗಿದೆ.
ಸುಕ್ಮಾವತಿ ಅವರು ಸುಕರ್ಣೋಪುತ್ರಿ ಮತ್ತು ಅವರ 3ನೇ ಪತ್ನಿ ಫಾತ್ಮವತಿಯ ಮೂರನೇ ಮಗಳು, ಇಷ್ಟೇ ಅಲ್ಲದೇ ಇಂಡೋನೇಷಿಯಾದ ಅಧ್ಯಕ್ಷೆಯಾಗಿದ್ದ ಮೇಗಾವತಿ ಅವರ ಸಹೋದರಿ ಕೂಡ. ಸುಕ್ಮಾವತಿಯವರ ವಕೀಲರಾದ ವಿಟಾರಿಯೊನೊ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಸುಕುಮಾತಿ ಅವರು, ಹಿಂದೂ ಧರ್ಮಶಾಸ್ತ್ರದ ವಿಷಯಗಳಲ್ಲಿ ಚೆನ್ನಾಗಿ ಓದಿದ್ದಾರೆ. ಹಿಂದೂ ಧರ್ಮವನ್ನು ಶ್ರೇಷ್ಠ ಎಂದು ತಿಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಪ್ರಭಾವಿತರಾಗಿರುವ ಅವರು ಮತಾಂತರಗೊಳ್ಳಲು ಸಿದ್ಧತೆ ನಡೆಸಿದ್ದಾರೆ ಎಂದಿದ್ದಾರೆ.
ಅಂದ ಹಾಗೆ 2018ರಲ್ಲಿ ಸುಕ್ಮಾವತಿ ಅವರು ಇಸ್ಲಾಂ ಧರ್ಮವನ್ನು ಅವಮಾನಿಸುವ ಕವಿತೆ ಓದಿದ್ದರು ಎಂದು ಭಾರಿ ವಿವಾದ ಎದ್ದಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಇಸ್ಲಾಮಿಕ್ ಗುಂಪುಗಳು ಸುಕ್ಮಾವತಿ ವಿರುದ್ಧ ಧರ್ಮದ್ರೋಹದ ಆರೋಪ ಮಾಡಿದ್ದರು. ನಂತರ ಸುಕ್ಮಾವತಿಯವರು ಕ್ಷಮೆ ಕೂಡ ಕೇಳಿದ್ದರು ಎನ್ನಲಾಗಿದೆ.
ಅರ್ಧ ಪರೀಕ್ಷೆ ಬರೆದ ಮೇಲೆ ಪ್ರಶ್ನೆ ಪತ್ರಿಕೆ ಬದಲಾಯಿಸಿದರು! ಕಾನ್‌ಸ್ಟೆಬಲ್‌ ಪರೀಕ್ಷೆಯಲ್ಲಿ ಎಡವಟ್ಟು

ಜಾಮೀನು ಸಿಕ್ಕಿಲ್ಲ, ಯಾರೂ ಕೈಹಿಡಿದಿಲ್ಲ: ಜೈಲಲ್ಲಿ ಶ್ರೀರಾಮನ ಮೊರೆ ಹೋದ ಶಾರುಖ್‌ ಪುತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 9 =
Remember me
