ಚೆನ್ನೈ:ಚೆನ್ನೈನ ಯು.ಎಸ್. ಕಾನ್ಸುಲ್ ಜನರಲ್ ಜುಡಿತ್ ರಾವಿನ್ “ಧೈರ್ಯಶಾಲಿ ಮಹಿಳೆಯರು ಉತ್ತಮ ಜಗತ್ತಿನ ರೂವಾರಿಗಳು” ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಚೆನ್ನೈನಲ್ಲಿನ ಅಮೆರಿಕ ದೂತಾವಾಸವು ಆಯೋಜಿಸಿದ್ದ ಈ ಸಮಾರಂಭದಲ್ಲಿ ತಮಿಳುನಾಡು ಮೂಲದ ಜಾತಿ ವಿರೋಧಿ ಆಂದೋಲನ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಡುವ ಕಾರ್ಯಕರ್ತೆ ಕೌಸಲ್ಯ ಶಂಕರ್ ಅವರನ್ನು ಗೌರವಿಸಿತು.
ಕೌಸಲ್ಯ ಶಂಕರ್ ಅವರು ಯು.ಎಸ್. ಮಿಷನ್ ಇಂಡಿಯಾದ 2021 ರ ಯು.ಎಸ್. ಸೆಕ್ರೆಟರಿ ಆಫ್ ಸ್ಟೇಟ್​ನ ಇಂಟರ್​ನ್ಯಾಷನಲ್​ ವುಮನ್ ಆಫ್ ಕರೇಜ್‌ (ಐಡಬ್ಲ್ಯುಒಸಿ) ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಈ ಪ್ರಶಸ್ತಿಯು ವೈಯಕ್ತಿಕ ಅಪಾಯಗಳನ್ನು ಎದುರಿಸುತ್ತಾ ಹಾಗೂ ಅನೇಕ ತ್ಯಾಗಗಳನ್ನು ಮಾಡುತ್ತಲೇ ಇತರರ ಜೀವನದಲ್ಲಿ ಉತ್ತಮ ಬದಲಾವಣೆ ತರುವ ನಿಟ್ಟಿನಲ್ಲಿ ಅಸಾಧಾರಣ ಧೈರ್ಯ, ಶಕ್ತಿ ಮತ್ತು ನಾಯಕತ್ವವನ್ನು ಪ್ರದರ್ಶಿಸಿದ ಮಹಿಳೆಯರನ್ನು ಗೌರವಿಸುತ್ತದೆ. ದ ಹಿಂದೂ ಅಧ್ಯಕ್ಷೆ ಡಾ.ಮಾಲಿನಿ ಪಾರ್ಥಸಾರಥಿ ಮತ್ತು ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ವಿ.ಸುರೇಶ್ ಅವರು ಈ ಕುರಿತು ಮಾತನಾಡಿದರು.
ತಮ್ಮ ಮಡಿದ ಗಂಡನ ಗೌರವಾರ್ಥವಾಗಿ, ಕೌಸಲ್ಯ ಜಾತಿ ಆಧಾರಿತ ಹಿಂಸಾಚಾರದ ವಿರುದ್ಧ ಹೋರಾಡಲು ಮಾರ್ಚ್ 2017 ರಲ್ಲಿ ಶಂಕರ್ ಸಾಮಾಜಿಕ ನ್ಯಾಯ ಟ್ರಸ್ಟ್ ಅನ್ನು ಪ್ರಾರಂಭಿಸಿದರು. ಈ ಟ್ರಸ್ಟ್ ಜಾತಿ ಹಿಂಸೆಗೆ ಒಳಗಾದ ವ್ಯಕ್ತಿಗಳಿಗೆ ಮಾನಸಿಕ ಸ್ತ್ರೈರ್ಯ, ಕಾನೂನು ಮತ್ತು ನೈತಿಕ ಬೆಂಬಲವನ್ನು ಒದಗಿಸುತ್ತದೆ ಮತ್ತು ಸಾಮಾಜಿಕ ತಾರತಮ್ಯ ಮತ್ತು ಅನ್ಯಾಯದ ವಿರುದ್ಧ ಜಾಗೃತಿ ಮೂಡಿಸುತ್ತದೆ. ಈ ಸಂದರ್ಭದಲ್ಲಿ ಮಾತನಾಡಿದ ಕೌಸಲ್ಯ: “ಮಹಿಳಾ ಇತಿಹಾಸ ಮಾಸ ಆಚರಿಸುವುದು ಕೇವಲ ಅಚರಣೆಗೆ ಮಾಡಬೇಕಾದ ಕೆಲಸ ಅಲ್ಲ. ಇದು ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಪ್ರತಿಜ್ಞೆ ತೆಗೆದುಕೊಳ್ಳುವ ಸಮಯ. ಮನುಷ್ಯರನ್ನು ಅಮಾನವೀಯಗೊಳಿಸುವ ಜಾತಿ ಆಧಾರಿತ ತಾರತಮ್ಯಗಳ ವಿರುದ್ಧ ಹೋರಾಡಲು ನಾನು ನಿರ್ಧರಿಸಿದ ಕ್ಷಣ, ನನಗೆ ಹೊಸ ರೆಕ್ಕೆಗಳೇ ಮೂಡಿದ ಹಾಗೆ ಆಯಿತು. ಇದು ನನಗೆ ಇನ್ನೂ ಎತ್ತರಕ್ಕೆ ಹಾರಲು ಮತ್ತು ಆಕಾಶವನ್ನು ಸ್ಪರ್ಶಿಸಲು ವಿಶ್ವಾಸ ಮತ್ತು ಧೈರ್ಯವನ್ನು ನೀಡಿತು.” ಎಂದರು.
ಯು.ಎಸ್. ಕಾನ್ಸುಲ್ ಜನರಲ್ ಜ್ಯುಡಿತ್ ರೇವಿನ್ ಕೌಸಲ್ಯ ಅವರಿಗೆ ಐಡಬ್ಲ್ಯುಒಸಿ ಪ್ರಶಸ್ತಿ ನಾಮನಿರ್ದೇಶನದ ಪ್ರಮಾಣಪತ್ರವನ್ನು ನೀಡಿದರು. ಸಾಮಾಜಿಕವಾಗಿ ಅಂತರವನ್ನು ಗೌರವಿಸಿ ಸುರಕ್ಷಿತ ದೂರದಲ್ಲೇ ಕುಳಿತಿದ್ದ ಅತಿಥಿಗಳನ್ನು ಉದ್ದೇಶಿಸಿ ಯು.ಎಸ್. ಕಾನ್ಸುಲ್ ಜನರಲ್ ಜ್ಯುಡಿತ್ ರೇವಿನ್ ಮಾತನಾಡಿದರು. “ಅಮೆರಿಕ ಲಿಂಗ ಸಮಾನತೆ, ಸಾಮಾಜಿಕ ಒಳಗೊಳ್ಳುವಿಕೆ, ಮತ್ತು ವಿದೇಶಾಂಗ ನೀತಿಯ ಮುಖ್ಯ ಆದ್ಯತೆಯಾಗಿ ಜಾಗತಿಕವಾಗಿ ಮಹಿಳೆಯರು ಮತ್ತು ಹುಡುಗಿಯರ ಸ್ಥಾನಮಾನವನ್ನು ಉತ್ತಮಗೊಳಿಸಲು ಬದ್ಧವಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರು ಮತ್ತು ಹುಡುಗಿಯರ ಸಂಪೂರ್ಣ ಭಾಗವಹಿಸುವಿಕೆ ಇಲ್ಲದೆ ಜಾಗತಿಕ ಸಮೃದ್ಧಿ, ಭದ್ರತೆ ಮತ್ತು ಸ್ಥಿರತೆಯನ್ನು ಸಾಧಿಸಲು ಸಾಧ್ಯವಿಲ್ಲ. ” ಎಂದರು.

ಪ್ರತಿ ಮಾರ್ಚ್‌ನಲ್ಲಿ ಅಮೆರಿಕದ ಅಧ್ಯಕ್ಷರು ನಮ್ಮ ಸಮಾಜಗಳನ್ನು ನಿರ್ಮಿಸಿದ, ಅದರಲ್ಲಿ ಸುಧಾರಣೆ ತಂದ, ಉತ್ತಮಗೊಳಿಸಿದ ಧೈರ್ಯವಂತ ಮಹಿಳೆಯರು ಮತ್ತು ಹುಡುಗಿಯರ ಛಲವನ್ನು ಎತ್ತಿ ಹಿಡಿಯುವ ಅಸಾಧಾರಣ ಪರಂಪರೆಯ ಮೇಲೆ ಬೆಳಕು ಚೆಲ್ಲುವಂತೆ ಮಹಿಳಾ ಇತಿಹಾಸ ಮಾಸವನ್ನು ಆಚರಿಸುತ್ತಾರೆ. ಈ ವರ್ಷದ ಘೋಷಣೆಯಲ್ಲಿ, ಅಮೆರಿಕದ ಅಧ್ಯಕ್ಷ ಜೋ ಬೈಡನ್ ನಮ್ಮ ನಡುವಿನ ಪ್ರಸ್ತುತ ಬಿಕ್ಕಟ್ಟಿನ ಕ್ಷಣದಲ್ಲಿ, ಮಹಿಳೆಯರು ನಾಯಕತ್ವ ವಹಿಸಿಕೊಂಡು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು. ಲಸಿಕೆ ಸಂಶೋಧಕರಿಂದ ಹಿಡಿದು ಸಾರ್ವಜನಿಕ ಆರೋಗ್ಯ ಅಧಿಕಾರಿಗಳವರೆಗೆ ಹಾಗೂ ಮುಂಚೂಣಿಯಲ್ಲಿರುವ ಅಸಂಖ್ಯಾತ ನಾಯಕತ್ವ ಗುಣಗಳುಳ್ಳ ಮಹಿಳೆಯರು COVID-19 ಅನ್ನು ಸೋಲಿಸಲು ಸತತವಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರು, ಮತ್ತು ವಿಶೇಷವಾಗಿ ವಿವಿಧ ವರ್ಣ ಹಿನ್ನೆಲೆಯ ಮಹಿಳೆಯರು ಕುಟುಂಬಗಳು, ಸಮುದಾಯಗಳಲ್ಲಿ, ಶಿಕ್ಷಣತಜ್ಞರಾಗಿ, ಶಿಶುಪಾಲನಾ ಹೊಣೆ ಹೊತ್ತು, ದಿನಸಿ ಅಂಗಡಿಗಳಲ್ಲಿ ಮತ್ತು ಕೃಷಿ ಭೂಮಿಗಳಲ್ಲಿ ಕೆಲಸ ಮಾಡುತ್ತಾ ಅಮೆರಿಕದ ಅಗತ್ಯ ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಿನಂಶ ಕಾಣಸಿಗುತ್ತಾರೆ, ಈ ವರ್ಷ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಉನ್ನತ ಕಚೇಯ ಕುರ್ಚಿ ಏರುವುದರೊಂದಿಗೆ 232 ವರ್ಷದ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮುಟ್ಟಿರುವುದು ಸರ್ವವಿದಿತ.
ಹಿನ್ನೆಲೆ:2007 ರಲ್ಲಿ ಅಂತರರಾಷ್ಟ್ರೀಯ ಮಹಿಳಾ ಧೈರ್ಯ ಪ್ರಶಸ್ತಿ ಪ್ರಾರಂಭವಾದಾಗಿನಿಂದ, ಯು.ಎಸ್. ಸ್ಟೇಟ್ ಡಿಪಾರ್ಟ್ ಮೆಂಟ್ 75 ಕ್ಕೂ ಹೆಚ್ಚು ದೇಶಗಳ 155 ಕ್ಕೂ ಹೆಚ್ಚು ಮಹಿಳೆಯರನ್ನು ಗುರುತಿಸಿ ಪುರಸ್ಕರಿಸಿದೆ. ಓವರ್ಸೀಸ್ ಯು.ಎಸ್. ಡಿಪ್ಲೋಮ್ಯಾಟಿಕ್ ಮಿಷನ್ ವತಿಯಿಂದ ಆಯಾ ಆತಿಥೇಯ ರಾಷ್ಟ್ರಗಳಿಂದ ಅಸಾಧಾರಣ ಧೈರ್ಯ ತೋರಿದ ಒಬ್ಬ ಮಹಿಳೆಯನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಅಂತಿಮ ಹಂತದಲ್ಲಿ ಹಿರಿಯ ಅಧಿಕಾರಿಗಳಿಂದ ಆಯ್ಕೆ ಮತ್ತು ಅನುಮೋದನೆ ನಡೆಯುತ್ತದೆ. ಯು.ಎಸ್‌. ಸೆಕ್ರೆಟರಿ ಆಫ್‌ ಸ್ಟೇಟ್‌ ಆಂಟನಿ ಬಿಲ್ಕಿನ್‌ ಅವರು ಮಾರ್ಚ್ 8 ರಂದು ನಡೆದ ವರ್ಚುವಲ್‌ ಸಮಾರಂಭದಲ್ಲಿ ನೇಪಾಳದಲ್ಲಿ ಆಸಿಡ್‌ ದಾಳಿಯನ್ನು ಅಪರಾಧ ಎಂದು ಪರಿಗಣಿಸುವ ಹೊಸ ಶಾಸನ ತರಲು ಮತ್ತು ಆಸಿಡ್‌ ದಾಳಿಗೆ ಕಠಿಣ ದಂಡಗಳನ್ನು ವಿಧಿಸುವ ಶಾಸನ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಮುಸ್ಕಾನ್‌ ಖಾತುನ್‌ ಅವರೂ ಸೇರಿದಂತೆ ವಿಶ್ವದ ಹಲವೆಡೆಗಳಲ್ಲಿರುವ ಅಸಾಧಾರಣ ಮಹಿಳೆಯರನ್ನು ಗೌರವಿಸಿದರು. ಅಮೆರಿಕದ ಪ್ರಥಮ ಮಹಿಳೆ ಡಾ. ಜಿಲ್ ಬೈಡನ್‌ ಅವರು ಈ ಸಮಾರಂಭದಲ್ಲಿ ಮಾತನಾಡಿದರು.
ಈ ವರ್ಷದ IWOC ಪ್ರಶಸ್ತಿ ಪಾತ್ರರ ಬಗೆಗಿನ ಹೆಚ್ಚಿನ ಮಾಹಿತಿಗೆ:https://www.state.gov/2021-international-women-of-courage-award-recipients-announced/
ಸವಾಲುಗಳ ನಡುವೆ ಮೇಲೇರುವುದೇ ಸಂಭ್ರಮ; ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + 2 =
Remember me
