ಲಖನೌ:ಮದುವೆಯಾಗುವ ಭರವಸೆ ಕೊಟ್ಟು ಲಿವ್​ ಇನ್​ ಸಂಬಂಧದಲ್ಲಿ ಇದ್ದು, ದೈಹಿಕ ಸಂಪರ್ಕವನ್ನೂ ಬೆಳೆಸಿ ಕೊನೆಗೆ ಮದುವೆಗೆ ನಿರಾಕರಿಸಿದ ಪ್ರಿಯತಮನನ್ನು ಪೀಸ್​ ಪೀಸ್​ ಮಾಡಿದ ಯುವತಿಯೊಬ್ಬಳು ಆತನ ಮೃತದೇಹವನ್ನು ಸೂಟ್​ಕೇಸ್​ನಲ್ಲಿ ಹೆಣವನ್ನು ಸಾಗಿಸುವಾಗ ಸಿಕ್ಕಿಬಿದ್ದ ಭಯಾನಕ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.
ಪ್ರಿಯಕರನ ಕತ್ತನ್ನು ರೇಜರ್‌ನಿಂದ ಸೀಳಿ ಬರ್ಬರವಾಗಿ ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ಪ್ಯಾಕ್ ಮಾಡಿರುವ ಆರೋಪ ಎದುರಿಸುತ್ತಿದ್ದಾಳೆ ಪ್ರೀತಿ ಶರ್ಮಾ ಎಂಬ ಯುವತಿ. ಈಕೆ ಮತ್ತು ಫಿರೋಜ್ ಅಲಿಯಾಸ್ ಚ್ವಾನಿ ಇಬ್ಬರೂ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಜತೆಯಲ್ಲಿಯೇ ಅನೇಕ ವರ್ಷ ಇದ್ದರು. ಈ ವೇಳೆ ಅನೇಕ ಬಾರಿ ಈಕೆಯ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಫಿರೋಜ್​. ಮೊದಲಿಗೆ ಮದುವೆಯಾಗುವ ಭರವಸೆ ನೀಡಿ ತನಗೆ ಬೇಕಾದಷ್ಟು ದಿನ ಸಂಪರ್ಕದಲ್ಲಿ ಇದ್ದಾನೆ.
ಕೊನೆಗೆ ಯುವತಿ, ಪದೇ ಪದೇ ಮದುವೆಯ ವಿಷಯ ಎತ್ತಿದ್ದಾಳೆ. ಆಗ ಆತ ಇದಕ್ಕೆ ಒಪ್ಪಲಿಲ್ಲ. ತಮ್ಮದು ಬೇರೆ ಬೇರೆ ಧರ್ಮ ಆಗಿರುವ ಕಾರಣ ಮದುವೆ ಸಾಧ್ಯವಿಲ್ಲ ಎಂದಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಿವಾದ ನಡೆದಿದೆ. ಎಷ್ಟೇ ಕೋರಿಕೊಂಡರೂ ಆತ ಮದುವೆಗೆ ಒಪ್ಪಲಿಲ್ಲ. ಬದಲಿಗೆ ಆತ ನೀನು ನಡತೆ ಗೆಟ್ಟವಳು ಎಂದು ನಿಂದಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಯುವತಿ, ಕತ್ತನ್ನು ರೇಜರ್‌ನಿಂದ ಸೀಳಿ ಬರ್ಬರವಾಗಿ ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ಪ್ಯಾಕ್ ಮಾಡಿದ್ದಾಳೆ.

ನಂತರ ಹೆಣವನ್ನು ಸಾಗಿಸಲು ಯತ್ನಿಸುತ್ತಿದ್ದಳು. ತಡರಾತ್ರಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಮಹಿಳೆಯೊಬ್ಬರು ಕಪ್ಪು ಟ್ರಾಲಿ ಬ್ಯಾಗ್ ಹಿಡಿದುಕೊಂಡು ನಡೆದು ಬರುತ್ತಿರುವುದನ್ನು ಗಮನಿಸಿ ಸಂದೇಹಗೊಂಡಿದ್ದಾರೆ. ಪ್ರಶ್ನಿಸಿದಾಗ ಪ್ರೀತಿ ತಡವರಿಸಿದ್ದಾಳೆ. ನಂತರ ಕಾನ್​ಸ್ಟೆಬಲ್​ ಸೂಟ್‍ಕೇಸ್​ ತೆರೆದಾಗ ಶವ ಕಂಡಿದೆ.
ಯುವತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯಿಬಿಟ್ಟಿದ್ದಾಳೆ. ಇಷ್ಟು ವರ್ಷ ತನ್ನನ್ನು ಮದುವೆಯಾಗುವುದಾಗಿ ಬಳಸಿಕೊಂಡು ನಂತರ ನಡತೆಗೆಟ್ಟವಳು ಎಂದು ಹೇಳಿದ್ದರಿಂದ ಕೋಪಗೊಂಡು ಹೀಗೆ ಮಾಡಿದೆ ಎಂದಿದ್ದಾಳೆ.
ಈತನ ಕೊಂದು ಶವ ಹಾಕಲು ಟ್ರಾಲಿ ಬ್ಯಾಗ್ ಖರೀದಿಸಿದ್ದೆ. ಅದರೊಳಗೆ ಶವವನ್ನು ತುಂಬಿಕೊಂಡು ಗಾಜಿಯಾಬಾದ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಹಳಿಯ ಮೇಲೆ ಎಸೆಯಲು ಹೋಗುತ್ತಿದ್ದೆ ಎಂದಿದ್ದಾಳೆ. ಆದರೆ ಅದಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ(ಏಜೆನ್ಸೀಸ್​)
ತನ್ನದೇ ಮದ್ವೆಗೆ ಮದುಮಗಳು ಹೋಗಿದ್ದೇ ತಪ್ಪಾಗೋಯ್ತು! ಕೆಲ ಮುಸ್ಲಿಂ ಮುಖಂಡರ ಕಿಡಿ- ಕ್ಷಮೆಗೆ ಆಗ್ರಹ

ಕಡಿಮೆ ದರದ ಚೀನಾ ಫೋನ್​ಗಳಿಗೂ ಬಂತು ಕುತ್ತು? ಯಾವೆಲ್ಲಾ ಕಂಪೆನಿಗಳ ಮೇಲೆ ಪ್ರಭಾವ ಬೀರಬಹುದು ನೋಡಿ..

ಕೂದಲು ಹರಡಿಕೊಂಡಿದ್ದ ಸುಂದರಿ ಸಿಕ್ಕಿದ್ಲು… ಕೆಳಗೆ ನೋಡಿದ್ರೆ… ಸ್ಪರ್ಧಿಗಳನ್ನು ಬೆಚ್ಚಿಬೀಳಿಸಿದ ಆರ್ಯವರ್ಧನ್ ಗುರೂಜಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 2 =
Remember me
