ಚೆನ್ನೈ:ಪ್ರತಿಭಾನ್ವಿತೆಯಾಗಿರುವ ಯುವತಿಯೊಬ್ಬಳು, ಐಎಎಸ್​ ಮಾಡುವ ಕನಸು ಇಟ್ಟುಕೊಂಡು ಹಗಲೂ ರಾತ್ರಿ ಶ್ರಮಿಸುತ್ತಿದ್ದಾಕೆಯ ಜೀವಕ್ಕೆ ಕುತ್ತಾಗಿ ಹೋಯ್ತು ಪ್ರೇಮ! ಪ್ರೇಮಿಯ ನೋಡಲು ಸಾಹಸ ಮಾಡಲು ಹೋಗಿ ಈಕೆ ಜೀವ ಕಳೆದುಕೊಂಡಿದ್ದಾಳೆ!
ಚೆನ್ನೈನಲ್ಲಿ ನಾಮಕ್ಕಲ್ ಜಿಲ್ಲೆಯ, 25 ವರ್ಷದ ಮಖಿಲಮತಿ ಜೀವ ಕಳೆದುಕೊಂಡಾಕೆ. ಎಂಎಸ್ಸಿ, ಭೌತಶಾಸ್ತ್ರ ಪದವೀಧರಳಾಗಿದ್ದ ಈಕೆ ಐಎಎಸ್​ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಈಕೆ ಅದೆಷ್ಟೋ ಕನಸುಗಳನ್ನು ಇಟ್ಟುಕೊಂಡಾಕೆ. ಐಎಎಸ್​ ಅಧಿಕಾರಿಯಾಗಲೇಬೇಕೆಂದು ಪಣತೊಟ್ಟು ಹಗಲು-ರಾತ್ರಿ ಓದುತ್ತಿದ್ದಾಕೆ. ಆದರೆ ಆಕೆ ಕನಸು ನನಸು ಮಾಡಿಕೊಳ್ಳುವ ಮೊದಲೇ ಜೀವ ಕಳೆದುಕೊಂಡಿದ್ದಾಳೆ.
ಆಗಿದ್ದೇನೆಂದರೆ, ಮಖಿಲಮತಿ, ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬನನ್ನು ಪ್ರೀತಿಸುತ್ತಿದ್ದಳು. ಈಕೆ ವಾಸವಾಗಿರುವ ಅಪಾರ್ಟ್‌ಮೆಂಟ್​ನಲ್ಲಿಯೇ ಯುವಕ 3ನೇ ಮಹಡಿಯಲ್ಲಿ ವಾಸವಾಗಿದ್ದ. ಇವರಿಬ್ಬರೂ ಸದಾ ಭೇಟಿಯಾಗುತ್ತಿದ್ದರು ಎನ್ನಲಾಗಿದೆ. ನಿನ್ನೆ ಈಕೆ ಆತನನ್ನು ನೋಡಲು ರಾತ್ರಿ ಹೋಗಿದ್ದಾಳೆ. ಸ್ನೇಹಿತನ ಮನೆಗೆ ಬಂದು ಬಾಗಿಲು ತಟ್ಟಿದ್ದಾಳೆ. ಆದರೆ ಬಾಗಿಲು ತೆರೆಯಲಿಲ್ಲ. ಮೊಬೈಲ್‌ಗೆ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಗಾಬರಿಗೊಂಡ ಮಖಿಲಮತಿ, ತಾನಿರುವ ಮಹಡಿಯಿಂದ ಮೂರನೇ ಫ್ಲೋರ್​ಗೆ ಸೀರೆಯನ್ನು ಇಳಿಬಿಟ್ಟು ಹಿಂಬಾಗಿಲಿನ ಮೂಲಕ ಮನೆಗೆ ಪ್ರವೇಶಿಸಲು ಯೋಜಿಸಿದ್ದಳು. ಅದರಂತೆ ಸೀರೆಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕೆಳಗೆ ಇಳಿಯುತ್ತಿದ್ದಳು. ಈ ಸಂದರ್ಭದಲ್ಲಿ ಸೀರೆ ಹರಿದು ಹೋಗಿದೆ. 3ನೇ ಮಹಡಿಯಿಂದ ಬಿದ್ದು ಸ್ಥಳದಲ್ಲೇ ಈಕೆ ಮೃತಪಟ್ಟಿದ್ದಾಳೆ!
ಸ್ನೇಹಿತನ ವಿಚಾರಣೆಯನ್ನು ಪೊಲೀಸರು ಮಾಡಿದಾಗ ಈ ವಿಷಯ ತಿಳಿದುಬಂದಿದೆ. ಆತ ಕಚೇರಿಯಿಂದ ಸುಸ್ತಾಗಿ ಮನೆಗೆ ಬಂದು ಗಾಢ ನಿದ್ದೆಗೆ ಹೋಗಿದ್ದರಿಂದ ಯುವತಿ ಬಾಗಿಲು ಬಡಿದದ್ದು ಕೇಳಿಸಲಿಲ್ಲ, ಫೋನ್​ ರಿಂಗ್​ ಆಗಿದ್ದೂ ಗೊತ್ತಾಗಲಿಲ್ಲ ಎಂದಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪತ್ನಿಗೆ ಟಾರ್ಚರ್​ ಕೊಡ್ತಿದ್ದ- ಯುವತಿಯನ್ನು ಮಂಚಕ್ಕೆ ಕರೀತಿದ್ದ: ಅಸಲಿಯತ್ತು ಗೊತ್ತಾಗಿ ತಲೆತಿರುಗಿ ಬಿದ್ದ ಪೊಲೀಸಪ್ಪ​!

9 ವರ್ಷದ ಬಾಲಕನನ್ನು ಮದ್ವೆಯಾಗಿ ಭಾರಿ ಸುದ್ದಿ ಮಾಡಿದ್ದ ನಟಿಗಿಂದು ಹುಟ್ಟುಹಬ್ಬದ ಸಂಭ್ರಮ

ಅಬ್ಬಾ! ಇಂಥ ಸುಂದ್ರಿ ನನಗೆ ಸಿಕ್ಕಳಾ ಎಂದುಕೊಳ್ಳುವ ಹುಡುಗರೇ ಹುಷಾರ್​: ಈ ಏಳನೇ ಗಂಡನ ಕಥೆ ಕೇಳಿ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
