ನವದೆಹಲಿ:ರೈಲು ಹಳಿಯನ್ನು ದಾಟುವ ಭರದಲ್ಲಿ ಆಗುತ್ತಿರುವ ಅಚಾತುರ್ಯಗಳಿಗೆ ಲೆಕ್ಕವೇ ಇಲ್ಲವಾಗಿದೆ. ಎಷ್ಟೋ ಸಮಯದಲ್ಲಿ ಕಿವಿಗೆ ಇಯರ್​ಫೋನ್​ ಹಾಕಿಕೊಂಡೋ ಇಲ್ಲವೇ ಮೊಬೈಲ್​ಫೋನ್​ನಲ್ಲಿ ಮಾತನಾಡುತ್ತ ಈ ಲೋಕದ ಅರಿವೇ ಇಲ್ಲದೇ ಗೇಟ್​ ದಾಟುತ್ತಿರುವ ಸಮಯದಲ್ಲಿ ಇಹಲೋಕ ತ್ಯಜಿಸಿದವರು ಅದೆಷ್ಟೋ ಮಂದಿ.
ಇದು ಒಂದೆಡೆಯಾದರೆ, ರೈಲು ಇನ್ನೂ ದೂರವಿದೆಯಲ್ಲ, ಅಲ್ಲಿಯವರೆಗೆ ದಾಟಿಕೊಂಡು ಬಿಡುವ ಎನ್ನುವ ಅವಸರದಲ್ಲಿ ದಾಟಲು ಹೋಗಿ ರೈಲಿಗೆ ಸಿಲುಕಿ ಸತ್ತವರೂ ಲೆಕ್ಕಕ್ಕಿಲ್ಲ. ಅಂಥದ್ದೇ ಒಂದು ಘಟನೆಯ ವಿಡಿಯೊ ಇದೀಗ ವೈರಲ್​ ಆಗಿದೆ.
ಆದರೆ ಅದೃಷ್ಟವಶಾತ್​ ಬೈಕ್​ ಸವಾರ ಆ ಒಂದು ಸೆಕೆಂಡ್​ನಲ್ಲಿ ತೆಗೆದುಕೊಂಡ ನಿರ್ಧಾರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ, ಆದರೆ ಆತನ ಬೈಕ್​ ಮಾತ್ರ ಪೀಸ್​ಪೀಸ್​ ಆಗಿ ಚೆಲ್ಲಾಪಿಲ್ಲಿಯಾಗಿಹೋಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ರೈಲು ಬರುವ ಸಮಯದಲ್ಲಿ ಗೇಟ್​ ಹಾಕಲಾಗಿತ್ತು. ರೈಲ್ವೆ ಹಳಿಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಆದರೆ ರೈಲು ಬರುವುದು ಇನ್ನೂ ಲೇಟ್​ ಇದೆ ಎಂದುಕೊಂಡ ಬೈಕ್​ ಸವಾರನೊಬ್ಬ ಆದಷ್ಟು ಬೇಗ ದಾಟಿ ಬಿಡುವ ಎಂದು ಬೈಕ್​ ಮೇಲೆ ಹೋಗಲು ನೋಡಿದ್ದಾನೆ. ಆದರೆ ರೈಲು ಹತ್ತಿರ ಬಂದಿದೆ. ಅವನ ಜೀವ ಗಟ್ಟಿ ಇತ್ತು ಎಂದು ಕಾಣಿಸುತ್ತದೆ. ಆ ಒಂದು ಕ್ಷಣ ಏನೋ ತೋಚಿ ಬೈಕ್ ಹಿಂದಕ್ಕೆ ತೆಗೆದುಕೊಳ್ಳಲು ನೋಡಿದ್ದಾನೆ.
ಆದರೆ ರೈಲು ಇನ್ನೂ ಹತ್ತಿರ ಬಂದಿದ್ದರಿಂದ ಬೈಕ್​ ಅಲ್ಲೇ ಬಿಟ್ಟು ದೂರ ಸರಿದಿದ್ದಾನೆ. ರಭಸದಿಂದ ಬಂದ ರೈಲಿನ ಅಡಿ ಬೈಕ್​ ಸಿಕ್ಕಿ ಪೀಸ್​ ಪೀಸ್​ ಆಗಿ ಚೆಲ್ಲಾಪಿಲ್ಲಿಯಾಗಿದೆ. ಈತ ಬದುಕುಳಿದಿದ್ದಾನೆ. ಇದರ ವಿಡಿಯೋ ವೈರಲ್​ ಆಗಿದೆ.ಬೈಕ್​ ಸವಾರನ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅವನೇನೋ ಪ್ರಾಣಾಪಾಯದಿಂದ ಪಾರಾದ. ಆದರೆ ​ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸಿಡಿದಿದ್ದರೆ ಭಾರಿ ಅನಾಹುತವಾಗುವ ಸಾಧ್ಯತೆ ಇತ್ತು ಎಂದು ಕಮೆಂಟ್​ ಮಾಡಲಾಗಿದೆ.
ಭಾರತೀಯ ರೈಲು ಎಂದು ರೈಲಿನ ಮೇಲೆ ಬರೆಯಲಾಗಿದ್ದು, ಈ ಘಟನೆ ನಡೆದ ಸ್ಥಳ ಮಾತ್ರ ಯಾವುದು ಎನ್ನುವುದು ಸ್ಪಷ್ಟವಾಗಿಲ್ಲ.
ರಾಯ್ತ ತಯಾರಿಸಿ ಬಿರಿಯಾನಿ ಸವಿದ ರಾಹುಲ್​- ‘ನಲ್ಲ ಇರಕು’, ಅಮೆರಿಕಕ್ಕೂ ಕಳಿಸ್ತೇನೆ ಎಂದರು!

https://www.vijayavani.net/s-ragini-sanjana-came-outside/
ವೃದ್ಧರನ್ನು ಟ್ರಕ್​ನಿಂದ ತಳ್ಳುತ್ತಿರುವ ಅಧಿಕಾರಿ! ಭಯಾನಕ ವಿಡಿಯೋ ವೈರಲ್- ಉಪ ಆಯುಕ್ತ ಸಸ್ಪೆಂಡ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − 9 =
Remember me
