ಬ್ರಿಟನ್‌:ಕರೊನಾ, ಲಾಕ್‌ಡೌನ್‌ ಕಾರಣದಿಂದಾಗಿ ಅನೇಕ ದೇಶಗಳಲ್ಲಿ ಆಹಾರದ ಕೊರತೆಯುಂಟಾಗಿದೆ. ಇನ್ನಂತೂ ಕೆಲವು ದೇಶಗಳಲ್ಲಿ ಇರುವ ಜೈಲುಗಳಲ್ಲಿ ಕೈದಿಗಳಿಗೆ ಸಂಕಷ್ಟ ಎದುರಾಗಿದೆ.
ಅಂಥದ್ದೇ ಒಂದು ಸಂಕಷ್ಟ ಎದುರಾದದ್ದು ಬ್ರಿಟನನ್‌ ಜೈಲೊಂದರಲ್ಲಿ. ಅಲ್ಲಿನ ಕೈದಿಗಳಿಗೆ ಆಹಾರ ಸಂಕಷ್ಟ ಎದುರಾಗಿತ್ತು. ಅದಕ್ಕೇ ಕೈದಿಯೊಬ್ಬ ಸಮೋಸಾ ಮಾಡುವ ಸ್ಥಳಕ್ಕೆ ಹೋಗಿದ್ದು, ಅಲ್ಲಿಂದ ಒಂದಿಷ್ಟು ಸಮೋಸಾ ಕದ್ದುಬಿಟ್ಟಿದ್ದಾನೆ. ಆದರೆ ಅದನ್ನು ಇಟ್ಟುಕೊಳ್ಳುವುದು ಹೇಗೆ? ಎಲ್ಲರ ಕಣ್ಣು ತಪ್ಪಿಸಿ ಇಟ್ಟುಕೊಳ್ಳಬೇಕು ಎಂದರೆ ಅದಕ್ಕಿರುವುದು ಒಂದೇ ಜಾಗ, ಅದೇ ಬಟ್ಟೆಯ ಒಳಗೆ ಯಾರೂ ನೋಡದಂತೆ ಇಟ್ಟುಕೊಳ್ಳುವುದು.
ಅದೇ ಪ್ಲ್ಯಾನ್‌ ಮಾಡಿದ್ದ ಈ ಕೈದಿ ಸಮೋಸಾಗಳನ್ನು ಬಟ್ಟೆಯೊಳಗೆ ಇಟ್ಟುಕೊಂಡಿದ್ದಾನೆ. ಆದರೆ ಬರೀ ಬಟ್ಟೆಯಲ್ಲಿ ಇಟ್ಟುಕೊಂಡರೆ ಅದು ಜೈಲಧಿಕಾರಿಗಳ ಗಮನಕ್ಕೆ ಹೋಗಬಹುದು ಎಂದು ನಂತರ ಅದನ್ನು ತನ್ನ ಚಡ್ಡಿಯೊಳಕ್ಕೆ ಹಾಕಿಕೊಂಡಿದ್ದಾನೆ. ಅಲ್ಲಿಯೂ ಗೊತ್ತಾಗಿಬಿಟ್ಟರೆ ಎನ್ನುವ ಕಾರಣಕ್ಕೆ ಸಮೋಸಾಗಳನ್ನು ಗುದದ್ವಾರದ ಒಳಗೆ ತುರುಕಿಕೊಂಡು ಹೋಗಿದ್ದಾನೆ.
ಆದರೆ ಆತನ ಗ್ರಹಚಾರ ಕೆಟ್ಟಿತ್ತು. ಅಂತೂ ಜೈಲಧಿಕಾರಿಗಳ ಕೈಗೆ ಸಿಕ್ಕಿಬಿದ್ದ. ಆತನ ತಪಾಸಣೆ ಮಾಡಿದಾಗ ಗುದದ್ವಾರದೊಳಗೆ ಸಮೋಸಾಗಳು ಕಾಣಿಸಿವೆ. ಆತನನ್ನು ಬಂಧಿಸಿ ಪ್ರಶ್ನೆ ಮಾಡಿದಾಗ, ತನಗಾಗುತ್ತಿರುವ ಹಸಿವಿನ ಸಂಕಟವನ್ನು ಆತ ಹೇಳಿಕೊಂಡಿದ್ದಾನೆ.
ಜೈಲಿನಲ್ಲಿ ಊಟ ಸರಿಯಾಗಿ ನೀಡುತ್ತಿಲ್ಲ. ಆಹಾರದ ಕೊರತೆಯಿಂದ ಕೈದಿಗಳು ಕಂಗಾಲಾಗಿದ್ದಾರೆ. ಆದ್ದರಿಂದ ಎಲ್ಲರಿಗೂ ಆಗಲಿ ಎಂಬ ಕಾರಣಕ್ಕೆ ಸಮೋಸಾ ಕದ್ದುಕೊಂಡು ಬಂದಿದ್ದೇನೆ ಎಂದಿದ್ದಾನೆ. ಪೊಲೀಸರಿಗೆ ಅಯ್ಯೋ ಪಾಪ ಎನಿಸಿ ಆತನನ್ನು ಬಿಟ್ಟು, ಕೈದಿಗಳಿಗೆ ಸರಿಯಾದ ಆಹಾರ ಪೂರೈಕೆ ಮಾಡಲು ಆದೇಶಿಸಿದರಂತೆ.
ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಲೇ ನಿಗೂಢ ಕಣ್ಮರೆಯಾದ ಜಗತ್ತಿನ ಸಿರಿವಂತ! ಏನಿದರ ರಹಸ್ಯ?

ಅವಿವಾಹಿತರೇ… ವಿಚ್ಛೇದಿತರೇ ಎಚ್ಚರ ಎಚ್ಚರ… ಪುಕ್ಕಟೆ ಸಿಕ್ಕಳೆಂದು ಹೋದವರ ಕಥೆ ಏನಾಯ್ತು ನೋಡಿ…

ಆಂಧ್ರದ ಟಿಡಿಪಿ ನಾಯಕನ ಭೀಕರ ಹತ್ಯೆ: ಗಂಟಲು ಸೀಳಿ ಕೊಲೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 2 =
Remember me
