ನಾನು ೭೦ ವರ್ಷದ ನಿವೃತ್ತ ಕೋ ಆಪರೇಟೀವ್ ಬ್ಯಾಂಕ್ ಅಧಿಕಾರಿ. ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ನನ್ನ ಹೆಂಡತಿ ಮಕ್ಕಳು ಸಿಟಿಯಲ್ಲಿದ್ದಾರೆ. ನಾನು ಮಾತ್ರ ಹಳ್ಳಿಯಲ್ಲಿದ್ದೇನೆ. ನನ್ನ ಉದ್ಯೋಗದ ಜೀವನ ಪ್ರಾರಂಭವಾದಾಗ ಗೆಳೆಯರ ಸಹವಾಸದಿಂದ ಇಸ್ಪೀಟ್ ಜೂಜಾಡಿ ಸರ್ವಸ್ವವನ್ನೂ ಕಳೆದುಕೊಂಡೆ.
ಆದರೂ ನಾನು ನಿವೃತ್ತನಾಗುವತನಕ ನನ್ನ ಹೆಂಡತಿ ಮತ್ತು ಮಕ್ಕಳಿಗೆ ಊಟ ಉಪಚಾರಗಳಿಗೆ ತೊಂದರೆಯಾಗದಂತೆ ನಿಭಾಯಿಸಿದೆ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೂ ತೊಂದರೆಯಾಗದಂತೆ ನೋಡಿಕೊಂಡೆ. ಈಗ ಮಕ್ಕಳು ವ್ಯಾಪಾರವನ್ನು ಮಾಡುತ್ತಾ ತಮ್ಮ ಕಾಲಮೇಲೆ ತಾವು ನಿಂತಿದ್ದಾರೆ. ತಾಯಿಯನ್ನೂ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಆದರೆ ನಾನು ಮಾತ್ರ ನನ್ನ ಜೀವನೋಪಾಯಕ್ಕಾಗಿ ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಬದುಕುತ್ತಿದ್ದೇನೆ. ನಾನು ಮಾಡಿದ ವೃತ್ತಿ ಕೋಆಪರೇಟೀವ್ ಬ್ಯಾಂಕ್ ಕೆಲಸವಾದ್ದರಿಂದ ನನಗೆ ಪೆನ್ಷನ್ ಬರುವುದಿಲ್ಲ. ನನ್ನ ಕೊನೆಯ ಘಳಿಗೆಯವರೆಗೆ ನನ್ನ ತುತ್ತಿನಚೀಲ ತುಂಬಿಸಲು ನಾನು ದುಡಿಯಲೇ ಬೇಕು. ನಾನು ಆಗ ಮಾಡಿದ ತಪ್ಪಿಗೆ ಈಗ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ.
ಮಕ್ಕಳು ಮತ್ತು ಹೆಂಡತಿ ನನ್ನನ್ನು ಮನೆಗೆ ಸೇರಿಸುವುದಿಲ್ಲ. ಹಬ್ಬಹರಿದಿನದಲ್ಲಿ ಒಂದು ದಿನ ಮಾತ್ರ ಹೋಗಿಬರುತ್ತೇನೆ. ಅವರೊಂದಿಗೆ ಹೆಚ್ಚು ದಿನವಿರಲು ಅವರು ಅವಕಾಶ ಕೊಡುವುದಿಲ್ಲ. ನನ್ನ ಹೆಂಡತಿ ನನ್ನ ಜೊತೆ ಮಾತಾಡಿ ೧೨ ವರ್ಷವಾಯಿತು. ನಾನು ಅಪರಾಧ ಮಾಡಿದ್ದೇನೆ. ಈಗ ಕಾಲ ಮಿಂಚಿಹೋಗಿದೆ ಮತ್ತು ಮನವರಿಕೆಯಾಗಿದೆ. ಆದರೆ ಅವರು ನನ್ನನ್ನು ನಂಬಲು ಮತ್ತು ಗೌರವಿಸಲು ತಯಾರಿಲ್ಲ. ನನಗೂ ವಯಸ್ಸಾಗುತ್ತಿದೆ. ಮುಂದೆ ಏನು ಮಾಡುವುದು ಎನ್ನುವ ಚಿಂತೆ ಕಾಡುತ್ತಿದೆ. ದಯವಿಟ್ಟು ಇದಕ್ಕೊಂದು ಪರಿಹಾರ ತಿಳಿಸಿ.
ಉತ್ತರ: ನಿಮ್ಮ ಪತ್ರದಲ್ಲಿ ನಿಮ್ಮ ಈಗಿನ ನೋವೇ ಹೆಚ್ಚು ವರ್ಣಿತವಾಗಿದೆ. ನೀವು ಸರ್ವಸ್ವವನ್ನೂ ಕಳೆದುಕೊಂಡೆ ಎಂದು ಬರೆದಿದ್ದೀರಿ. ಅಂದರೆ ಮನೆಮಠಗಳನ್ನೂ ಕಳೆದುಕೊಂಡಿರಬೇಕಲ್ಲವೇ? ಆಗ ನಿಮ್ಮ ಹೆಂಡತಿಯೂ ನಿಮ್ಮ ಕಾರಣವಾಗಿಯೇ ಕಷ್ಟಪಟ್ಟಿದ್ದಾರೆ. ಆ ಕಷ್ಟಗಳು ತುಂಬಾ ಗುರುತರವಾಗಿಯೇ ಇದ್ದಿರಬೇಕು.ಅದಕ್ಕೇ ೧೨ವರ್ಷಗಳಾದರೂ ನಿಮ್ಮೊಂದಿಗೆ ಮಾತಾಡಲು ಅವರು ಮನಸ್ಸು ಮಾಡುತ್ತಿಲ್ಲ. ಆಗ ಅವರಲ್ಲಿ ಹುಟ್ಟಿದ ಕೋಪ ಮತ್ತು ಹಠಗಳು ಇನ್ನೂ ಮರೆಯಾಗಿಲ್ಲ. ಆದ್ದರಿಂದಲೇ ಅವರು ನಿಮ್ಮನ್ನು ನಂಬುತ್ತಿಲ್ಲ. ಈಗ ನೀವು ಹೇಗೂ ದುಡಿಯುತ್ತಿದ್ದೀರಿ. ಈಗಲಾದರೂ ಸ್ವಲ್ಪ ಹಣವನ್ನು ಉಳಿಸಿ. ನಿಮ್ಮ ಮುಂದಿನ ಜೀವನದ ಬಗ್ಗೆ ತೀರಾ ನೀವು ಹತಾಶರಾಗಬೇಕಿಲ್ಲವೆನಿಸುತ್ತಿದೆ. ನೀವೀಗ ಹೇಗೂ ದುಡಿಯುತ್ತಿದ್ದೀರೆಂದು ತಿಳಿದಿರುವುದರಿಂದಲೇ ಅವರೆಲ್ಲಾ ಸುಮ್ಮನಿದ್ದಾರೆ. ನಾಳೆ ನಿಮಗೆ ದುಡಿಯಲು ಸಾಧ್ಯವೇ ಇಲ್ಲದಾಗ, ಮತ್ತು ಕಾಯಿಲೆಯೇನಾದರೂ ಬಂದದ್ದು ತಿಳಿದರೆ ಅವರು ಖಂಡಿತಾ ನಿಮ್ಮನ್ನು ನೋಡಿಕೊಳ್ಳಬಹುದು. ನೀವು ಹಬ್ಬಹರಿದಿನಗಳಿಗೆ ಹೋದಾಗ ಆದರಿಸುವವರು ಅಷ್ಟೇನೂ ಕಠಿಣಹೃದಯದವರಲ್ಲವೆನಿಸುತ್ತದೆ.
ನೀವೊಮ್ಮೆ ಅವರೆಲ್ಲರ ಮುಂದೆ ನೀವು ಮಾಡಿದ ತಪ್ಪೆಲ್ಲವನ್ನೂ ಒಪ್ಪಿಕೊಂಡು ಕ್ಷಮಾಪಣೆಯನ್ನು ಹೃದಯಾಳದಿಂದ ಕೇಳಿಕೊಳ್ಳಿ. ಖಂಡಿತಾ ಕ್ಷಮಿಸದಿರುವಷ್ಟು ಕಲ್ಲು ಮನಸ್ಸಿನವರು ಆಗಲಾರರು ಎನಿಸುತ್ತದೆ. ಈ ಕೆಲಸ ನಿಮ್ಮ ಅಹಮಿಕೆಗೆ ಒಗ್ಗುವುದಿಲ್ಲವೆಂದಾದರೆ, ನೀವು ಕಾನೂನಿನ ಮೊರೆ ಹೋಗಬಹುದು. ವೃದ್ಧರ ಸಹಾಯವಾಣಿಗೆ ಫೋನ್ ಮಾಡಿ, ನಿಮ್ಮ ಸ್ಥಿತಿಗತಿಗಳನ್ನು ತಿಳಿಸಿ, ನಿಮ್ಮ ಮಕ್ಕಳು ಮತ್ತು ಹೆಂಡತಿಯ ಜೊತೆ ಸಂಧಾನ ಮಾಡಿಸಲು ವಿನಂತಿಸಬಹುದು. ಅದಿಲ್ಲದಿದ್ದರೆ ವಕೀಲರನ್ನು ಕಂಡು ಮಕ್ಕಳು ನಿಮ್ಮನ್ನು ನೋಡಿಕೊಳ್ಳಲೇ ಬೇಕಾದ ಹಕ್ಕಿಗಾಗಿ ನ್ಯಾಯಾಲಯದಲ್ಲಿ ಕೇಸು ಹಾಕಬಹುದು.
ಈಗ ಸುಪ್ರೀಂ ಕೋರ್ಟ್ ಆರ್ಡರಿನಂತೆ ಉದ್ಯೋಗಸ್ಥ ಮಕ್ಕಳು ತಂದೆತಾಯಿಯರನ್ನು ನೋಡಿಕೊಳ್ಳದೇ ಇದ್ದರೆ ಅದು ಅಪರಾಧವೆಂದು ಪರಿಗಣಿತವಾಗುತ್ತದೆ. ಕೋರ್ಟು ನಿಮಗೆ ತಿಂಗಳಿಗೆ ಇಷ್ಟೆಂದು ಬದುಕಲು ಜೀವನಾಂಶ ಕೊಡಿಸುತ್ತದೆ. ಮೊದಲು ಸಾತ್ವಕ ರೀತಿಯಲ್ಲಿ ಶರಣಾಗತರಾಗಿ ಪ್ರಯತ್ನಿಸಿ. ಅದು ಆಗದಿದ್ದರೆ, ವೃದ್ಧರ ಸಹಾಯವಾಣಿಯ ಪಂಚಾಯಿತಿಕೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ ನೋಡಿ, ಕಡೆಯ ಪ್ರಯತ್ನವೆಂದರೆ ಕೋರ್ಟಿನ ಮೊರೆಹೋಗುವುದು. ಸುಮ್ಮನೇ ಭವಿಷ್ಯದಲ್ಲಿ ಕತ್ತಲೆಯೇ ತುಂಬಿದೆ ಎಂದು ಹಲುಬುತ್ತಾ ಕುಳಿತರೆ ಯಾವ ಪರಿಹಾರವೂ ಸಾದ್ಯವಿಲ್ಲ. ಪ್ರಯತ್ನ ಪಡಬೇಕು. ಫಲ ಖಂಡಿತಾ ಸಿಗುತ್ತದೆ.
ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:
https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/
ಅಮ್ಮ ವಿವಾಹಿತನ ಜತೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾಳೆ- ಭಾವಿ ಪತಿಗೆ ಹೇಗೆ ತಿಳಿಸಲಿ?

https://www.vijayavani.net/s-nandondu-kathe-patniya-sameepa-31-12/
ಅಮ್ಮನಿಗಾಗಿ ಬದುಕಬೇಕೆಂದು ಹುಡುಗನನ್ನು ನಿರಾಕರಿಸಿ ಈಗ ಒದ್ದಾಡುತ್ತಿದ್ದೇನೆ- ಏನು ಮಾಡಲಿ?

ಬೇರೆ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡಲ್ಲ, ಆದರೂ ಪತ್ನಿ ಒದೀತಾಳೆ, ಹೊಡೀತಾಳೆ… ಏನು ಮಾಡಲಿ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − eighteen =
Remember me
