ನಾಸಿಕ್​ (ಮಹಾರಾಷ್ಟ್ರ):ಕರೊನಾ ಈಗ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಮಹಾರಾಷ್ಟ್ರವಂತೂ ಅಕ್ಷರಶಃ ಕರೊನಾದಿಂದ ಮತ್ತೊಮ್ಮೆ ನಲುಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಇಲ್ಲೀಗ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಲಾಗಿದೆ.
ಮಾರುಕಟ್ಟೆಗೆ ಹೋದರೆ ಜನರು ಅಲ್ಲಿಂದ ವಾಪಸ್​ ಬರಲು ವಿಳಂಬ ಮಾಡುತ್ತಾರೆ, ಅಲ್ಲಿಯೇ ಜನಜಂಗುಳಿ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಕರೊನಾ ವೈರಸ್​ ಹರಡಲು ಮಾರುಕಟ್ಟೆ ಪ್ರದೇಶ ಹೆಚ್ಚು ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ ಎನ್ನುವ ಕಾರಣಕ್ಕೆ ಮಹಾರಾಷ್ಟ್ರ ಸರ್ಕಾರ ಇದೀಗ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ.
ಅದರಲ್ಲಿಯೂ ನಾಸಿಕ್ ನಗರ ಪೊಲೀಸರು ಮತ್ತು ಮಹಾನಗರ ಪಾಲಿಕೆ ನಾಸಿಕ್​ ನಗರಕ್ಕೆ ಸಂಬಂಧಿಸಿದಂತೆ ಒಂದು ಆದೇಶ ಹೊರಡಿಸಿದೆ. ಇಲ್ಲಿರುವ ಮಾರುಕಟ್ಟೆ ಪ್ರವೇಶಿಸಲು ಕಡ್ಡಾಯವಾಗಿ ಐದು ರೂಪಾಯಿ ಶುಲ್ಕವನ್ನು ಪ್ರತಿಯೊಬ್ಬರೂ ನೀಡಬೇಕು. ಹೀಗೆ ಪ್ರವೇಶಿಸುವಾಗ ಅವರಿಗೆ ಟೈಮಿಂಗ್ಸ್​ ಇರುವ ಚೀಟಿ ನೀಡಲಾಗುತ್ತದೆ.
ಇದರ ಅವಧಿ ಕೇವಲ ಒಂದು ಗಂಟೆ. ಒಂದು ವೇಳೆ ಒಂದು ಗಂಟೆಗಿಂತ ಹೆಚ್ಚಿಗೆ ಮಾರುಕಟ್ಟೆಯ ಕೆಲಸಲ್ಲಿ ತಲ್ಲೀನವಾಗಿ ಬಿಟ್ಟರೆ 500 ರೂಪಾಯಿ ದಂಡವನ್ನು ಕಟ್ಟಬೇಕಾಗುತ್ತದೆ.
ಇದೀಗ ಇಲ್ಲಿ ಭಾರಿ ವಿರೋಧವನ್ನು ಸೃಷ್ಟಿಮಾಡಿದೆ. ಜನರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಒಳ್ಳೆಯ ಮಾತಿನಲ್ಲಿ ಹೇಳಿದರೆ ಜನರು ಕೇಳದ ಹಿನ್ನೆಲೆಯಲ್ಲಿ ಇಂಥ ಕ್ರಮ ಅನಿವಾರ್ಯವಾಗಿದೆ. ಹೀಗೆ ಮಾಡಿದ ಕಾರಣ, ಜನರು ಒಂದೆಡೆ ಗುಂಪು ಸೇರುವುದು, ಅನಗತ್ಯವಾಗಿ ಹರಟೆ ಹೊಡೆಯುವುದನ್ನು ತಪ್ಪಿಸಿದಂತಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಲ್ಲಿ ಈ ಯೋಜನೆ ಯಶಸ್ವಿಯಾದರೆ ಇದು ಎಲ್ಲೆಡೆ ಜಾರಿಯಾದರೂ ಆಶ್ಚರ್ಯವಿಲ್ಲ.
ಅಂಗದಾನಕ್ಕೆ ವೈದ್ಯರು ಸಜ್ಜಾಗುತ್ತಿದ್ದಂತೆಯೇ ಎದ್ದು ಕುಳಿತ ‘ಮೃತ’ ಯುವಕ- ಕಂಗಾಲಾದ ಡಾಕ್ಟರ್ಸ್​!

ಹೆಣ್ಣೇ ಸಿಕ್ತಿಲ್ಲ ಎಂದು ಸಿಕ್ಕಸಿಕ್ಕವರ ಬಳಿ ಕಣ್ಣೀರು ಹಾಕಿದ್ದ ಈ ಕುಳ್ಳನಿಗೆ ಈಗ ಹುಡುಗಿಯರ ಆಯ್ಕೆಯೇ ಕಷ್ಟವಾಗಿದೆ!

ಅಮ್ಮ ದಾನಪತ್ರದ ಮೂಲಕ ಮೊದಲು ನನಗೆ ಆಸ್ತಿ ಬರೆದಿದ್ದು, ಈಗ ಅಕ್ಕನಿಗೆ ಬರೆದಿದ್ದಾರೆ- ಯಾರಿಗೆ ಸಿಗುತ್ತೆ?

ಹುಡುಗಿ ಸಿಕ್ಕಳೆಂದು ದೈಹಿಕ ಸಂಪರ್ಕ ಮಾಡುವಾಗ ಅಮ್ಮ ನೆನಪಾಗಿಲ್ವಾ? ಮದ್ವೆ ವಿಷ್ಯ ಬಂದಾಗ ನೆನಪಾಗ್ತಾರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − ten =
Remember me
