ನವದೆಹಲಿ:ಕರೊನಾ ಪ್ರಕರಣ ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವುದು ಒಂದೆಡೆಯಾದರೆ, ಕರೊನಾದಿಂದ ಗುಣಮುಖರಾಗಿ ಮನೆಗೆ ಹೋದವರಲ್ಲಿ ಪುನಃ ಕರೊನಾ ಒಕ್ಕರಿಸುತ್ತಿರುವ ಆತಂಕ ಇನ್ನೊಂದೆಡೆ.
ಕರೊನಾ ಪಾಸಿಟಿವ್​ ಬಂದು ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಹೋದವರಿಗೆ ಪುನಃ ಅದು ಬಾಧಿಸದಂತೆ ಕೆಲವೊಂದು ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದೆ. ಪಾಸಿಟಿವ್ ಬಂದವರು ಗುಣಮುಖ ಹೊಂದಿದ ನಂತರ ಯಾವ ರೀತಿ ಜೀವನ ಪಾಲನೆ ಮಾಡಬೇಕು ಎಂದು ಕರೊನೋತ್ತರ ನಿರ್ವಹಣೆ ಶಿಷ್ಟಾಚಾರ ಮಾರ್ಗಸೂಚಿ ಇದಾಗಿದೆ.
ಇದರಲ್ಲಿ ಪ್ರಮುಖವಾಗಿ ಉಲ್ಲೇಖಗೊಂಡಿರುವುದು ವಾಕಿಂಗ್​, ಯೋಗಾಸನ ಹಾಗೂ ಪ್ರಾಣಾಯಾಮ, ಇದು ಕರೊನೋತ್ತರ ಮಾತ್ರವಲ್ಲದೇ ಆರಂಭದಲ್ಲಿಯೇ ಕರೊನಾ ಸೋಂಕು ಬಾಧಿಸದಂತೆಯೂ ಸಹಕಾರಿಯಾಗಬಲ್ಲುದು.
#IndiaFightsCorona
Health Ministry issues Post#COVID19Management Protocol.
A 
holistic approach is required for follow up care and well-being of all post-COVID recovering patients.https://t.co/uqwwxHOfa3pic.twitter.com/CRbTPbahYf
— Ministry of Health (@MoHFW_INDIA)September 13, 2020

ಇದನ್ನು ಹೊರತುಪಡಿಸಿದರೆ ಕರೊನೋತ್ತರವಾಗಿ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಇಲ್ಲಿದೆ:*ಕರೊನಾ ಸೋಂಕು ಗುಣಮುಖವಾಯಿತೆಂದು ಸುಮ್ಮನೆ ಇರಬಾರದು. ಬದಲಿಗೆ ಸೋಂಕು ನೆಗೆಟಿವ್​ ಎಂದು ಬಂದ ನಂತರವೂ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಸದಾ ಕೈ, ಮುಖಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಸ್ಯಾನಿಟೈಸರ್ ಬಳಕೆ ಮಾಡುತ್ತಿರಬೇಕು, ಸಾಮಾಜಿಕ ಅಂತರ ಅತ್ಯಗತ್ಯ.
*ಸಾಧ್ಯವಾದಷ್ಟು ಬಿಸಿ ನೀರನ್ನು ಸೇವಿಸಿ.
*ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವ ನಿಟ್ಟಿನಲ್ಲಿ ಆಯುಷ್ ಇಲಾಖೆಯ ಔಷಧಿಗಳನ್ನು ಸೇವಿಸಿ.
*ಹಂತ ಹಂತವಾಗಿ ವೃತ್ತಿಪರ ಕೆಲಸಗಳನ್ನು ಆರಂಭಿಸಿ. ದೇಹವು ಚೈತನ್ಯದಿಂದ ತುಂಬಿರಲು ಮನೆಗೆಲಸಗಳಲ್ಲಿಯೂ ತೊಡಗಿಸಿಕೊಳ್ಳಿ.
*ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ನಿಯಮಿತವಾಗಿ ನಡಿಗೆ ಮಾಡುತ್ತಿರಿ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ, ಯೋಗ ಮಾಡುತ್ತಿರಿ.
*ಪೌಷ್ಟಿಕಯುಕ್ತ ಆಹಾರ ಸೇವನೆ ಅತ್ಯಗತ್ಯ, ಜತೆಗೆ ಸಾಕಷ್ಟು ನಿದ್ದೆ, ವಿಶ್ರಾಂತಿ ತೆಗೆದುಕೊಳ್ಳಿ.
*ಕರೊನೋತ್ತರ ಅಧಿಕ ಜ್ವರ, ಉಸಿರಾಟ ಸಮಸ್ಯೆ, ಎದೆನೋವು ಬರುತ್ತಿರುತ್ತದೆಯೇ ಎಂದು ನೋಡಿಕೊಳ್ಳಿ.
*ಕರೊನಾದಿಂದ ಗುಣಮುಖರಾದವರು ತಮ್ಮ ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳಿ.*ಕರೊನಾ ಸೋಂಕಿನಿಂದ ಗುಣಮುಖರಾದ ನಂತರ ಅದರ ಪಾಲೋಅಪ್​ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಡಿಸ್​ಚಾರ್ಜ್​ ಆದ 7 ದಿನಗಳೊಳಗೆ ವೈದ್ಯರನ್ನು ಭೇಟಿ ಮಾಡಿ.
*ಕರೊನಾ ಸಮಯದಲ್ಲಿ ಹೋಂ ಐಸೊಲೇಷನ್​ನಲ್ಲಿರುವವರು ಹೆಚ್ಚಿನ ಆರೋಗ್ಯ ಸಮಸ್ಯೆ ಕಂಡುಬಂದರೆ ತಕ್ಷಣದ ಹತ್ತಿರದ ಆರೋಗ್ಯ ಕೇಂದ್ರವನ್ನು ಭೇಟಿ ಮಾಡಬೇಕು.
*ತೀವ್ರ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವವರು ಕಠಿಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
16 ಬಾರಿ ಬಂಧಿಸಿದ್ದ ಪೊಲೀಸ್​ ಅಧಿಕಾರಿಗೇ ಕಿಡ್ನಿ ಕೊಟ್ಟು ಕಾಪಾಡಿದಳು!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಳೆಯಿಂದ ಸೇವೆಗಳು ಆರಂಭ: ಸಂಪೂರ್ಣ ವಿವರ ಇಲ್ಲಿದೆ…

ಸಿಎಎ ವಿರೋಧಿ ಪ್ರತಿಭಟನೆಗೆ ಕುಮ್ಮಕ್ಕು: ಆರೋಪಿ ಪಟ್ಟಿಯಲ್ಲಿ ಸೀತಾರಾಮ್​ ಯೆಚೂರಿ, ಯೋಗೇಂದ್ರ ಯಾದವ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
