ಲಖನೌ:ರಾಜಸ್ಥಾನದ ಉದಯಪುರದಲ್ಲಿ ಟೈಲರ್​ ಕನ್ಹಯ್ಯಲಾಲ್​ ಅವರ ರುಂಡ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೇಶಾದ್ಯಂತ ಭಾರಿ ಸಂಚನ ಸೃಷ್ಟಿಸಿದೆ.
ಕೆಲ ಮುಸ್ಲಿಂ ಸಂಘಟನೆಗಳು ಸೇರಿದಂತೆ ಹಲವರು ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಾಗಲೇ ನಿನ್ನೆಯಷ್ಟೇ ರಾಷ್ಟ್ರೀಯ ಕಿಸಾನ್​ ಸಂಘದ ಉಚ್ಚಾಟಿತ ಅಧ್ಯಕ್ಷ ರಾಕೇಶ್​ ಟಿಕಾಯತ್​ ಈ ಘಟನೆಯನ್ನು ಸಣ್ಣ ವಿಷಯ ಎಂದು ಕರೆದು ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಇದೀಗ ಟೈಲರ್​ ಬರ್ಬರ ಹತ್ಯೆ ವಿಡಿಯೋ ಅನ್ನು ಶೇರ್​ ಮಾಡಿಕೊಂಡಿರುವ ಉತ್ತರ ಪ್ರದೇಶದ ಯೂಸುಫ್ ಖಾನ್ ಎಂಬಾತ ತುಂಬಾ ಒಳ್ಳೆಯ ಕಾರ್ಯ ಮಾಡಿರುವಿರಿ ಸಹೋದರರೆ, ನಿಮಗೆ ಒಳ್ಳೆಯದಾಗಲಿ ಎಂದು ಕಮೆಂಟ್​ ಹಾಕಿದ್ದಾನರೆ.
ಈ ಛಪ್ರೌಲಿ ನಿವಾಸಿ ಎಂದು ಗುರುತಿಸಲಾಗಿದ್ದು, ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಟೈಲರ್​ ರುಂಡವನ್ನು ಕಡಿದ ವಿಡಿಯೋ ಮಾಡಿ, ಈ ಕ್ರೂರಿಗಳು ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಅದರ ವಿಡಿಯೋ ಕೂಡ ಜಾಲತಾಣದಲ್ಲಿ ವೈರಲ್​ ಆಗಿತ್ತು. ಆದರೆ ಅದನ್ನು ಈಗ ಜಾಲತಾಣದಿಂದ ತೆಗೆಯಲಾಗಿದೆ. ಆದರೆ ಅದು ಡಿಲೀಟ್​ ಆಗುವ ಮುನ್ನ ಯೂಸುಫ್​ ಖಾನ್​ ಅದನ್ನು ಶೇರ್​ ಮಾಡಿಕೊಂಡು ಈ ಕೃತ್ಯ ಎಸಗಿದ ಪಾಪಿಗಳನ್ನು ಹಾಡಿ ಹೊಗಳಿದ್ದಾನೆ.
ಇದನ್ನು ನೋಡಿದ್ದ ಗ್ರಾಮದ ನಿವಾಸಿಯೊಬ್ಬರು ದೂರು ನೀಡಿದ್ದರು. ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ವೀಡಿಯೋ ಕುರಿತು ಕಾಮೆಂಟ್ ಮಾಡಲು ಬಳಸಿದ್ದ ಮೊಬೈಲ್ ಫೋನ್ ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟೈಲರ್​ನಂತೆ ಉದ್ಯಮಿ ರುಂಡ ತುಂಡರಿಸಲು ನಡೆದಿತ್ತು ಸಂಚು: ತಪ್ಪಿಸಿಕೊಂಡದ್ದು ಹೇಗೆ? ತಂದೆ ಹೇಳಿದ್ದೇನು?

ಟೈಲರ್​ ರುಂಡ ಕಡಿದಿರೋದು ಸಣ್ಣ ಘಟನೆ, ಪಾಪ ಪಾಕ್​ ಏನ್​ ಮಾಡುತ್ತೆ ಎಂದ ಟಿಕಾಯತ್​ ಹೇಳಿದ್ದೇನು ಕೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 18 =
Remember me
