View Post
ಅಮೇಥಿ (ಉತ್ತರ ಪ್ರದೇಶ):ಅಜ್ಜನಿಗಾಗಿ ಯಾರಾದರೂ ಆಕ್ಸಿಜನ್ ಸಿಲಿಂಡರ್‌ ಕೊಡಿ ಎಂದು ಟ್ವಿಟರ್‌ನಲ್ಲಿ ಮನವಿ ಮಾಡಿಕೊಂಡ ಯುವಕನ ವಿರುದ್ಧ ಉತ್ತರ ಪ್ರದೇಶದ ಅಮೇಥಿ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿದ್ದಾರೆ.
ಈ ಕುರಿತು ಖುದ್ದಾಗಿ ಅಮೆಥಿ ಪೊಲೀಸರು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. ಆಕ್ಸಿಜನ್‌ ಸಿಲಿಂಡರ್‌ ಅಜ್ಜನಿಗೆ ಬೇಕು ಎಂದು ಹೇಳಿಕೊಂಡಿರುವ ಈ ಯುವಕ ಅದರ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಲಿಲ್ಲ. ಎಲ್ಲವೂ ಅಸ್ಪಷ್ಟವಾಗಿದೆ. ಈ ರೀತಿ ಹೇಳುವ ಮೂಲಕ ಸಿಲಿಂಡರ್‌ ಕೊರತೆ ಇದೆ ಎಂದು ಜನರಲ್ಲಿ ಭಯವನ್ನು ಹುಟ್ಟಿಸುವ ಹುನ್ನಾರ ಎಂಬ ಆರೋಪದಡಿ ಎಫ್‌ಐಆರ್‌ ದಾಖಲು ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.
Called Shashank thrice .. no response on the number shared by you in your tweet. Have alerted office of@DmAmethi&@amethipoliceto find and help the person in need.https://t.co/4D3Nfe2Nue— Smriti Z Irani (@smritiirani)April 26, 2021
Called Shashank thrice .. no response on the number shared by you in your tweet. Have alerted office of@DmAmethi&@amethipoliceto find and help the person in need.https://t.co/4D3Nfe2Nue
ರಾಜ್ಯ ಅಥವಾ ಸಾರ್ವಜನಿಕ ನೆಮ್ಮದಿಯನ್ನು ಕದಡುವ ಕೆಲಸ ಮಾಡಿರುವ ಆರೋಪದ ಅಡಿ ಕೇಸನ್ನು ದಾಖಲು ಮಾಡಲಾಗಿದೆ. ಶಶಾಂಕ್‌ ಯಾದವ್‌ ಎಂಬಾತ ನಟ ಸೋನು ಸೂದ್‌ ಅವರನ್ನು ತಮ್ಮ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿ ಹೀಗೆ ಮೆಸೇಜ್‌ ಹಾಕಿದ್ದಾರೆ. ಅದರಲ್ಲಿ ಆಕ್ಸಿಜನ್‌ ಸಿಲಿಂಡರ್‌ ಬೇಕು ಎಂದಿದ್ದಾರೆಯೇ ವಿನಾ, ಕರೊನಾದ ಕಾರಣವೇ ಅಥವಾ ಇನ್ನಾವ ಉದ್ದೇಶಕ್ಕಾಗಿಯೇ ಅಥವಾ ಅಜ್ಜ ಎಲ್ಲಿ ಅಡ್ಮಿಟ್‌ ಆಗಿದ್ದಾರೆ ಎಂಬ ಯಾವ ಮಾಹಿತಿಯನ್ನೂ ಟ್ವೀಟ್‌ನಲ್ಲಿ ಉಲ್ಲೇಖಿಸಿಲ್ಲ.
ಏಕೆಂದರೆ ಈ ರೀತಿ ಟ್ವೀಟ್‌ ಮಾಡಿರುವಾಗನಿಗೆ ಸಹಾಯಕ್ಕಾಗಿ ಕರೆ ಮಾಡಿದರೆ ಆತ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಆದ್ದರಿಂದ ಇದು ಉದ್ದೇಶಪೂರ್ವಕವಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಮಾಡಿರುವ ಟ್ವೀಟ್‌ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಶಾಂಕ್‌ ಅವರ ಈ ಟ್ವೀಟ್‌ ಅನ್ನು ಅವರ ಸ್ನೇಹಿತರಲ್ಲೊಬ್ಬರಾದ ಅಂಕಿತ್ ರೀಟ್ವೀಟ್‌ ಮಾಡಿದ್ದಾರೆ. ಜತೆಗೆ ಆಕ್ಸಿಜನ್‌ ಸಿಲಿಂಡರ್‌ ಬೇಕು ಎಂದು ‘ದಿ ವೈರ್‌’ ಪತ್ರಿಕೆಯ ಹಿರಿಯ ಸಂಪಾದಕ ಅರ್ಫಾ ಖಾನೂಮ್ ಶೆರ್ವಾನಿ ಅವರಿಗೆ ಸಹಾಯ ಕೋರಿ ನೇರ ಸಂದೇಶವನ್ನು ಕಳುಹಿಸಿದ್ದಾರೆ. ಟ್ವೀಟ್‌ನಲ್ಲಿ ಸ್ಪಷ್ಟ ಚಿತ್ರಣವೇ ಇಲ್ಲದೇ ಮಾಡಿರುವ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ ಪೊಲೀಸರು.
ಕೇಜ್ರಿವಾಲ್‌ ಅಧಿಕಾರಕ್ಕಿನ್ನು ಕಡಿವಾಣ- ದೆಹಲಿಯಲ್ಲಿ ಇನ್ನು ರಾಜ್ಯಪಾಲರೇ ‘ಸರ್ಕಾರ’!
ಲಸಿಕೆ ಹಾಕಿಸಿಕೊಳ್ಳಲು ಇಂದಿನಿಂದ ನೋಂದಣಿ ಪ್ರಕ್ರಿಯೆ ಶುರು- ನೀವೇನು ಮಾಡಬೇಕು? ಇಲ್ಲಿದೆ ಡಿಟೇಲ್ಸ್‌
ತಂಗಿಯ ಜತೆ ಮಂಚದಲ್ಲಿ ಚಕ್ಕಂದ- ನಾಲ್ಕನೇ ಗಂಡನಿಂದ ‘ಡ್ರಗ್ಸ್‌ ರಾಣಿ’ಯ ದುರಂತ ಅಂತ್ಯ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
