ನವದೆಹಲಿ:ಆದಾಯ ತೆರಿಗೆ ಇಲಾಖೆಯು ಕಡ್ಡಾಯವಾಗಿ ಎಲ್ಲರಿಗೂ ಪ್ಯಾನ್‌ ಕಾರ್ಡ್‌ (ಪರ್ಮನೆಂಟ್‌ ಅಕೌಂಟ್‌ ನಂಬರ್‌) ಮತ್ತು ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡುವಂತೆ ಮೇಲಿಂದ ಮೇಲೆ ಹೇಳುತ್ತಲೇ ಬಂದಿದೆ.
ಆದರೆ ಇದುವರೆಗೂ ಎಷ್ಟೋ ಮಂದಿ ಇದನ್ನು ಕಿವಿಯ ಮೇಲೆ ಹಾಕಿಕೊಂಡಿಲ್ಲ. ಕರೊನಾ, ಲಾಕ್‌ಡೌನ್‌ ಸೇರಿದಂತೆ ಅನೇಕ ಕಾರಣಗಳಿಂದ ಈಗಾಗಲೇ ಹಲವಾರು ಬಾರಿ ಪ್ಯಾನ್‌ ಮತ್ತು ಆಧಾರ್‌ ಕಾರ್ಡ್‌ಗಳನ್ನು ಲಿಂಕ್‌ ಮಾಡುವ ದಿನಾಂಕವನ್ನು ಮುಂದೂಡುತ್ತಲೇ ಬಂದಿದೆ.
ಆದರೆ ಇದೀಗ ಕೊನೆಯ ವಾರ್ನಿಂಗ್‌ ಆಗಿ 2021ರ ಮಾರ್ಚ್‌ 31ರವರೆಗೆ ಗಡುವು ನೀಡಲಾಗಿದೆ. ಇನ್ನೂ ಅನೇಕ ತಿಂಗಳು ಇದೆಯಲ್ಲ ಬಿಡಿ, ಆಗ ಮಾಡಿದರಾಯಿತು ಎಂದು ತಾತ್ಸಾರ ತೋರದೇ ಈಗಲೇ ಇವೆರಡು ದಾಖಲೆಗಳನ್ನು ಜೋಡಿಸುವಂತೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಏಕೆಂದರೆ ಇಲ್ಲಿಯವರೆಗೆ 18 ಕೋಟಿಗೂ ಅಧಿಕ ಮಂದಿ ಇವುಗಳ ಜೋಡಣೆ ಮಾಡಿಲ್ಲ ಎಂದು ಇಲಾಖೆ ಹೇಳಿದೆ.
ಎಲ್ಲಾ ಚಟುವಟಿಕೆ, ವ್ಯವಹಾರಗಳಿಗೆ ಇವುಗಳ ಜೋಡಣೆ ಅತ್ಯಗತ್ಯವಾಗಿದ್ದು, ಒಂದು ವೇಳೆ ಇವುಗಳ ಜೋಡಣೆ ಆಗದೇ ಹೋದಲ್ಲಿ ಯಾವುದೇ ವ್ಯವಹಾರಗಳು ನಡೆಸಲು ಸಾಧ್ಯವಿಲ್ಲವಾಗಿದೆ. ಅದ್ದರಿಂದ ಕೂಡಲೇ ಜೋಡಣೆ ಮಾಡುವಂತೆ ಸರ್ಕಾರ ಸೂಚಿಸಿದೆ.
ಇದನ್ನೂ ಓದಿ:ಮಂಚದೊಳಗೆ ಕಾಳಿಂಗ ಸರ್ಪ: ಮೈ ಝುಂ ಎನಿಸುವ ವಿಡಿಯೋ ನೋಡಿ…
ಇಲ್ಲಿಯವರೆಗೆ 32.71 ಕೋಟಿ ಪ್ಯಾನ್‌ ಕಾರ್ಡ್‌ಗಳು ಆಧಾರ್ ಜತೆ ಲಿಂಕ್ ಆಗಿದ್ದರೆ ಲಿಂಕ್‌ ಆಗದೇ ಇರುವವರ ಸಂಖ್ಯೆ 18 ಕೋಟಿ ಇದೆ! ಒಂದು ವೇಳೆ ಬರುವ ಮಾರ್ಚ್‌ ಅಂದರೆ 2021ರ ಮಾರ್ಚ್ 31ರ ಒಳಗೆ ಲಿಂಕ್‌ ಆಗದೇ ಹೋದರೆ ಪ್ಯಾನ್‌ ಕಾರ್ಡ್‌ ನಿಷ್ಕ್ರೀಯಗೊಳ್ಳಲಿದ್ದು, ಮುಂದೆ ಜನರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೊಡಲಾಗಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಶೇ. 57ರಷ್ಟು ಜನರ ಆದಾಯವು 2.5 ಲಕ್ಷ ರೂಪಾಯಿಗಳಿಗಿಂತ ಕಡಿಮೆಯಿದೆ. ಅಂಕಿಅoಶಗಳ ಪ್ರಕಾರ, ಶೇ.18ರಷ್ಟು ಮಂದಿ ಆದಾಯ 2.5ರಿಂದ 5 ಲಕ್ಷ ರೂಪಾಯಿಗಳು, ಶೇ. 17ರಷ್ಟು ಮಂದಿ ಆದಾಯವು 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿಗಳು ಮತ್ತು ಶೇ. ಏಳರಷ್ಟು ಮಂದಿ ಆದಾಯವು 10 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿಗಳವರೆಗೆ ಇದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರಲ್ಲಿ ಶೇ.ಒಂದರಷ್ಟು ಮಾತ್ರ 50 ಲಕ್ಷ ರೂಪಾಯಿ ಆದಾಯ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.
ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 2 =
Remember me
