https://www.vijayavani.net/s-bangalore-corona-rules-fine/ಮುಂಬೈ:ಕೋವಿಶೀಲ್ಡ್ ಲಸಿಕೆಯನ್ನು ತಯಾರಿಸುವ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಸ್ ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್ ಪೂನಾವಾಲಾ ಅವರು ಲಂಡನ್‌ಗೆ ತೆರಳಿ ಕೆಲ ದಿನಗಳಾಗಿವೆ. ಭಾರತದಲ್ಲಿ ತಮಗೆ ಮತ್ತು ಕುಟುಂಬದವರಿಗೆ ನಿರಂತರ ಕೊಲೆ ಬೆದರಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ತಾವು ಲಂಡನ್‌ಗೆ ತೆರಳಿರುವುದಾಗಿ ಅವರು ಇದಾಗಲೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಇದೀಗ ಕೊಲೆ ಬೆದರಿಕೆಯ ಕರೆಗಳು ಇನ್ನೂ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ಪೂನಾವಾಲಾ ಅವರಿಗೆ ಝಡ್‌ ಪ್ಲಸ್‌ ಭದ್ರತೆ ಒದಗಿಸಲು ಕೇಂದ್ರ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ಗೆ ವಕೀಲರೊಬ್ಬರು ಮೊರೆ ಹೋಗಿದ್ದಾರೆ.
ಮುಖ್ಯಮಂತ್ರಿ ಮತ್ತು ಕೆಲವು ಪ್ರಭಾವಿಗಳಿಂದ ತಮ್ಮ ಜೀವಕ್ಕೆ ಅಪಾಯ ಇರುವುದಾಗಿ ಅವರು ಈ ಹಿಂದೆ ಹೇಳಿದ್ದರು. ಆದರೆ ಯಾರ ಹೆಸರನ್ನೂ ಅವರು ಬಹಿರಂಗಪಡಿಸಿರಲಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಪೂನಾವಾಲಾ ಅವರು ನೀಡಿರುವ ಈ ಹೇಳಿಕೆ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಉಲ್ಲೇಖಿಸಿರುವ ಮುಂಬೈ ಮೂಲದ ವಕೀಲ ದತ್ತ ಮಾನೆ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಬೆದರಿಕೆ ಹಾಕಿದ ವ್ಯಕ್ತಿಗಳ ವಿರುದ್ಧ ಕೇಸ್‌ ದಾಖಲು ಮಾಡಲು ಆದೇಶಿಸುವಂತೆ ಕೋರಿದ್ದಾರೆ.
‘ತಮಗೆ ಬೆದರಿಕೆ ಇರುವ ಕುರಿತು ಪೂನಾವಾಲಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವುದು ನನಗೆ ಆಘಾತ ಮತ್ತು ಆಶ್ಚರ್ಯವಾಗಿದೆ. ಕೋಟ್ಯಂತರ ಮಂದಿಯ ಜೀವ ಕಾಪಾಡುತ್ತಿರುವ ಈ ಲಸಿಕೆಯ ಉತ್ಪಾದಕರಿಗೆ ಈ ರೀತಿಯಾದರೆ ಅದು ಲಸಿಕೆ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು. ಅವರು ಉತ್ಪಾದನಾ ಘಟಕದಿಂದ ದೂರವೇ ಉಳಿದರೆ ಅದು ಕ್ಯಾಪ್ಟನ್ ಇಲ್ಲದೆ ಚಂಡಮಾರುತದಲ್ಲಿ ಸಿಲುಕಿದ ಹಡಗಿನಂತೆ ಆಗುತ್ತದೆ’ ಎಂದು ಅರ್ಜಿಯಲ್ಲಿ ವಕೀಲರು ತಿಳಿಸಿದ್ದಾರೆ.
ಪೂನಾವಾಲಾ ಅವರಿಗೆ ಕೇಂದ್ರ ಸರ್ಕಾರ ಇದಾಗಲೇ ವೈ ಕೆಟಗರಿ ಭದ್ರತೆ ನೀಡಿದೆ.
ಕರೊನಾ ರೂಲ್ಸ್‌ ಫಾಲೋ ಮಾಡಿ ಮದ್ವೆಯಾದರೂ ಇಲ್ಲಿ ಮನೆಬಾಗಿಲು ಬಡೀತಿದ್ದಾರೆ ಪೊಲೀಸ್ರು!

ಬೆಡ್ ಬ್ಲಾಕ್‌ ದಂಧೆ- ತೇಜಸ್ವಿ ಸೂರ್ಯ ನೀಡಿದರು ಖದೀಮರ ಫೋನ್‌ ಸಂಭಾಷಣೆ, ಹಣ ವರ್ಗಾವಣೆ ಡಿಟೇಲ್ಸ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − five =
Remember me
