ಕೋಲ್ಕತಾ:2010ರಲ್ಲಿ ನಡೆದ ಭೀಕರ ರೈಲು ಅ‍ಪಘಾತದಲ್ಲಿ ಮೃತಪಟ್ಟಿದ್ದ ಎನ್ನಲಾದ ವ್ಯಕ್ತಿಯೊಬ್ಬ ದಿಢೀರ್‌ ಪ್ರತ್ಯಕ್ಷನಾಗಿ ಈಗ ಭಾರಿ ಕೋಲಾಹಲ ಸೃಷ್ಟಿಸಿದ್ದಾನೆ.
ಪಶ್ಚಿಮಬಂಗಾಳದಲ್ಲಿ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ ರೈಲು ಗೂಡ್ಸ್ ರೈಲು ಡಿಕ್ಕಿ ಹೊಡೆದು 148 ಮಂದಿ ಮೃತಪಟ್ಟಿದ್ದರು. ಆಗ ಈ ಪ್ರದೇಶ ಮಾವೋವಾದಿಗಳ ಹಿಡಿತಕ್ಕೆ ಒಳಪಟ್ಟಿತ್ತು. ಈ ವಿಧ್ವಂಸಕ ಕೃತ್ಯವನ್ನು ಮಾವೋವಾದಿಗಳು ನಡೆಸಿದ್ದಾರೆ ಎನ್ನಲಾಗಿದೆ.
ಮೃತಪಟ್ಟವರಲ್ಲಿ ಅಮೃತವನ್‌ ಚೌಧರಿ ಕೂಡ ಒಬ್ಬರು ಎನ್ನಲಾಗಿತ್ತು. ಎಲ್ಲರ ಡಿಎನ್‌ಎ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಶವಗಳನ್ನು ನೀಡಲಾಗಿತ್ತು. ಅದೇ ರೀತಿ, ಚೌಧರಿ ಅವರ ಮೃತದೇಹ ಎನ್ನಲಾದ ಶವದ ಡಿಎನ್‌ಎ ಪರೀಕ್ಷೆ ಮಾಡಿ ಅವರ ಕುಟುಂಬಸ್ಥರಿಗೆ ನೀಡಲಾಗಿತ್ತು. ಆ ವ್ಯಕ್ತಿಯ ಶವಸಂಸ್ಕಾರ ನಡೆದಿತ್ತು.
ಇದೀಗ ಘಟನೆ ನಡೆದು 11 ವರ್ಷಗಳ ಬಳಿಕ ಅಮೃತವನ್‌ ಚೌಧರಿ ಜೀವಂತ ಇರುವುದು ಪೊಲೀಸರಿಗೆ ತಿಳಿದಿದೆ. ಇದು ತಿಳಿಯುತ್ತಲೇ ಈ ವಿಷಯವನ್ನು ತನಿಖೆಗೆ ವಹಿಸಲಾಗಿದೆ. ಇದಕ್ಕೆ ಕಾರಣ ಎಂದರೆ, ಈ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಕುಟುಂಬಕ್ಕೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ನೀಡಲಾಗಿತ್ತು. ಮಾತ್ರವಲ್ಲದೇ 27 ವರ್ಷದವರಾಗಿದ್ದ ಅಮೃತವನ್‌ ಅವರ ತಂಗಿಗೆ ರೈಲ್ವೆಯಲ್ಲಿ ಉದ್ಯೋಗ ನೀಡಲಾಗಿದ್ದು, ಅವರು ಉನ್ನತ ಹುದ್ದೆಯಲ್ಲಿದ್ದಾರೆ.
ಡಿಎನ್‌ಎ ಪರೀಕ್ಷೆಯಲ್ಲಿ ಗೋಲ್‌ಮಾಲ್‌ ಆಗಿದ್ದು ಹೇಗೆ? ಈ ವ್ಯಕ್ತಿ 10 ವರ್ಷ ಎಲ್ಲಿದ್ದ? ಇದರ ಹಿಂದಿರುವ ಕೈವಾಡ ಯಾರದ್ದು? ಆತನ ತಂಗಿ ಮತ್ತು ತಂದೆಗೆ ಈ ವಿಷಯ ಗೊತ್ತಿರಲಿಲ್ಲವೆ ಅಥವಾ ಮೋಸ ಮಾಡಲಾಗಿದೆಯೆ ಎಂಬಿತ್ಯಾದಿಯಾಗಿ ತನಿಖೆ ನಡೆಸಲಾಗುತ್ತಿದೆ.
ಹುಟ್ಟುತ್ತಲೇ ವೈರಲ್‌ ಆಯ್ತು ಹುಬ್ಬಳ್ಳಿಯ ಒಂದೇ ಕಾಲಿನ ಮಗು: ಆದರೆ ಮುಂದಾದದ್ದು ದುರಂತ

ದೇಹಕ್ಕಾಗಿ ಅವನು, ಸಮಾಜಕ್ಕಾಗಿ ನಾನು: ಡಿವೋರ್ಸ್‌ ಕೊಡದೇ ಪೀಡಿಸ್ತಿದ್ದಾಳೆ- ಪ್ಲೀಸ್‌ ಸಲಹೆ ಕೊಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 12 =
Remember me
