ಶ್ರೀನಗರ:ಜಮ್ಮು- ಕಾಶ್ಮೀರದ ಪೀಪಲ್​ ಡೆಮಾಕ್ರಟಿಕ್​ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿಗೆ ಮೇಲಿಂದ ಮೇಲೆ ಶಾಕ್​ ಉಂಟಾಗುತ್ತಲೇ ಸಾಗಿದೆ.
ಪಿಡಿಪಿಯ ಮೂವರು ಸಂಸ್ಥಾಪಕ ಸದಸ್ಯರಾಗಿರುವ, ರಾಜ್ಯಸಭೆಯ ಮಾಜಿ ಸಂಸದ ಟಿ.ಎಸ್. ಬಜ್ವಾ, ಹಿರಿಯ ನಾಯಕರಾದ ಟಿ ಎಸ್ ಬಜ್ವಾ, ಹಸನ್ ಅಲಿ ವಾಫಾ, ಮತ್ತು ಬೆಡ್ ಮಹಾಜನ್ ಅವರು ಅಕ್ಟೋಬರ್ 26 ರಂದು ಪಿಡಿಪಿಗೆ ರಾಜೀನಾಮೆ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸುವವರೆಗೆ ತ್ರಿವರ್ಣವನ್ನು ಹಿಡಿಯದಿರುವ ಬಗ್ಗೆ ಮೆಹಬೂಬಾ ಹೇಳಿಕೆಯಿಂದ ಈ ಮೂವರು ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ಸಲ್ಲಿಸಿದ್ದರು.
ಅದರ ಬೆನ್ನಲ್ಲೇ ನಿನ್ನೆಯಷ್ಟೇ ಇವರ ನಿಕಟವರ್ತಿ, ಆಪ್ತ ಸಹಾಯಕ ವಹೀದ್ ಪರ್ರಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ನವೀದ್ ಬಾಬು ಒಳಗೊಂಡ ಭಯೋತ್ಪಾದಕ ಪ್ರಕರಣಗಳಲ್ಲಿ ಸಂಬಂಧ ಹೊಂದಿದ್ದಕ್ಕಾಗಿ ಈತನನ್ನು ಬಂಧಿಸಲಾಗಿತ್ತು.
Peoples Democratic Party (PDP) leaders Dhaman Bhasin, Fallail Singh & Pritam Kotwal resign from party
"We've no option but to quit the party which has been hijacked by unscrupulous, communal elements with mysterious character," their resignation letter reads.#JammuAndKashmirpic.twitter.com/lPvYaQUaP8
— ANI (@ANI)November 26, 2020

ಇದೀಗ ಮತ್ತೊಂದು ಶಾಕ್​ ಎದುರಿಸಬೇಕಾಗಿ ಬಂದಿದೆ ಈ ನಾಯಕಿಗೆ. ಅದೇನೆಂದರೆ ಪಿಡಿಪಿಯ ಮೂರು ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಧಮನ್ ಭಾಸಿನ್, ಫಲ್ಲೈಲ್ ಸಿಂಗ್ ಮತ್ತು ಪ್ರೀತಮ್ ಕೊತ್ವಾಲ್ ಅವರು ಪಕ್ಷದಿಂದ ಹೊರನಡೆದಿದ್ದಾರೆ.
ಕೋಮುವಾದಿ ಅಂಶಗಳು ಪಕ್ಷವನ್ನು ಆವರಿಸಿಕೊಂಡಿದೆ. ಅಂತಹ ಪರಿಸ್ಥಿತಿಯಲ್ಲಿ, ಪಕ್ಷವನ್ನು ತೊರೆಯುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಗಳಿಲ್ಲ. ನಿರ್ಲಜ್ಜ ಹಾಗೂ ಕೋಮುವಾದಿ ಇರುವಲ್ಲಿ ಇರಲು ಸಾಧ್ಯವಿಲ್ಲ. ಇಂಥ ಪಕ್ಷವನ್ನು ತೊರೆಯುತ್ತಿದ್ದೇವೆ ಎಂದು ಮೂವರೂ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಪಕ್ಷವನ್ನು ಒಂದು ಉದ್ದೇಶದಿಂದಾಗಿ ನಾವು ಸೇರ್ಪಡೆಯಾಗಿದ್ದೆವು. ಆದರೆ ಪಕ್ಷದ ಮೂಲ ಸಿದ್ಧಾಂತವನ್ನು ಬದಿಗಿಟ್ಟು ವಿವಾದಾತ್ಮಕ ಹಾಗೂ ಪ್ರಚೋದನಕಾರಿಯಾಗುವಂಥ ಹೇಳಿಕೆಗಳನ್ನು ನೀಡುತ್ತಾ ಸಾಗುವ ಮೂಲಕ ತನ್ನ ಧ್ಯೇಯೋದ್ದೇಶವನ್ನು ಮರೆತಿದೆ. ಇಂಥ ಪಕ್ಷದಲ್ಲಿ ನಾವು ಇರಲು ಸಾಧ್ಯವಿಲ್ಲ ಎಂದಿದ್ದಾರೆ.
ಮಹಿಳೆಯರನ್ನು ಹೊಗಳುವ ಭರದಲ್ಲಿ ಪ್ರಾಣಿಗೆ ಹೋಲಿಸಿ ಪೇಚಿಗೆ ಸಿಲುಕಿರೋ ಇಸ್ರೇಲ್​ ಪ್ರಧಾನಿ!

ಅಜ್ಜನ ಆಸ್ತಿಯಲ್ಲಿ ಅಮ್ಮನಿಗೆ ಸಮಪಾಲು ಕೊಟ್ಟಿರುವುದಿಲ್ಲ- ಅವರೀಗ ಬದಲಾಯಿಸಬಹುದೆ?

VIDEO: ಉಗ್ರ ಸ್ವರೂಪ ಪಡೀತಿದೆ ದೆಹಲಿ ಚಲೋ: ಪೊಲೀಸರಿಂದ ಅಶ್ರುವಾಯು ಪ್ರಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − one =
Remember me
