ನವದೆಹಲಿ :ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರೈಲುಗಳ ಪೈಕಿ ಕೆಲವೊಂದು ರೈಲುಗಳ ಸಂಚಾರವನ್ನು ಈಗಾಗಲೇ ಆರಂಭಿಸಲಾಗಿದೆ.
ಭಾರತೀಯ ರೈಲ್ವೆ ಮೇ ಮಧ್ಯದಿಂದ ದೇಶಾದ್ಯಂತ 200 ವಿಶೇಷ ರೈಲುಗಳು (100 ಜೋಡಿ) ಸಂಚಾರ ಮಾಡುತ್ತಿವೆಯಾದರೂ, ಸದ್ಯದ ಆದೇಶದ ಅನ್ವಯ ಈ ತಿಂಗಳ 12ರವರೆಗೆ ನಿಯಮಿತ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್‌ಸಿಟಿಸಿ) ವೆಬ್‌ಸೈಟ್‌ ಮೂಲಕ ಇಲ್ಲವೇ ಯಾವುದಾದರೂ ಆ್ಯಪ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸುವಾಗ ಪ್ರಯಾಣಿಕರು ವಿಶೇಷ ರೈಲುಗಳ ಪಟ್ಟಿಯಿಂದ (list of special trains) ಮಾತ್ರ ರೈಲುಗಳನ್ನು ಆಯ್ಕೆ ಮಾಡುವಂತೆ ರೈಲ್ವೆ ಇಲಾಖೆ ಹೇಳಿದೆ. ಇದನ್ನು ಗಮನಿಸಿದರೆ ಹಾಗೂ ಇದರ ಮೇಲೆ ಕ್ಲಿಕ್‌ ಮಾಡಿದರೆ ಮಾತ್ರ ಸರಿಯಾದ ಮಾಹಿತಿ ಲಭ್ಯ ಆಗಲಿದೆ ಎಂದು ಇಲಾಖೆ ಹೇಳಿದೆ.
ಉದಾಹರಣೆಗೆ, ಪ್ರಯಾಣಿಕರು ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣ ಮಾಡಬೇಕಾಗಿದ್ದಲ್ಲಿ, ವಿಶೇಷ ರೈಲುಗಳ ಪಟ್ಟಿಯ ಮೇಲೆ ಕ್ಲಿಕ್‌ ಮಾಡಿದಾಗ ‘ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದು ವೆಬ್‌ಸೈಟ್‌ನಲ್ಲಿ ಮೆಸೇಜ್‌ ಬರುತ್ತದೆ. ಒಂದುವೇಳೆ ನೀವೇನಾದರೂ ತಿರುವನಂತಪುರದಿಂದ ಮುಂಬೈಗೆ ಪ್ರಯಾಣಿಸಲು ಬಯಸಿದರೆ, ನೇತ್ರಾವತಿ ವಿಶೇಷ ರೈಲು ಲಭ್ಯವಿದೆ ಮತ್ತು ಪ್ರಯಾಣಿಕರು ಎಂದಿನಂತೆ ವೆಬ್‌ಸೈಟ್‌ನಲ್ಲಿ ಟಿಕೆಟ್ ಕಾಯ್ದಿರಿಸಲು ಮುಂದುವರೆಸಬಹುದು ಎಂದು ತೋರಿಸಲಾಗುತ್ತದೆ. ಆದ್ದರಿಂದ list of special trains ಕ್ಲಿಕ್‌ ಮಾಡಬೇಕಿದೆ.
ಇದನ್ನೂ ಓದಿ:ಸುಶಾಂತ್​ ಪ್ರಕರಣ ಮತ್ತಷ್ಟು ಕಗ್ಗಂಟು; ಉಗುರಿನ ಪರೀಕ್ಷೆ ಮಾಡದೇ ಫಾರೆನ್ಸಿಕ್​ ಟೀಮ್ ಎಡವಟ್ಟು!
ಇವುಗಳ ಜತೆಗೆ ಇಲಾಖೆ ನೀಡಿರುವ ಒಂದಿಷ್ಟು ಮಾರ್ಗಸೂಚಿಗಳು ಇಂತಿವೆ:* ದೇಹದ ತಾಪಮಾನ ನೋಡಲು ಥರ್ಮಲ್ ಸ್ಕ್ರೀನಿಂಗ್‌ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಪ್ರಯಾಣಕ್ಕೆ ಕನಿಷ್ಠ 90 ನಿಮಿಷಗಳ ಮೊದಲು ನಿಲ್ದಾಣಕ್ಕೆ ಬರಬೇಕು.* ಕರೊನಾ ಲಕ್ಷಣ ಇಲ್ಲದ ಪ್ರಯಾಣಿಕರಿಗೆ ಮಾತ್ರ ರೈಲು ಹತ್ತಲು ಅವಕಾಶವಿರುತ್ತದೆ. ರೋಗಲಕ್ಷಣದ ಪ್ರಯಾಣಿಕರನ್ನು ಹಿಂತಿರುಗಿಸಲಾಗುತ್ತದೆ,. ಹೀಗಾದಲ್ಲಿ ಅವರ ಟಿಕೆಟ್‌ ಹಣವನ್ನು ವಾಪಸ್‌ ಮಾಡಲಾಗುತ್ತದೆ.* ರೈಲಿನಲ್ಲಿ ಯಾವುದೇ ಕಂಬಳಿ ಮತ್ತು ಹಾಸಿಗೆ ನೀಡಲಾಗುವುದಿಲ್ಲ.* ರೈಲುಗಳಲ್ಲಿ ಯಾವುದೇ ಆಹಾರವನ್ನು ನೀಡಲಾಗುವುದಿಲ್ಲ. ಪ್ರಯಾಣಿಕರು ತಮ್ಮದೇ ಆದ ಆಹಾರ ಮತ್ತು ಕುಡಿಯುವ ನೀರನ್ನು ತೆಗೆದುಕೊಳ್ಳಬೇಕು* ಪ್ಯಾಂಟ್ರಿ ಕಾರುಗಳನ್ನು ಹೊಂದಿರುವ ರೈಲುಗಳು ಬೇಯಿಸಿದ ಆಹಾರವನ್ನು ನೀಡುವುದಿಲ್ಲ. ಪ್ಯಾಕೇಜ್ ಮಾಡಿದ ಆಹಾರ, ಪಾನೀಯಗಳು ಮತ್ತು ನೀರು ಮತ್ತು ಚಹಾ ಅಥವಾ ಕಾಫಿ ಸೀಮಿತ ರೈಲುಗಳು ಮತ್ತು ನಿಲ್ದಾಣದ ಅಡುಗೆ ಘಟಕಗಳಲ್ಲಿ ಲಭ್ಯವಿರುತ್ತದೆ. ಅಡುಗೆ ಸೇವೆ ಲಭ್ಯವಿಲ್ಲದ ಕಾರಣ, ಈ ಶುಲ್ಕಗಳನ್ನು ಶುಲ್ಕದಲ್ಲಿ ಸೇರಿಸಲಾಗುವುದಿಲ್ಲ.* ಪ್ರಯಾಣದುದ್ದಕ್ಕೂ ಫೇಸ್ ಮಾಸ್ಕ್ ಕಡ್ಡಾಯ, ದೈಹಿಕ ದೂರವನ್ನು ಕಾಪಾಡಿಕೊಳ್ಳಿ ಮತ್ತು ಆಗಾಗ್ಗೆ ಕೈ ತೊಳೆಯುವುದನ್ನು ಮಾಡಬೇಕು.* ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಪ್ರಯಾಣಿಕರಿಗೆ ಸೂಚಿಸಲಾಗಿದೆ.
ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗಾಗಿ:* ಕರ್ನಾಟಕಕ್ಕೆ ಬರುವ ಎಲ್ಲಾ ಪ್ರಯಾಣಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಅವರ ಸಂಪರ್ಕ ಸಂಖ್ಯೆ ಮತ್ತು ಗಮ್ಯಸ್ಥಾನ ವಿಳಾಸದ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸಬೇಕು* ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ ನಡೆಯಲಿದೆ.* ಕರೊನಾ ಲಕ್ಷಣಗಳನ್ನು ಹೊಂದಿರುವವರನ್ನು ಕೋವಿಡ್‌ ಕೇರ್ ಸೆಂಟರ್ ಅಥವಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ.ಮ* ಮಹಾರಾಷ್ಟ್ರ ಸೇರಿದಂತೆ ಎಲ್ಲಾ ರಾಜ್ಯಗಳಿಂದ ಬರುವ ಲಕ್ಷಣರಹಿತ ಪ್ರಯಾಣಿಕರನ್ನು 14 ದಿನಗಳ ಕ್ವಾರಂಟೈನ್‌ ಕಡ್ಡಾಯ* ಪಾರ ಮತ್ತು ಸಾರಿಗೆ ಪ್ರಯಾಣಿಕರು ದೃಢೀಕರಿಸಿದ ರಿಟರ್ನ್ ಟಿಕೆಟ್‌ಗಳನ್ನು ತೋರಿಸಬೇಕು ಅದು ಆಗಮನದ ದಿನಾಂಕದ ನಂತರ ಏಳು ದಿನಗಳಿಗಿಂತ ಕಡಿಮೆಯಿರಬಾರದು.* 8 ಗಂಟೆಗಳಿಗಿಂತ ಕಡಿಮೆ ಅವಧಿಗೆ ಬರುವ ವ್ಯಾಪಾರ ಪ್ರಯಾಣಿಕರಿ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗುತ್ತದೆ.* ಕರ್ನಾಟಕದಲ್ಲಿ 48 ಗಂಟೆಗಳಿಗಿಂತ ಹೆಚ್ಚು ಮತ್ತು ಏಳು ದಿನಗಳಿಗಿಂತ ಕಡಿಮೆ ಕಾಲ ಇರುವವರು ಕರೊನಾ ಪರೀಕ್ಷೆಗೆ ಒಳಗಾಗಬೇಕು ಮತ್ತು ಫಲಿತಾಂಶ ಬರುವವರೆಗೆ ಕ್ವಾರಂಟೈನ್‌ನಲ್ಲಿ ಇರಬೇಕು.
ಪತ್ನಿಯ ಕೊಲೆ ಮಾಡಿ ಪರಾರಿ: ಅಮ್ಮನ ಶವದೊಂದಿಗೆ ರಾತ್ರಿ ಕಳೆದ ಕಂದಮ್ಮಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − six =
Remember me
