ಚೆನ್ನೈ:ಹಣದ ಆಸೆಗಾಗಿ ಬೇರೆಯವರ ಮನೆಗೆ ಕನ್ನ ಹಾಕುವುದು ಮಾಮೂಲಾಗಿಬಿಟ್ಟಿದೆ. ಆದರೆ ತನ್ನದೇ ಮನೆಯಲ್ಲಿ ಅಂದರೆ ಗಂಡನ ಮನೆಗೇ ಕನ್ನ ಹಾಕಿದ್ದಾಳೆ ಈ ನಟಿ. ಈಕೆಗೆ ಸಾಥ್​ ನೀಡಿದವನು ತನ್ನದೇ ಮನೆಗೆ ಕನ್ನ ಹಾಕಲು ಪತ್ನಿಗೆ ಸಹಕರಿಸಿದ ಪತಿರಾಯ!
ಇಂಥದ್ದೊಂದು ಕೃತ್ಯ ಎಸಗಿದವರು ತಮಿಳುನಾಡಿನ ಕಿರುತೆರೆ ನಟಿ ಸುಚಿತ್ರಾ ಹಾಗೂ ಆಕೆಯ ಗಂಡ ಮಣಿಕಂಠನ್.
ಅಷ್ಟಕ್ಕೂ ಆಗಿದ್ದೇನೆಂದರೆ, ಸುಚಿತ್ರಾ ಇದಾಗಲೇ ಹಲವಾರು ಕಿರುತೆರೆಗಳಲ್ಲಿ ನಟಿಸಿದ್ದಾಳೆ. ಆದರೆ ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ಕೆಲಸವಿರಲಿಲ್ಲ. ಲಾಕ್​ಡೌನ್​ ಶುರುವಾದ ಆರಂಭದಲ್ಲಿ ಕೆಲಸ ಅರಸಿ ಬಂದಿದ್ದ ಮಣಿಕಂಠನ್​, ಕಿರುತೆರೆ ನಟಿಯರಿಗೆ ಪಿಕ್​ಅಪ್​, ಡ್ರಾಪ್​ ಮಾಡುವ ಕ್ಯಾಬ್​ ಚಾಲಕನಾಗಿ ಸೇರಿಕೊಂಡಿದ್ದಾನೆ. ಆ ಸಮಯದಲ್ಲಿ ಸುಚಿತ್ರಾಳ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ, ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದಾರೆ.
ಅಂತೂ ಮಣಿಕಂಠನ್​ ಮನೆಯವರು ಸುಚಿತ್ರಾಳನ್ನು ಸೊಸೆಯಾಗಿ ಒಪ್ಪಿಕೊಂಡು ಮನೆತುಂಬಿಸಿಕೊಂಡಿದ್ದಾರೆ. ಈ ವೇಳೆಗಾಗಲೇ ಕಿರುತೆರೆ ಶೂಟಿಂಗ್​ ನಿಂತು, ಸುಚಿತ್ರಾಳಿಗೂ ಕೆಲಸವಿರಲಿಲ್ಲ, ಮಣಿಕಂಠನ್​ಗೂ ಕೆಲಸವಿರಲಿಲ್ಲ. ಇಬ್ಬರ ಕೈಯಲ್ಲೂ ಹಣವಿರಲಿಲ್ಲ. ಆದರೆ ಮನೆಯಲ್ಲಿ ಸುಮ್ಮನೇ ಇರಲು ಇವರಿಗೆ ಆಗಲಿಲ್ಲ.
ಗಂಡನ ಮನೆಯಲ್ಲಿರುವ ಚಿನ್ನಾಭರಣಗಳ ಮೇಲೆ ಕಣ್ಣುಹಾಕಿದ್ದ ಸುಚಿತ್ರಾ ಅವುಗಳನ್ನು ಕದ್ದು ಪರಾರಿಯಾಗಿ ಬೇರೆ ಕಡೆ ನೆಲೆಸಲು ಗಂಡನನ್ನು ಒಪ್ಪಿಸಿದ್ದಾಳೆ. ಈ ಹಣದಿಂದ ಯೂಟ್ಯೂಬ್​ ಚಾನೆಲ್​ ನಡೆಸಿ ಅದರಿಂದ ಹಣ ಗಳಿಸಬಹುದು ಎಂದು ಗಂಡನ ತಲೆಯನ್ನು ತಿರುಗಿಸಿದ್ದಾಳೆ. ಅದಕ್ಕಾಗಿ ಗಂಡ-ಹೆಂಡತಿ ತಮ್ಮದೇ ಮನೆಯನ್ನು ದೋಚುವ ಪ್ಲ್ಯಾನ್​ ಮಾಡಿದ್ದಾರೆ.
ಇದನ್ನೂ ಓದಿ:ಚೀನಾ ಕೈಗೊಂಬೆ ನೇಪಾಳದಿಂದ ಇದೆಂಥ ಉದ್ಧಟತನ: ಪಠ್ಯಪುಸ್ತಕ, ನಾಣ್ಯಗಳಲ್ಲಿ ಪ್ರಿಂಟ್​ ಮಾಡಿದ್ದೇನು?
ಪ್ಲ್ಯಾನ್​ ಮಾಡಿದಂತೆ ಸುಚಿತ್ರಾ ಮೊದಲು ತನಗೆ ಕೆಲಸವಿದೆ ಎಂದು ಕೇಳಿ ಮೊದಲೇ ಮನೆಯಿಂದ ಚೆನ್ನೈಗೆ ಹೊರಟಿದ್ದಾಳೆ. ಮನೆಯಲ್ಲಿ ಆಭರಣ ಕದಿಯುವ ಸಲುವಾಗಿ ಗಂಡ ಮನೆಯಲ್ಲಿಯೇ ಇದದಾನೆ. ನಂತರ ಆತ ಮನೆಯಲ್ಲಿದ್ದ ಎಲ್ಲಾ ಆಭರಣ, ಹಣವನ್ನು ತೆಗೆದುಕೊಂಡು ಮನೆಯಿಂದ ಪರಾರಿಯಾಗಿದ್ದಾನೆ.
ಆಭರಣ ಕಾಣೆಯಾಗಿರುವುದಕ್ಕೆ ಕಂಗಾಲಾದ ಕುಟುಂಬಸ್ಥರು ಪೊಲೀಸ್​ ಕಂಪ್ಲೇಂಟ್​ ಕೊಟ್ಟಿದ್ದಾರೆ. ಇದು ಮಗ-ಸೊಸೆಯದ್ದೇ ಕೈವಾಡ ಎಂದು ತನಿಖೆ ವೇಳೆ ಪೊಲೀಸರಿಗೆ ತಿಳಿದಿದೆ. ಮಣಿಕಂಠನ್​ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ, ಆದರೆ ನಟಿ ಸುಚಿತ್ರಾ ಪೊಲೀಸರಿಂದ ಎಸ್ಕೇಪ್​ ಆಗಿ ತಲೆಮರೆಸಿಕೊಂಡಿದ್ದಾಳೆ. ಸದ್ಯ ಅವಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಜನರಿಂದ ಕೇಳಿದ್ದಾರೆ ಈ ಐದು ಗಿಫ್ಟ್​…

ಮನೆಗೆ ಬರುತ್ತಿದ್ದೇನೆ, ಕ್ವಾರಂಟೈನ್​ಗೆ ರೂಮ್​ ರೆಡಿ ಮಾಡು ಎಂದಿದ್ದ ಯೋಧ ಬಂದದ್ದು ಶವವಾಗಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − 1 =
Remember me
