ಕರ್ನಾಟಕ ಪ್ರವಾಸೋದ್ಯಮಮೂಲಸೌಲಭ್ಯ ನಿಗಮದಲ್ಲಿ (ಕೆಟಿಐಲ್) ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು ಹುದ್ದೆಗಳು: 38
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪ್ರವಾಸೋದ್ಯಮದ ಮೂಲಸೌಕರ್ಯ ಯೋಜನೆಗಳನ್ನು ಜಾರಿಗೆ ತರುವ ಪ್ರಮುಖ ಅಂಗವಾಗಿ ಕೆಟಿಐಎಲ್ ಕಾರ್ಯನಿರ್ವಹಿಸುತ್ತದೆ.
ಕೆಟಿಐಎಲ್‍ನಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ ಹಾಗೂ ಸಂಸ್ಥೆಯ ಅಗತ್ಯ ನೋಡಿಕೊಂಡು ಮತ್ತೆ ಒಂದು ವರ್ಷ ಅವಧಿ ವಿಸ್ತರಿಸಲಾಗುವುದು. ಅಧಿಸೂಚನೆ ಜತೆ ನೀಡಲಾದ ಅರ್ಜಿ ನಮೂನೆ ಹೊರತು ಪಡಿಸಿ ಬೇರೆ ಮಾದರಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.
ಹುದ್ದೆ, ಸಂಖ್ಯೆ ವಿವರ* ಡಿಸ್ಟ್ರಿಕ್ ಟೂರಿಸಂ ಕನ್‍ಸಲ್ಟಂಟ್ (ಡಿಟಿಸಿ) – 35* ಪಿಪಿಪಿ ಸ್ಪೆಷಲಿಸ್ಟ್ – 1* ಹೆರಿಟೇಜ್ ಅಡ್ವೈಸರ್ – 1* ಎಚ್‍ಆರ್ ಆಫೀಸರ್ – 1
ವಿದ್ಯಾರ್ಹತೆ:ಬಿಇ, ಬಿ.ಟೆಕ್, ಟೂರಿಸಂ ಅಡ್ಮಿನಿಸ್ಟ್ರೇಷನ್ (ಎಂಟಿಎ), ಎಂಬಿಎ, ಪಿಜಿಡಿಎಂ (ಎಚ್‍ಆರ್) ಜತೆ ವೃತ್ತಿ ಅನುಭವ ಅವಶ್ಯ. ಪದವಿಗಳಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.
ವಯೋಮಿತಿ:ಡಿಟಿಸಿಗೆ ಕನಿಷ್ಠ 25 ವರ್ಷ, ಗರಿಷ್ಠ 35 ವರ್ಷ, ಪಿಪಿಪಿ ಸ್ಪೆಷಲಿಸ್, ಹೆರಿಟೇಜ್ ಅಡ್ವೈಸರ್‍ಗೆ ಕನಿಷ್ಠ 25 ವರ್ಷ, ಗರಿಷ್ಠ 50 ವರ್ಷ, ಎಚ್‍ಆರ್ ಆಫೀಸರ್​ಗೆ ಕನಿಷ್ಠ 21 ವರ್ಷ, ಗರಿಷ್ಠ 38 ವರ್ಷ.
ವೇತನ:ಡಿಟಿಸಿ ಹಾಗೂ ಎಚ್‍ಆರ್ ಆಫೀಸರ್​ಗೆ ಮಾಸಿಕ 30,000 ರೂ. ವೇತನ ಇದೆ. ಹೆರಿಟೇಜ್ ಅಡ್ವೈಸರ್ ಮತ್ತು ಎಚ್‍ಆರ್ ಆಫೀಸರ್​ಗೆ ಮಾಸಿಕ 50,000 ರೂ. ವೇತನ ಜತೆ ವಿಡಿಎ ನೀಡಲಾಗುವುದು.
ಇತರ ಅರ್ಹತೆಗಳು:ಪ್ರವಾಸೋದ್ಯಮ ಯೋಜನೆಗಳನ್ನು ಅರ್ಥಮಾಡಿಕೊಳ್ಳುವ ಜಾಣ್ಮೆ, ಕಂಪ್ಯೂಟರ್ ಜ್ಞಾನ, ಎಂಎಸ್ ವರ್ಡ್ ಮತ್ತು ಎಂಎಸ್ ಎಕ್ಸೆಲ್ ತಿಳಿದಿರಬೇಕು. ಆಯೋಜನಾ ಕೌಶಲ, ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಉತ್ತಮ ಸಂವಹನ ಮತ್ತು ಬರವಣಿಗೆ ತಿಳಿದಿರಬೇಕು.
ಆಯ್ಕೆ ಪ್ರಕ್ರಿಯೆ:ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಇತರ ಪ್ರಮಾಣ ಪತ್ರಗಳು, ವೃತ್ತಿ ಅನುಭವ ಆಧರಿಸಿ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ತಜ್ಞರ ಸಮಿತಿ ಮೂಲಕ 1 ಹುದ್ದೆಗೆ 5 ಅಭ್ಯರ್ಥಿಗಳಂತೆ (1:5 ಅನುಪಾತದಲ್ಲಿ) ಸಂದರ್ಶನ ನಡೆಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 31.1.2021ಅರ್ಜಿ ಸಲ್ಲಿಸುವ ಮೇಲ್ ಐಡಿ:[email protected]ಅಧಿಸೂಚನೆಗೆ:https://bit.ly/2M0bTrhಮಾಹಿತಿಗೆ:http://www.karnatakatourism.org
ಹೆಚ್ಚಿನ ಉದ್ಯೋಗ ಮಾಹಿತಿಗೆ ನೋಡಿ
ಹೆಚ್ಚಿನ ಉದ್ಯೋಗ  ಮಾಹಿತಿಗೆ ನೋಡಿhttps://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/
ಆಯಿಲ್ ಇಂಡಿಯಾ ಲಿಮಿಟೆಡ್‍ನಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಿಗೆ ಉದ್ಯೋಗ

ಕಾನೂನು ಪದವಿ ಕಲಿತಿರುವಿರಾ? ನ್ಯಾಷನಲ್ ಲಾ ಕಾಲೇಜಿನಲ್ಲಿ ಇವೆ ಉದ್ಯೋಗಾವಕಾಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 3 =
Remember me
