ವಾಷಿಂಗ್ಟನ್:ಅಮೆರಿಕದಲ್ಲಿ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ, ಅಮೆರಿಕದಲ್ಲಿರುವ ಭಾರತೀಯ ಮತದಾರರನ್ನು ಓಲೈಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಲೇ ಇವೆ.
ಆಡಳಿತಾರೂಢ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳ ಮಧ್ಯೆ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಇವರಿಬ್ಬರ ಟಾರ್ಗೆಟ್‌ ಸದ್ಯ ಅಲ್ಲಿಯ ಭಾರತೀಯರಾಗಿದ್ದಾರೆ.
ಆದ್ದರಿಂದ ಭಾರತೀಯ ಇಡ್ಲಿಯ ನೆನಪು ಮಾಡಿಕೊಂಡು ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಪದವಿ ಅಭ್ಯರ್ಥಿ ಸೆನೆಟರ್ ಕಮಲಾ ಹ್ಯಾರಿಸ್ ಮತದಾರರ ಮನವನ್ನು ಗೆಲ್ಲಲು ಹವಣಿಸುತ್ತಿದ್ದಾರೆ. ಪಾಕಿಸ್ತಾನದ ಪರವಾಗಿ ಹಲವು ಕಡೆಗಳಲ್ಲಿ ಮಾತನಾಡಿ ಕೆಲವು ಭಾರತೀಯರ ವಿರೋಧ ಕಟ್ಟಿಕೊಂಡಿರುವ ಕಮಲಾ ಹ್ಯಾರೀಸ್‌, ಇದೀಗ ಭಾರತೀಯರ ಮತಗಳಿಸುವ ಸಲುವಾಗಿ ಭಾರತದ ಇಡ್ಲಿ ನೆನಪು ಮಾಡಿಕೊಂಡು ಭಾಷಣ ಮಾಡಿದ್ದಾರೆ.
ನಿನ್ನೆ ಅಮೆರಿಕದಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಕಮಲಾ ಹ್ಯಾರೀಸ್‌, ನನಗೆ ಭಾರತವೆಂದರೆ ತುಂಬಾ ಇಷ್ಟ. ಭಾರತದ ಜತೆ ನಮ್ಮ ಕುಟುಂಬದ ಬಾಂಧವ್ಯ ಜೋರಾಗಿದೆ. ಭಾರತೀಯ ಮೂಲ ಪರಂಪರೆ ಬಗ್ಗೆ ಅಪಾರ ಗೌರವವಿದೆ ಎಂದರು.
ಇದನ್ನೂ ಓದಿ:ಇವರು ಅವಳಿ ಸೋದರಿಯರು…ಪತಿಯರೂ ಟ್ವಿನ್ಸ್; ಈಗ ಇಬ್ರೂ ಒಟ್ಟಿಗೇ ಗರ್ಭಿಣಿಯರು !
ಇದೇ ಸಂದರ್ಭದಲ್ಲಿ ಇಲ್ಲಿಯ ಇಡ್ಲಿ ನೆನಪಿಸಿಕೊಂಡ ಕಮಲಾ, ಭಾರತದ ಇಡ್ಲಿ ತಿನ್ನಲು ತಮ್ಮ ತಾಯಿ ಒತ್ತಾಯ ಮಾಡುತ್ತಿದ್ದರೂ. ನಮ್ಮ ತಾಯಿಗೆ ಅಲ್ಲಿಯ ಇಡ್ಲಿ ಎಂದರೆ ತುಂಬಾ ಪ್ರೀತಿಯಾಗುತ್ತಿತ್ತು. ನಾನು ಭಾರತಕ್ಕೆ ಹೋದಾಗ ಇಡ್ಲಿ ತಿನ್ನುವುದಕ್ಕೆ ತಾಯಿ ಒತ್ತಾಯ ಮಾಡುತ್ತಿದ್ದರು. ಭಾರತದ ಇಡ್ಲಿಗೂ ನನಗೂ ತುಂಬಾ ಹತ್ತಿರದ ಬಾಂಧವ್ಯವಿದೆ ಎಂದು ಹೇಳಿದರು.
ನನ್ನ ತಾಯಿ ಶ್ಯಾಮಲಾ ಕ್ಯಾಲಿಫೋರ್ನಿಯಾಕ್ಕೆ ವಿಮಾನದಲ್ಲಿ ಬಂದಿಳಿದ್ದಾಗ ಅವರಿಗೆ 19 ವರ್ಷ ವಯಸ್ಸಾಗಿತ್ತು. ಆಗ ಅವರಲ್ಲಿ ಏನೂ ಇರಲಿಲ್ಲ. ಆದರೆ ಭಾರತದಲ್ಲಿ ತಮ್ಮ ತಂದೆ-ತಾಯಿ, ಅಜ್ಜ-ಅಜ್ಜಿಯರಿಂದ ಕಲಿತ ಮೌಲ್ಯದ ಪಾಠಗಳಿದ್ದವು. ನನ್ನ ಅಜ್ಜಿ ರಾಜನ್ ಮತ್ತು ತಾತ ಪಿ ವಿ ಗೋಪಾಲನ್ ಅವರು ಮೌಲ್ಯ, ಸಂಸ್ಕೃತಿಯನ್ನು ನನ್ನ ತಾಯಿಗೆ ಕಲಿಸಿಕೊಟ್ಟಿದ್ದರು. ಪ್ರಪಂಚದಲ್ಲಿ ಅನ್ಯಾಯ ಕಂಡುಬಂದಾಗ ಅದರ ವಿರುದ್ಧ ಹೋರಾಡುವ ಮನಸ್ಥಿತಿ, ಕರ್ತವ್ಯ ಹೊಂದಿರಬೇಕು ಎಂದಿದ್ದರು. ಇದೇ ತಮಗೂ ಸ್ಫೂರ್ತಿಯಾಯಿತು ಎಂದರು.
55 ವರ್ಷದ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮೊದಲ ಕಪ್ಪುವರ್ಣೀಯ ಮಹಿಳೆ. ಇವರು ತಮ್ಮ ತಾತನ ಜತೆ ಚೆನ್ನೈಗೆ ಹೋಗಿದ್ದರಂತೆ, ಈ ಕುರಿತು ಭಾಷಣದಲ್ಲಿ ನೆನಪು ಮಾಡಿಕೊಮಡ ಅವರು, ಭಾರತದ ಇತಿಹಾಸ, ಪ್ರಜಾಪ್ರಭುತ್ವ ಸ್ಥಾಪನೆ ಬಗ್ಗೆ ಹೇಳುತ್ತಿದ್ದುದನ್ನು ಸ್ಮರಿಸಿಕೊಂಡರು. ಜತೆಗೆ ಇಡ್ಲಿಯ ಕುರಿತು ಒತ್ತಿ ಹೇಳಿದರು.
ಭೂಕುಸಿತದ ಜಾಗದಲ್ಲಿ ರಾಶಿರಾಶಿ ತಲೆಬುರುಡೆ- ಮೂಳೆ, ಕಿವಿಯೋಲೆ ಪತ್ತೆ!

ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

ಹೋಟೆಲ್‌ನಲ್ಲಿ ರಾತ್ರಿ ಕಳೆದ ಪ್ರೇಮಿಗಳು ಮಾರನೆಯ ದಿನ ಶವವಾದರು!

ಅತ್ಯಂತ ಕ್ರೂರವಾಗಿ ಲಾಕಪ್‌ ಡೆತ್‌ ಮಾಡಿದ್ದ ಆರೋಪಿ ಪೊಲೀಸ್‌ ಕರೊನಾಕ್ಕೆ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + two =
Remember me
