ಪ್ರಶ್ನೆ: ನಮ್ಮದು ಅರೇಂಜ್ಡ್‌ ಮ್ಯಾರೇಜ್‌. ಆದರೆ ನನ್ನ ಪತ್ನಿಗೆ ಮೊದಲಿನಿಂದಲೂ ನನ್ನ ಕಂಡರೆ ಅಸಡ್ಡೆ. ಏನೆಂದು ಕೇಳಿದರೆ ಸರಿಯಾಗಿ ಹೇಳುತ್ತಿರಲಿಲ್ಲ. ಆರು ತಿಂಗಳಾದರೂ ಹೀಗೆಯೇ ಸಂಸಾರ ಮುಂದುವರೆಯಿತು. ಕಾರಣ ಮಾತ್ರ ಅರ್ಥವಾಗಲಿಲ್ಲ.
ಒಮ್ಮೆ ಅವಳು ಸ್ನಾನಕ್ಕೆ ಹೋದಾಗ ಅವಳಿಗೊಂದು ಫೋನ್ ಬಂತು. ನಾನು ಎತ್ತುವ ಮೊದಲೇ ಕಟ್ ಆಯಿತು. ತಕ್ಷಣ ಒಂದು ಮೆಸೇಜ್ ಬಂತು. ಅದನ್ನು ಓದಿ ನನ್ನ ಕಣ್ಣು ಕತ್ತಲಿಟ್ಟಿತು. ನಾನು ಮೋಸಹೋಗಿದ್ದೇನೆ ಎನ್ನುವ ಅರಿವಾಯಿತು. ಅದು ಅವಳ ಪ್ರಿಯತಮ ಬರೆದದ್ದು. ಅವನು ಬರೆದದ್ದನ್ನು ಇಲ್ಲಿ ಹೇಳಲೂ ನನಗೆ ಅಸಹ್ಯವಾಗುತ್ತದೆ. ಆ ನಂತರ ನಾನು ಅವಳ ಆಸೆಯನ್ನೇ ಬಿಟ್ಟೆ. ನಾನೂ ಅವಳಿಗಿಂತಾ ಹೆಚ್ಚು ನಿರಾಸಕ್ತನಾದೆ. ಆ ಬಗ್ಗೆ ಅವಳು ಇದುವರೆವಿಗೂ ಯಾಕೆ ಏನು ಎಂದು ಕೇಳಿಲ್ಲ. ಹೆಸರಿಗೆ ಇಬ್ಬರೂ ಒಂದೇ ಮನೆಯಲ್ಲಿದ್ದೇವೆ. ನಾನು ಮನೆಯಲ್ಲಿ ಊಟ ತಿಂಡಿ ಏನನ್ನೂ ಮಾಡುತ್ತಿಲ್ಲ.ಅದೊಂದು ದಿನ ಹೊರಗೆ ಹೋಗಬೇಕಿತ್ತು. ಅಂದು ಅಚಾನಕ್‌ ಆಗಿ ಅವಳ ಮೆಸೇಜ್‌ ನೋಡಿದೆ. ಅವನು ಮನೆಯಲ್ಲಿ ಇರುವುದಿಲ್ಲ. ನೀನು ಮಧ್ಯಾನ್ಹದ ಊಟಕ್ಕೆ ಬಾ. ಸಂಜೆಯವರೆಗೆ ಮಜಾ ಮಾಡೋಣ” ಎಂದು ಬರೆದಿದ್ದಳು. ಮತ್ತು ಅವನೊಂದಿಗೆ ಇರುವ ಎರಡು ಫೋಟೋಗಳನ್ನೂ ಹಾಕಿದ್ದಳು. ಆಗ ಗೊತ್ತಾಯಿತು ಅವನು ಮನೆಗೂ ಬರುತ್ತಾನೆ ಎಂದು. ಈಗ ನನಗೆ ಜೀವನವೇ ಬೇಸರವೆನಿಸುತ್ತಿದೆ. ನನಗೆ ಅವಳ ಗುಟ್ಟು ಗೊತ್ತಾಗಿರುವುದು ಅವಳಿಗೆ ತಿಳಿದಿಲ್ಲ. ಈಗ ಏನು ಮಾಡಲಿ ತಿಳಿಸಿ.
ಉತ್ತರ: ನಿಮ್ಮ ಸಮಸ್ಯೆಗೆ ಎರಡು ನೇರ ದಾರಿಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು. 1 ನಿಮ್ಮ ಹೆಂಡತಿಯ ಹತ್ತಿರ ಹೀಗೆ ಹೇಳಿ “ ಗಂಡ ಹೆಂಡತಿಯ ಸಂಬಂಧ ನಿರ್ಮಲವಾಗಿದ್ದರೆ ಮಾತ್ರ ಮುಂದುವರೆಯುತ್ತದೆ. ನೀನು ಹೀಗೆ ಎರಡು ದೋಣಿಗಳ ಮೇಲೆ ಒಂದೊಂದು ಕಾಲಿಟ್ಟು ಪ್ರಯಾಣ ಮಾಡಲಾಗುವುದಿಲ್ಲ. ನೀನು ಬೇಕಿದ್ದರೆ ನಿನ್ನ ಹಳೆಯ ಸ್ನೇಹಿತನ ಹತ್ತಿರವೇ ಹೊರಟುಹೋಗು” . ಇದಕ್ಕೆ ನಿಮ್ಮಹೆಂಡತಿ ಒಪ್ಪದಿದ್ದರೆ ನಿಮಗೆ ಎರಡನೇ ದಾರಿಯೂ ಇದೆ. ನಿಮ್ಮ ಹೆಂಡತಿಯ ತಂದೆ ಮತ್ತು ತಾಯಿಯನ್ನು ಕರೆಸಿ.
ಎಲ್ಲ ವಿಚಾರವನ್ನೂ ತಿಳಿಸಿ. ಮತ್ತು ಈ ರೀತಿ ಹೇಳಿ “ ನಿಮ್ಮ ಮಗಳಿಗೆ ನಾನು ಗಂಡನಾಗಿ ಮುಂದುವರೆಯಬೇಕೆಂದು ನಿಮಗೆ ಇಷ್ಟವಿದ್ದಲ್ಲಿ ಅವಳು ನನ್ನೊಂದಿಗೆ ನಿಯತ್ತಾಗಿ ಬಾಳಬೇಕು. ನನ್ನ ಮನೆಯಲ್ಲಿ ನನ್ನ ಜೊತೆ ಸಂಸಾರ ಮಾಡುತ್ತಾ ತನ್ನ ಹಳೆಯ ಸ್ನೇಹಿತನಿಗೆ ಫೋನ್ ಮಾಡುವುದು ಮೆಸೇಜ್ ಮಾಡುವುದು ಗರತಿಯ ಲಕ್ಷಣವಲ್ಲ. ಹೀಗಾದರೆ ನಾನು ನಿಮ್ಮ ಮಗಳಿಗೆ ಡಿವೊರ್ಸ್ ಕೊಡಬೇಕಾಗುತ್ತದೆ”.
ಇಂಥಾ ವಿಚಾರಗಳಲ್ಲಿ ದೊಡ್ಡವರ ಸಲಹೆ ಪಡೆಯಬೇಕು.  ಮಾನಮರ್ಯಾದೆ ಎಂದು ನೀವು ಹೆದರುತ್ತಿದ್ದೀರಿ. ಆದರೆ ನಿಮ್ಮ ಹೆಂಡತಿಗೆ ಅದಿಲ್ಲವಲ್ಲ? ನೀವೊಬ್ಬರೇ ಯಾಕೆ ದುಗುಡ ಅನುಭವಿಸಬೇಕು? ತಪ್ಪು ಮಾಡುತ್ತಿರುವವರು ನಿಮ್ಮ ಹೆಂಡತಿ , ಶಿಕ್ಷೆ ನಿಮಗೆ ಮಾತ್ರವೇ? ಈ ವಿಚಾರಕ್ಕೆ ನಿಮ್ಮ ಹೆಂಡತಿಯ ಹೆತ್ತವರೂ ಉತ್ತರದಾಯಿತ್ವವನ್ನು ಹೊರಬೇಕು. ಅವರಿಗೆ ತಮ್ಮ ಮಗಳ ಕಲ್ಯಾಣಗುಣಗಳನ್ನು ತಿಳಿಸಿ. ಅವರೂ ತಮ್ಮ ಮಗಳು ಮಾಡುತ್ತಿರುವುದೇ ಸರಿ ಎಂದು ವಾದಿಸಿದರೆ ಅಂಥವರ ಸಂಬಂಧವೇ ಬೇಡವೆಂದು ನಿರ್ಧರಿಸಿ ವಿಚ್ಛೇದನ ಪಡೆದುಕೊಳ್ಳಿ.
ಲವ್‌ ಮಾಡೋದೇ ಆಗಿದ್ರೆ ನೀನೇ ಮೊದಲ ಆಯ್ಕೆ ಎಂದು ಅವಳು ಹೇಳಿದಾಗ್ಲೇ ನಿಮ್ಗೆ ಗೊತ್ತಾಗಬೇಕಿತ್ತಲ್ವಾ?
ಅವಳ ಜತೆ ಏನಾದ್ರೂ ಇವರು…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
