ಹೈದರಾಬಾದ್​ :ಕೇರಳದ ಪಿಣರಾಯಿ ವಿಜಯನ್​ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಕಿಟೆಕ್ಸ್​ ಗಾರ್ಮೆಂಟ್ಸ್​ ಮಾಲೀಕ ಸಬು ಜೇಕಬ್​ ಈಗ ತೆಲಂಗಾಣದತ್ತ ಮುಖ ಮಾಡಿದ್ದಾರೆ. ಹೀಗಾಗಿ ಕೇರಳದ ನಷ್ಟ, ತೆಲಂಗಾಣಕ್ಕೆ ಲಾಭವಾಗಿ ಪರಿಣಮಿಸಲಿದೆ ಎನ್ನಲಾಗಿದೆ.
ಜಗತ್ತಿನ ಎರಡನೇ ಅತಿದೊಡ್ಡ ಮಕ್ಕಳ ಉಡುಪು ಉತ್ಪಾದಕ ಕಂಪೆನಿ ಕಿಟೆಕ್ಸ್​ನ 3,500 ಕೋಟಿ ರೂ. ಯೋಜನೆಯನ್ನು ಕೇರಳದಲ್ಲಿ ಮಾಡುವುದಿಲ್ಲ ಎಂದು ಈ ಮುನ್ನ ಜಾಕಬ್​ ಘೋಷಿಸಿದ್ದರು. ತಾವು ಸ್ವತಃ ತಮ್ಮ ಮೂಲ ರಾಜ್ಯ ಕೇರಳದಿಂದ ಹೊರಹೋಗುತ್ತಿಲ್ಲ, ತಮ್ಮನ್ನು ಅಲ್ಲಿಂದ ಅಟ್ಟಲಾಗುತ್ತಿದೆ ಎಂದು ನೊಂದು ನುಡಿದಿದ್ದರು. ತದನಂತರ ತೆಲಂಗಾಣ ಮತ್ತು ಇತರ 9 ರಾಜ್ಯಗಳು ಅವರನ್ನು ತಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಲು ಆಹ್ವಾನಿಸಿದ್ದವು ಎನ್ನಲಾಗಿದೆ.
ಇದನ್ನೂ ಓದಿ:ಕಡಿಮೆ ಬೆಲೆಗೆ ಮೊಬೈಲ್ ಫೋನು ಎಂದು ದುಡ್ಡು ಪೀಕುತ್ತಿದ್ದ ಖದೀಮರು!
ನಿನ್ನೆಯ ದಿನ ಕಿಟೆಕ್ಸ್​​ನ ಎಂಡಿ ಆದ ಸಬು ಜಾಕಬ್​ನ ತಂಡ ವಿಶೇಷ ವಿಮಾನದಲ್ಲಿ ಕೊಚಿಯಿಂದ ಹೈದರಾಬಾದ್​ಗೆ ತೆರಳಿದ್ದು, ಸಂಜೆಯ ವೇಳೆಗೆ ತೆಲಂಗಾಣದ ಕೈಗಾರಿಕಾ ಸಚಿವ ಕೆ.ಟಿ.ರಾಮರಾವ್​ ಅವರು, ಕಂಪೆನಿಯು ​ರಾಜ್ಯದಲ್ಲಿ 1,000 ಕೋಟಿ ರೂ. ಆರಂಭಿಕ ಹೂಡಿಕೆ ಮಾಡುತ್ತಿರುವುದಾಗಿ ಟ್ವೀಟ್​ ಮಾಡಿದ್ದಾರೆ. ವಾರಂಗಲ್​ನ ಕೆಎಂಟಿಪಿಯಲ್ಲಿ ಕಿಟೆಕ್ಸ್​ ಕಾರ್ಖಾನೆಗಳು ಆರಂಭವಾಗಲಿವೆ ಎಂದಿದ್ದಾರೆ.(ಏಜೆನ್ಸೀಸ್)
ಉತ್ತರಾಖಂಡ: ಹೋಟೆಲ್​ಗಳಲ್ಲಿ ಶೇ. 50 ರಷ್ಟು ಜನರಿಗೆ ಅವಕಾಶ

13 ವರ್ಷದ ಬಾಲಕಿಗೆ ಅಸಂಬದ್ಧ ಪ್ರಶ್ನೆ ಕೇಳಿದ್ದ ಬಸ್​ ಕಂಡಕ್ಟರ್​ಗೆ 1 ವರ್ಷ ಜೈಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 4 =
Remember me
