ಹೈದರಾಬಾದ್​:‘ಏ ಮಾಯ ಚೇಸಾವೆ’ ಚಿತ್ರದ ಮೂಲಕ ತೆಲುಗು ಸಿನಿ ಇಂಡಸ್ಟ್ರಿಗೆ ನಾಯಕಿಯಾಗಿ ಎಂಟ್ರಿ ಕೊಟ್ಟವರು ಸಮಂತಾ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಅಕ್ಕಿನೇನಿ ನಾಗ ಚೈತನ್ಯ ಅವರನ್ನೇ ಪ್ರೀತಿಸಿ ಮದುವೆಯಾದರು. ಸ್ವಲ್ಪ ಸಮಯದ ನಂತರ ಅವರು ವಿಚ್ಛೇದನ ಪಡೆದರು.
ಇದನ್ನೂ ಓದಿ:‘ಕಾಮ್ ಚಲೌ ಪ್ರಧಾನಿ’: ಭೂತಾನ್‌ ಪ್ರವಾಸಕ್ಕೆ ಸುಬ್ರಮಣಿಯನ್​ ಸ್ವಾಮಿ ಅಸಮಾಧಾನ.. ನಿಮಗೇಕೆ ಇಷ್ಟು ದ್ವೇಷ ಎಂದ್ರು ನೆಟಿಜನ್‌ಗಳು?
ಪ್ರಸ್ತುತ ಸಮಂತಾ ಏನು ಮಾಡುತ್ತಿದ್ದಾರೆ?: ವಿಚ್ಛೇದನದ ನಂತರ, ಸರಣಿ ಹಿಟ್ ಚಿತ್ರಗಳಲ್ಲಿ ನಟಿಸಿದ ಸಮಂತಾ ಮಯೋಸಿಟಿಸ್‌ನಿಂದ ಬಳಲುತ್ತಿದ್ದರು. ಕೆಲವು ಕಾಲ ಉದ್ಯಮದಿಂದ ದೂರವಿದ್ದರು. ಇತ್ತೀಚಿಗೆ ಮೈಯೋಸಿಟಿಸ್ ಚಿಕಿತ್ಸೆ ಪಡೆದು ಚಿತ್ರರಂಗಕ್ಕೆ ರೀ ಎಂಟ್ರಿಗೆ ರೆಡಿಯಾಗುತ್ತಿದ್ದಾರೆ ಎಂಬ ಸುದ್ದಿ ಬರುತ್ತಿದೆ. ತೀರಾ ಇತ್ತೀಚೆಗಷ್ಟೇ ವೆಬ್ ಸರಣಿಯೊಂದರ ಶೂಟಿಂಗ್ ವೇಳೆ ನಡೆದ ಘಟನೆಯ ಬಗ್ಗೆ ಸಮಂತಾ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸಮಂತಾ ಇತ್ತೀಚೆಗೆ ವೆಬ್ ಸೀರೀಸ್ ಚಿತ್ರೀಕರಣದ ವೇಳೆ ನಡೆದ ಘಟನೆಯೊಂದರ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ಯಾವುದೇ ರೀತಿಯ ವ್ಯಕ್ತಿ ತಮ್ಮ ಆರೋಗ್ಯ ಸರಿಯಿಲ್ಲದಿದ್ದರೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ನಾನು ಕೂಡ ನನ್ನ ಜೀವನದಲ್ಲಿ ಹಲವು ಬಾರಿ ನೋವನ್ನು ಅನುಭವಿಸಿದ್ದೇನೆ. ಒಂದು ವಾರದೊಳಗೆ ಮೈಯೋಸಿಟಿಸ್ ಕಡಿಮೆಯಾಗುತ್ತದೆ ಎಂದು ನಾನು ಕೂಲ್​ ಆಗಿದ್ದೆ, ಆದರೆ ಅದು ನನ್ನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿತು. ಕೆಲವೊಮ್ಮೆ ನನಗೆ ಈ ಕಾಯಿಲೆ ಬಂದಿತು ಎಂದು ದುಃಖಿಸುವ ಸಂದರ್ಭಗಳಿವೆ. ನಾನು ಒಂದೂವರೆ ವರ್ಷದಿಂದ ಈ ರೋಗದ ವಿರುದ್ಧ ಹೋರಾಡುತ್ತಿದ್ದೇನೆ ಎಂದು ನನಗೆ ನಂಬಲು ಸಾಧ್ಯವಿಲ್ಲ. ಮನಸ್ಸು ಗಟ್ಟಿಯಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬ ನಿರ್ಧಾರದಿಂದ ಹೋರಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಒಂದಷ್ಟು ಕಾಲ ನಟನೆಗೆ ವಿರಾಮ ಕೊಟ್ಟಿದ್ದಕ್ಕೆ ತುಂಬಾ ಖುಷಿಯಾಯಿತು. ಸ್ವಲ್ಪ ರಿಲ್ಯಾಕ್ಸ್ ಕೂಡ ಆಗಿತ್ತು. ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾ ಮಾಡಿದ ನಂತರ ಸಿಟಾಡೆಲ್ ಎಂಬ ವೆಬ್ ಸೀರೀಸ್ ಗೆ ಸಹಿ ಹಾಕಿದ್ದೆ. ಆ ಶೂಟಿಂಗ್ ನಲ್ಲಿ ಭಾಗವಹಿಸುವಾಗ ಒಂದಷ್ಟು ಸಾಹಸ ದೃಶ್ಯಗಳನ್ನು ಮಾಡುತ್ತಿದ್ದೆ. ಇದ್ದಕ್ಕಿದ್ದಂತೆ ನನ್ನ ಇಡೀ ದೇಹ ನೋವು ಮತ್ತು ಸೆಳೆತಕ್ಕೆ ಈಡಾಯಿತು.
ತೀವ್ರ ಅನಾರೋಗ್ಯದಿಂದ ಮೂರ್ಚೆ ಹೋದಂತಾಗಿ ಅಲ್ಲಿಯೇ ಕುಸಿದು ಬಿದ್ದೆ. ತಕ್ಷಣ ತಂಡದ ಸದಸ್ಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಶೂಟಿಂಗ್ ನಿಲ್ಲಿಸಿದ್ದಕ್ಕೆ ನನಗೆ ತುಂಬಾ ಬೇಸರವಾಯಿತು. ನಂತರ ಚೇತರಿಸಿಕೊಂಡು ಶೂಟಿಂಗ್ ಮುಗಿಸಿದೆವು ಎಂದು ಸಮಂತಾ ಹೇಳಿದರು.
‘ನಿತ್ಯ ಹಾಗೆ ಮಾಡುವವನನ್ನೇ ಮದುವೆಯಾಗ್ತೇನೆ’.. ಹಿಟ್-2 ನಾಯಕಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
