ನವದೆಹಲಿ:ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳು ಯಾರಪ್ಪಾ ಅಂದ್ರೆ ಮೊದಲು ಬರುವ ಹೆಸರು ರಿಲಯನ್ಸ್‌ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅಥವಾ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ. ಆದರೆ ಈ ವರ್ಷದ ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಅಂಕಿಅಂಶದ ಪ್ರಕಾರ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್.
ಇದನ್ನೂ ಓದಿ:ಮುಖೇಶ್ ಅಂಬಾನಿಯವರ ಬಳಿ ಇದೆ ಬಣ್ಣ ಬದಲಾಯಿಸುವ ಕಾರು; ಕೋಟಿ..ಕೋಟಿ ಬೆಲೆ ಬಾಳುವ ಈ ಕಾರು ಯಾವುದು ಗೊತ್ತಾ?ಹೌದು ಈ ಮಹಿಳೆ ಈ ವರ್ಷ ಮುಕೇಶ್ ಅಂಬಾನಿ ಅಷ್ಟೇ ಏಕೆ ಗೌತಮ್ ಅದಾನಿಯನ್ನು ಸಹ ಸಂಪತ್ತು ಗಳಿಕೆಯಲ್ಲಿ ಹಿಂದಿಕ್ಕಿದ್ದಾರೆ. ಈ ಇಬ್ಬರು ಘಟಾನುಘಟಿ ಉದ್ಯಮಿಗಳಿಗಿಂತ ದುಪ್ಪಟ್ಟು ಗಳಿಕೆಯನ್ನು ದಾಖಲಿಸಿದ್ದಾರೆ. 2023ರಲ್ಲಿ ಸಾವಿತ್ರಿ ಜಿಂದಾಲ್ ಸಂಪತ್ತು $9.6 ಬಿಲಿಯನ್ ಹೆಚ್ಚಾಗಿದೆ.ಪ್ರಸ್ತುತ ಸಾವಿತ್ರಿ ಜಿಂದಾಲ್​ ಅವರ ಒಟ್ಟು ಸಂಪತ್ತು 25 ಬಿಲಿಯನ್ ಡಾಲರ್ ತಲುಪಿದೆ. ಈ ಕಾರಣದಿಂದಾಗಿ, ಅವರು ಅನೇಕ ದೊಡ್ಡ ಉದ್ಯಮಿಗಳನ್ನು ಹಿಂದಿಕ್ಕಿದ್ದಾರೆ. ಈ ವರ್ಷ ದೇಶದ ಅಗ್ರ 5 ಶ್ರೀಮಂತರಲ್ಲಿ ಒಬ್ಬರಾಗಿ ಅವರು ಗುರುತಿಸಿಕೊಂಡಿದ್ದಾರೆ.
ಇನ್ನು ಈ ವರ್ಷ ವಿಪ್ರೊದ ಅಜೀಂ ಪ್ರೇಮ್‌ಜಿ ಆಸ್ತಿ ಹೆಚ್ಚಾಗಿದ್ದು 24 ಬಿಲಿಯನ್ ಡಾಲರ್. ಈ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿ ಅವರ ಸಂಪತ್ತು $ 5 ಬಿಲಿಯನ್ ಮತ್ತು ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಂಪತ್ತು $ 35.4 ಶತಕೋಟಿಯಷ್ಟು ಕಡಿಮೆಯಾಗಿದೆ.
ಸಂಪತ್ತು ಹೆಚ್ಚಿಸಿಕೊಂಡವರು:ಜಿಂದಾಲ್ ನಂತರ, ಎಚ್‌ಸಿಎಲ್ ಟೆಕ್ನಾಲಜೀಸ್‌ನ ಸಂಸ್ಥಾಪಕ ಮತ್ತು ಚೇರ್ಮನ್ ಶಿವ ನಾಡಾರ್ ಎರಡನೇ ಸ್ಥಾನದಲ್ಲಿದ್ದಾರೆ, ಕಳೆದ ಒಂದು ವರ್ಷದಲ್ಲಿ ಅವರ ಸಂಪತ್ತು $8 ಬಿಲಿಯನ್ ಹೆಚ್ಚಾಗಿದೆ. ಈ ಅವಧಿಯಲ್ಲಿ ಡಿಎಲ್‌ಎಫ್‌ನ ಕೆಪಿ ಸಿಂಗ್ ಅವರ ಸಂಪತ್ತು 7 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಮತ್ತು ಶಾಪೂರ್ಜಿ ಪಲ್ಲೋಂಜಿ ಗ್ರೂಪ್‌ನ ಶಾಪೂರ್ ಮಿಸ್ತ್ರಿ ಅವರ ಸಂಪತ್ತಿನಲ್ಲಿ $ 6.5 ಶತಕೋಟಿ ಹೆಚ್ಚಳ ದಾಖಲಾಗಿದೆ. ಇದಲ್ಲದೇ ಸುನೀಲ್ ಮಿತ್ತಲ್, ಸಂಸದ ಲೋಧಾ, ರವಿ ಜೈಪುರಿಯಾ, ದಿಲೀಪ್ ಸಾಂಘ್ವಿ ಸೇರಿದಂತೆ ಹಲವು ಉದ್ಯಮಿಗಳ ಸಂಪತ್ತು ಈ ಅವಧಿಯಲ್ಲಿ ಹೆಚ್ಚಿದೆ.
ಸಾವಿತ್ರಿ ಜಿಂದಾಲ್ ಯಾರು?:ಸಾವಿತ್ರಿ ಜಿಂದಾಲ್ ಓಪಿ ಜಿಂದಾಲ್ ಗ್ರೂಪ್‌ನ ಅಧ್ಯಕ್ಷೆ. ಈ ಕಂಪನಿಯನ್ನು ಅವರ ಪತಿ ಓಂ ಪ್ರಕಾಶ್ ಜಿಂದಾಲ್ ಪ್ರಾರಂಭಿಸಿದ್ದು, ಉಕ್ಕು ಉದ್ಯಮದಲ್ಲಿ ಉತ್ತಮ ಹಿಡಿತವನ್ನು ಹೊಂದಿದೆ. ಇದಲ್ಲದೇ, ಜೆಎಸ್‌ಡಬ್ಲ್ಯೂ ಎನರ್ಜಿ, ಜಿಂದಾಲ್ ಪವರ್, ಜಿಂದಾಲ್ ಹೋಲ್ಡಿಂಗ್ಸ್, ಜೆಎಸ್‌ಡಬ್ಲ್ಯೂ ಸಾ ಮತ್ತು ಜಿಂದಾಲ್ ಸ್ಟೇನ್‌ಲೆಸ್ ಕಂಪನಿಗಳ ಮೂಲಕ ಜಿಂದಾಲ್ ಗ್ರೂಪ್‌ನ ವ್ಯವಹಾರವು ಹಲವು ವಲಯಗಳಲ್ಲಿ ಹರಡಿದೆ.
ಪಾಕ್​ ಯುವತಿಯ ಮರ್ಯಾದೆ ಹತ್ಯೆ: ಇಟಲಿ ಕೋರ್ಟ್​ನಲ್ಲಿ ಪಾಲಕರಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
