ನವದೆಹಲಿ: ಪುರಾಣ ಪ್ರಸಿದ್ಧ ರಾಮಸೇತುವನ್ನು ನ್ಯಾಷನಲ್ ಹೆರಿಟೇಜ್ ಮೋನ್ಯುಮೆಂಟ್ ಎಂದು ಪರಿಗಣಿಸಬೇಕೆಂಬ ಅರ್ಜಿಯ ವಿಚಾರಣೆಯನ್ನು ಮೂರು ತಿಂಗಳ ಬಳಿಕ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ.
ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಈ ಅರ್ಜಿಯನ್ನು ಸಲ್ಲಿಸಿದ್ದು, ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂಬ ಸ್ಥಾನಮಾನವನ್ನು ರಾಮಸೇತುವಿಗೆ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂಬ ಮನವಿಯನ್ನು ಮಾಡಿದ್ದಾರೆ.
ಸುಪ್ರೀಂ ಕೋರ್ಟ್​ನ ಮುಖ್ಯನ್ಯಾಯಮೂರ್ತಿ ಎಸ್​.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಎಸ್.ಎ.ನಜೀರ್​, ಸಂಜೀವ್ ಖನ್ನಾ ಅವರಿದ್ದ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ತುರ್ತು ನಡೆಸಬೇಕೆಂಬ ಮಧ್ಯಂತರ ಮನವಿಯನ್ನು ಪರಿಶೀಲಿಟಿ ನೀಡಿದ ಟಿಪ್ಪಣಿಯಲ್ಲಿ, ಮೂರು ತಿಂಗಳ ನಂತರ ಮತ್ತೆ ನೆನಪಿಸಿ. ಆಗ ಇದನ್ನು ಕೈಗೆತ್ತಿಕೊಳ್ಳೋಣ ಎಂದು ಸ್ಪಷ್ಟಪಡಿಸಿದೆ.
ರಾಮಸೇತು ಅಸ್ತಿತ್ವದಲ್ಲಿ ಇರುವ ವಿಚಾರವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಈ ಕುರಿತ ಮೊದಲ ಪ್ರಕರಣದಲ್ಲಿ ತಮಗೆ ಜಯ ಲಭಿಸಿದೆ ಎಂಬುದನ್ನೂ ಸ್ವಾಮಿ ಕೋರ್ಟ್​ ಗಮನಕ್ಕೆ ತಂದರು. 2017ರಲ್ಲಿ ಕೇಂದ್ರ ಸಚಿವರು ಈ ಬಗ್ಗೆ ಸಭೆ ಕರೆದು ಮಾಹಿತಿ ಪಡೆದುಕೊಂಡು ಚರ್ಚೆಯೂ ನಡೆದಿದೆ. ಆದರೆ, ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂಬುದು ಘೋಷಿಸುವುದು ಬಾಕಿ ಇದೆ ಎಂದು ಕೋರ್ಟ್​ಗೆ ಸ್ವಾಮಿ ವಿವರಿಸಿದ್ದಾರೆ.
ಸೇತು ಸಮುದ್ರ ಯೋಜನೆ ಮೂಲಕ ಈ ರಾಮಸೇತುವಿಗೆ ಹಾನಿ ಮಾಡಲು ಹಿಂದಿನ ಯುಪಿಎ ಸರ್ಕಾರ ಮುಂದಾಗಿದ್ದಾಗ ಬಹಳ ಪ್ರತಿರೋಧ ಎದುರಾಗಿತ್ತು. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 6 =
Remember me
