ಲಾಕ್​ಡೌನ್​ನಲ್ಲಿ ಮನೆಯಲ್ಲೇ ಕುಳಿತುಕೊಳ್ಳಬೇಕಾದಾಗ ಹಲವರು ಏನೇನನ್ನೋ ಮಾಡಿದ್ದಾರೆ. ಅಂಥದ್ದರಲ್ಲಿ ಇಲ್ಲೊಬ್ಬ ಬಾಲಕ ಕಾದಂಬರಿ ಬರೆದು ಗಮನ ಸೆಳೆದಿದ್ದಾನೆ. ಲಾಕ್​ಡೌನ್​ ಅವಧಿಯಲ್ಲಿ ಹಾಗೂ ಅದಕ್ಕೂ ಮುಂಚಿನ ಕೆಲವು ವರ್ಷಗಳಲ್ಲಿ ತಾನು ಗಮನಿಸಿದ್ದ ಸಾಮಾಜಿಕ ಸಮಸ್ಯೆಗಳನ್ನೇ ಆಧರಿಸಿ, ಹದಿನಾರು ವರ್ಷದ ಈ ಬಾಲಕ ಚೊಚ್ಚಲ ಕಾದಂಬರಿಯೊಂದನ್ನು ರಚಿಸಿದ್ದಾನೆ.
ಕಾದಂಬರಿಗೆ ಬೇಕಾದ ಕಥೆಯ ಎಳೆಗೆ ಬೇಕಾದ ಅಂಶಗಳನ್ನು ನೆನಪಿಸಿಕೊಳ್ಳಲು ನನಗೆ 30 ದಿನಗಳು ಬೇಕಾದವು. ಲಾಕ್​ಡೌನ್​ ಅವಧಿಯಲ್ಲಿ ನಾನು ಮನೆಯಲ್ಲೇ ಕುಳಿತು ಅನುಭವಿಸಿದ ನೋವು-ನಲಿವು ಹಾಗೂ ಅದಕ್ಕೂ ಮುಂಚಿನ ಕೆಲವು ವರ್ಷಗಳಲ್ಲಿನ ನನ್ನ ಗ್ರಹಿಕೆ ಆಧರಿಸಿ ಈ ಕಾದಂಬರಿ ಬರೆದಿದ್ದೇನೆ ಎನ್ನುವ ಈ ಬಾಲಕ, ಮುಂದೆ ಇದರ ಸೀಕ್ವೆಲ್​ ಬಂದರೂ ಅಚ್ಚರಿ ಇಲ್ಲ ಎನ್ನುತ್ತಿದ್ದಾನೆ.
ಅಂದಹಾಗೆ ಈ ಬಾಲಕನ ಹೆಸರು ಕ್ರಿಶ್​ ಕುನಾಲ್​. ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರದ ನಿವಾಸಿ ಆಗಿರುವ ಈತ, ಈ ಕಾದಂಬರಿಯನ್ನು ಹಿಂದಿಯಲ್ಲಿ ಬರೆದಿದ್ದು, ಅದಕ್ಕೆ ‘ಆಧ ಜೀವನ್​- ಪೂರ ಲಾಕ್​ಡೌನ್​ ಮೇ..’ ಎಂಬ ಶೀರ್ಷಿಕೆ ಕೊಟ್ಟಿದ್ದಾನೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − eleven =
Remember me
