ತೆಲಂಗಾಣ:ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಅಪಾರ. ಶಿಕ್ಷಣವನ್ನು ಕಲಿಸಲು ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಾರೆ. ಅವರೊಂದಿಗೆ ಆಧ್ಯಾತ್ಮಿಕ ಬಂಧವು ರೂಪುಗೊಳ್ಳುತ್ತದೆ. ಶಿಕ್ಷಕರೊಂದಿಗಿನ ಆ ಬಾಂಧವ್ಯ ಕಳೆದು ಹೋದರೆ ಆಗುವ ನೋವು ಹೇಳಲಾಗದು. ಇಂತಹದ್ದೆ ಒಂದು ಭಾವುಕ ಘಟನೆ ಕುರಿತಾಗಿ ನಾವು ಇಂದು ನಿಮಗೆ ತಿಳಿಸಲಿದ್ದೇವೆ.
ಮುದ್ದಾಡ ಬಾಲರಾಜು ಅವರು ನಲ್ಗೊಂಡ ಜಿಲ್ಲೆಯ ದಿಂಡಿ ಮಂಡಲದ ವಾವಿಕೋಲ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 9 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ವರ್ಗಾವಣೆಯಲ್ಲಿ ಬಾಲರಾಜು ಅವರನ್ನು ಮಂಡಲದ ಹೊಸ ತಾಂಡಾಕ್ಕೆ ವರ್ಗಾವಣೆ ಮಾಡಲಾಗಿತ್ತು. ಶಿಕ್ಷಕಿ ವರ್ಗಾವಣೆಗೆ ತೆರಳುತ್ತಿದ್ದ ವೇಳೆ ವಿದ್ಯಾರ್ಥಿಗಳೆಲ್ಲ ಕಣ್ಣೀರಿಟ್ಟಿದ್ದಾರೆ. ಈ ಕುರಿತಾದ ಕೆಲವು ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.
ಶಿಕ್ಷಕರನ್ನು ಬಿಟ್ಟು ಹೋಗಬೇಡಿ ಎಂದು ಬೇಡಿಕೊಂಡರು. ಎಲ್ಲ ವಿದ್ಯಾರ್ಥಿಳೊಂದಿಗೆ ಊಟ ಮಾಡಿದ ಶಿಕ್ಷಕ ಬಾಲರಾಜು ಅವರಿಗೆ ಊಟ ಹಾಕುವ ಮೂಲಕ ಪ್ರೀತಿ ತೋರಿದ್ದಾರೆ. ಆದರೆ ಕರ್ತವ್ಯದ ನಿಮಿತ್ತ ಶಾಲೆಯಿಂದ ಬೆರೆ ಕಡೆ ತೆರಳುವುದು ಶಿಕ್ಷಕರಿಗೆ ಅನಿವಾರ್ಯವಾಗಿತ್ತು. ಇದನ್ನು ಮಕ್ಕಳಿಗೆ ಅರ್ಥ ಮಾಡಿಸಿದ ಶಿಕ್ಷಕ ವಿದ್ಯಾರ್ಥಿಗಳನ್ನು ಬಿಟ್ಟು ಹೋಗಲಾರದೆ ಬೇಸರ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರಿಗೆ ವರ್ಗಾವಣೆ ಸಹಜ, ಎಲ್ಲೇ ಇದ್ದರೂ ನಿಮ್ಮ ಒಳಿತಿಗಾಗಿ ಹಾರೈಸಿ ಅಗತ್ಯ ಸಹಕಾರ ನೀಡುವುದಾಗಿ ಹೇಳಿ ವಿದ್ಯಾರ್ಥಿಗಳಿಗೆ ಸಾಂತ್ವನ ಹೇಳಿದರು. ವಿದ್ಯಾರ್ಥಿಗಳ ಅಭಿಮಾನದ ಭಾವುಕ ಕ್ಷಣಗಳನ್ನು ಕಂಡು ಒಂದು ಹಂತದಲ್ಲಿ ಶಿಕ್ಷಕರೂ ಭಾವುಕರಾಗಿ ಕಣ್ಣೀರಿಟ್ಟರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ವಾತ್ಸಲ್ಯವು ಗ್ರಾಮಸ್ಥರು ಮತ್ತು ಪೋಷಕರನ್ನು ಆಕರ್ಷಿಸಿದೆ.
ಗುಡ್ ನ್ಯೂಸ್ ಕೊಟ್ಟ ಭುವನ್, ಹರ್ಷಿಕಾ ಪೂಣಚ್ಚ ದಂಪತಿ; ತಾಯಿಯಾಗ್ತಿದ್ದಾರೆ ಕೊಡಗಿನ ಕುವರಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − eight =
Remember me
