ನವದೆಹಲಿ:ಕಳೆದ 375 ವರ್ಷಗಳಿಂದ ಕಾಣೆಯಾಗಿದ್ದ ಜಗತ್ತಿನ 8ನೇ ಖಂಡವನ್ನು ವಿಜ್ಞಾನಿಗಳು ಇದೀಗ ಪತ್ತೆಹಚ್ಚಿದ್ದಾರೆ. ಈ ಹೊಸ ಖಂಡದ ಬಹುತೇಕ ಭಾಗ ನೀರಿನಲ್ಲಿ ಮುಳುಗಡೆಯಾಗಿದೆ.
ಭೂವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರ ಸಣ್ಣ ತಂಡವು ಹೊಸದಾಗಿ ಪತ್ತೆಹಚ್ಚಿದ ಝೀಲ್ಯಾಂಡಿಯಾ ಅಥವಾ ಟೆ ರಿಯು-ಎ-ಮೌಯಿ ಖಂಡದ ನಕ್ಷೆಯನ್ನು ರಚಿಸಿದೆ ಎಂದು Phys.org ವರದಿ ಮಾಡಿದೆ. ಸಮುದ್ರದ ತಳದಿಂದ ಹೂಳೆತ್ತುವಾಗ ವಶಕ್ಕೆ ಪಡೆದ ಕಲ್ಲಿನ ಮಾದರಿಗಳಿಂದ ಪಡೆದ ಡೇಟಾವನ್ನು ಬಳಸಿ ಸಂಶೋಧಕರು ಹೊಸ ಖಂಡವನ್ನು ಪತ್ತೆ ಮಾಡಿದ್ದಾರೆ. ಇದರ ಕುರಿತಾದ ಸಂಶೋಧನಾ ವರದಿಯು ಜರ್ನಲ್​ ಟೆಕ್ಟೊನಿಕ್ಸ್​ನಲ್ಲಿ ಪ್ರಕಟವಾಗಿದೆ.
ಬಿಬಿಸಿ ವರದಿಗಳ ಪ್ರಕಾರ ಝೀಲ್ಯಾಂಡಿಯಾ 1.89 ಮಿಲಿಯನ್​ ಚದರ ಮೈಲಿ (4.9 ಚದರ ಕಿ.ಮೀ) ಯ ವಿಶಾಲವಾದ ಖಂಡವಾಗಿದ್ದು, ಮಡಗಾಸ್ಕರ್​ ದ್ವೀಪಕ್ಕಿಂತಲೂ ಆರು ಪಟ್ಟು ಅಧಿಕವಾಗಿದೆ. ವಾಸ್ತವವಾಗಿ ಜಗತ್ತಿನಲ್ಲಿ 8 ಖಂಡಗಳಿವೆ ಎಂದು ವಿಜ್ಞಾನಿಗಳ ತಂಡ ಮಾಹಿತಿ ನೀಡಿದೆ. ಇತ್ತೀಚಿನ ಸೇರ್ಪಡೆಯೊಂದಿಗೆ ಝೀಲ್ಯಾಂಡಿಯಾ ವಿಶ್ವದ ಅತ್ಯಂತ ಚಿಕ್ಕದಾದ, ತೆಳುವಾದ ಮತ್ತು ಅತೀ ಕಿರಿಯ ಖಂಡ ಎಂಬ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಈ ಹೊಸ ಖಂಡವು ಶೇ. 94ರಷ್ಟು ನೀರಿನ ಒಳಗಡೆ ಇದೆ. ನ್ಯೂಜಿಲೆಂಡ್‌ನಂತೆಯೇ ಕೆಲವೇ ಕೆಲವು ದ್ವೀಪಗಳನ್ನು ಹೊಂದಿದೆ.
ಇದನ್ನೂ ಓದಿ:18 ತಿಂಗಳಲ್ಲಿ 108 ಕೆಜಿ ತೂಕ ಇಳಿಸಿಕೊಂಡಿದ್ದ ಅನಂತ್​​ ಅಂಬಾನಿ!; ಫಿಟ್ನೆಸ್ ಟ್ರೈನರ್​ ಹೇಳಿದ್ದೇನು?
ಸ್ಪಷ್ಟವಾದ ಸಂಗತಿಯನ್ನು ಬಹಿರಂಗಪಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂಬುದಕ್ಕೆ ಈ ಹೊಸ ಅನ್ವೇಷಣೆಯೇ ಒಂದು ಉದಾಹರಣೆಯಾಗಿದೆ ಎಂದು ನ್ಯೂಜಿಲೆಂಡ್ ಕ್ರೌನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಜಿಎನ್‌ಎಸ್ ಸೈನ್ಸ್‌ನ ಭೂವಿಜ್ಞಾನಿ ಆಂಡಿ ಟುಲೋಚ್ ಹೇಳಿದ್ದಾರೆ. ಇವರು ಝೀಲ್ಯಾಂಡಿಯಾ ಅನ್ನು ಕಂಡುಹಿಡಿದ ತಂಡದ ಭಾಗವಾಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ವಿಜ್ಞಾನಿಗಳ ಪ್ರಕಾರ ಝೀಲ್ಯಾಂಡಿಯ ಅಧ್ಯಯನ ಮಾಡಲು ಕಷ್ಟಕರವಾಗಿದೆ. ಸದ್ಯ ಸಮುದ್ರದ ತಳದಿಂದ ಬೆಳೆದ ಬಂಡೆಗಳು ಮತ್ತು ಕೆಸರು ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುತ್ತಿದ್ದಾರೆ. ಈ ಸಂಗ್ರಹಗಳಲ್ಲಿ ಹೆಚ್ಚಿನವು ಕೊರೆಯುವ ಸ್ಥಳಗಳಿಂದ ಬಂದವುಗಳಾಗಿವೆ. ಬಂಡೆಯ ಮಾದರಿಗಳ ಅಧ್ಯಯನವು ಪಶ್ಚಿಮ ಅಂಟಾರ್ಕ್ಟಿಕಾದಲ್ಲಿ ಭೂವೈಜ್ಞಾನಿಕ ಮಾದರಿಗಳನ್ನು ತೋರಿಸಿದೆ. ಅದು ನ್ಯೂಜಿಲೆಂಡ್‌ನ ಪಶ್ಚಿಮ ಕರಾವಳಿಯ ಕ್ಯಾಂಪ್‌ಬೆಲ್ ಪ್ರಸ್ಥಭೂಮಿಯ ಬಳಿ ಸಬ್ಡಕ್ಷನ್ ವಲಯದ ಸಾಧ್ಯತೆಯ ಬಗ್ಗೆ ಸುಳಿವು ನೀಡಿದೆ.
ಹೊಸದಾಗಿ ಸಂಸ್ಕರಿಸಿದ ನಕ್ಷೆಯು ಝೀಲ್ಯಾಂಡಿಯಾ ಖಂಡದ ಮ್ಯಾಗ್ಮ್ಯಾಟಿಕ್ ಆರ್ಕ್ ಅಕ್ಷದ ಸ್ಥಳವನ್ನು ಮಾತ್ರವಲ್ಲದೆ ಇತರ ಪ್ರಮುಖ ಭೂವೈಜ್ಞಾನಿಕ ಲಕ್ಷಣಗಳನ್ನು ತೋರಿಸುತ್ತದೆ. ಝೀಲ್ಯಾಂಡಿಯಾವು ಮೂಲತಃ ಗೊಂಡ್ವಾನಾದ ಪ್ರಾಚೀನ ಮಹಾಖಂಡದ ಭಾಗವಾಗಿತ್ತು. ಇದು ಸುಮಾರು 550 ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿತು ಮತ್ತು ಮೂಲಭೂತವಾಗಿ ದಕ್ಷಿಣ ಗೋಳಾರ್ಧದಲ್ಲಿ ಎಲ್ಲಾ ಭೂಮಿಯನ್ನು ಒಟ್ಟುಗೂಡಿಸಿತು.(ಏಜೆನ್ಸೀಸ್​)
18 ತಿಂಗಳಲ್ಲಿ 108 ಕೆಜಿ ತೂಕ ಇಳಿಸಿಕೊಂಡಿದ್ದ ಅನಂತ್​​ ಅಂಬಾನಿ!; ಫಿಟ್ನೆಸ್ ಟ್ರೈನರ್​ ಹೇಳಿದ್ದೇನು?

ಶತಕೋಟ್ಯಧಿಪತಿ ಉದ್ಯಮಿ ಮುಕೇಶ್ ಅಂಬಾನಿ ಮಕ್ಕಳಿಗೆ ವೇತನವಿಲ್ಲ!

ವೆಡ್ಡಿಂಗ್​​​​​ ಹಾಲ್​​ನಲ್ಲಿ ಅಗ್ನಿ ಅವಘಡ: 100 ಮಂದಿ ಸಾವು, 150ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − two =
Remember me
