ನವದೆಹಲಿ/ತಿರುವನಂತಪುರಂ:ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಸಂಪುಟದ ಸಚಿವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. “ಅವರಿಗೆ ನಾಚಿಕೆಯೇ ಇಲ್ಲ” ಎಂದು ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಕೆಲವು ವಿಶ್ವವಿದ್ಯಾನಿಲಯಗಳ ಸೆನೆಟ್‌ಗೆ ತಾವು ಮಾಡಿದ ನಾಮನಿರ್ದೇಶನಗಳ ಬಗ್ಗೆ ಎಡರಂಗದ ಸರ್ಕಾರದ ಮಂತ್ರಿಗಳು ಮಾಡಿರುವ ಟೀಕೆಗೆ ಎಂದು ರಾಜ್ಯಪಾಲರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
“ನಾನು ಯಾರನ್ನು ಸೆನೆಟ್‌ಗೆ ನಾಮನಿರ್ದೇಶನ ಮಾಡುತ್ತೇನೆ ಎಂಬುದರ ಬಗ್ಗೆ ಅವರಿಗೆ ಏಕೆ ಬೇಕು? ಮುಖ್ಯಮಂತ್ರಿ ಮತ್ತು ಮಂತ್ರಿಗಳಿಗೆ ನಾಚಿಕೆಯೇ ಇಲ್ಲ. ರಾಜ್ಯ ಹಣಕಾಸು ಸಚಿವರು ಬಂದು ಒಬ್ಬ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಲು ನನಗೆ ಮನವಿ ಮಾಡಿದರು” ಎಂದೂ ಖಾನ್ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಖಾನ್​, “ನಾನು ಸೂಚಿಸಿದ ವ್ಯಕ್ತಿಗಳು ಕುಲಪತಿಗಳು (ವೈಸ್​ ಚಾನ್ಸಲರ್) ಶಿಫಾರಸು ಮಾಡಿದ ಪಟ್ಟಿಗಿಂತ ಭಿನ್ನರಾಗಿದ್ದಾರೆ ಎಂದು ಈ ಜನರಿಗೆ (ಮುಖ್ಯಮಂತ್ರಿ ಮತ್ತು ಮಂತ್ರಿಗಳಿಗೆ) ಹೇಗೆ ಗೊತ್ತಾಯಿತು? ಅವರು ನನಗೆ ಶಿಫಾರಸು ಮಾಡಲು ನಾಮನಿರ್ದೇಶಿತರ ಪಟ್ಟಿಯನ್ನು ವೈಸ್​ ಚಾನ್ಸಲರ್​ಗೆ ಶಿಫಾರಸು ಮಾಡಿದರು,” ಎಂದಿದ್ದಾರೆ.
ಈ ಕುರಿತು ತನಿಖೆಗೆ ಆದೇಶಿಸಿದ್ದೇನೆ. ಮುಖ್ಯಮಂತ್ರಿ ಮತ್ತು ಸಚಿವರು ಪ್ರಸ್ತಾಪಿಸಿದ ಹೆಸರುಗಳನ್ನು ವಿಸಿಗಳು ಶಿಫಾರಸು ಮಾಡುತ್ತಿರುವುದು ಕಂಡುಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಖಾನ್ ಹೇಳಿದ್ದಾರೆ.
ವಿಶ್ವವಿದ್ಯಾನಿಲಯಗಳ ಕುಲಾಧಿಪತಿಯಾಗಿ ಅವರು ಮಾಡಿದ ಕೇರಳ ವಿಶ್ವವಿದ್ಯಾಲಯದ ಸೆನೆಟ್‌ಗೆ ನಾಲ್ವರು ವಿದ್ಯಾರ್ಥಿಗಳ ನಾಮನಿರ್ದೇಶನವನ್ನು ಕೇರಳ ಹೈಕೋರ್ಟ್ ತಡೆಹಿಡಿದಿದೆ ಎಂದು ಪ್ರಶ್ನಿಸಿದಾಗ, ಇದರ ಕಾರಣಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಸೋಮವಾರ ರಾತ್ರಿ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಸಿಪಿಎಂನ ವಿದ್ಯಾರ್ಥಿ ಘಟಕವಾದ ಭಾರತೀಯ ಸ್ಟೂಡೆಂಟ್ಸ್ ಫೆಡರೇಶನ್ (ಎಸ್‌ಎಫ್‌ಐ) ಕಾರ್ಯಕರ್ತರು ತಮ್ಮ ವಾಹನದ ಮೇಲೆ ದಾಳಿ ಮಾಡಿದ ಕುರಿತು ಮಾತನಾಡಿದ ಅವರು, ಖಾನ್ ಅವರ ಹೆಸರಿನಲ್ಲಿ ಸರ್ಕಾರಿ ಆಸ್ತಿಯನ್ನು ಹೇಗೆ ಹಾನಿಗೊಳಿಸಬಹುದು ಎಂದು ಪ್ರಶ್ನಿಸಿದರು.

ಶೈಕ್ಷಣಿಕ ಅರ್ಹತೆ ಇದ್ದರೂ ನಿರುದ್ಯೋಗದಿಂದ ಬೇಸರ… ಸಂಸತ್ತಿನ ಹೊರಗೆ ಬಂಧಿಸಲ್ಪಟ್ಟ ನೀಲಂ ಸೋದರ, ತಾಯಿ ಹೇಳುವುದೇನು?

ಲೋಕಸಭೆ ಭದ್ರತಾ ಲೋಪ ಕುರಿತು ಶಾ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಸಂಸತ್​ ದಾಳಿಯ ಬೆದರಿಕೆ ಕಡೆಗಣನೆ; 22 ವರ್ಷದ ನಂತರ ಅದೇ ದಿನ ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆ

pl
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
