ನವದೆಹಲಿ:ಇಂಡಿಯಾ- ಭಾರತ ನಾಮಕರಣ ವಿವಾದದ ಬಗ್ಗೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭ ಅವರು I.N.D.I.A ಬಣದ ಹೆಸರನ್ನೇ ಬದಲಾಯಿಸಿದಾಗ ಕೇಂದ್ರ ಸರ್ಕಾರ ಹೆಸರನ್ನು ಬದಲಾಯಿಸುವ ಗಿಮಿಕ್ ಕಪಟವನ್ನು ನಿಲ್ಲಿಸಬಹುದು ಎಂದು ಹೇಳಿದ್ದಾರೆ. ಅವರು ಸೂಚಿಸಿದ ಹೆಸರು ಹೀಗಿದೆ: BHARAT: alliance for Betterment, Harmony And Responsible Advancement for Tommorow. ಅಂದರೆ “ನಾಳೆಯ ಸುಧಾರಣೆ, ಸಾಮರಸ್ಯ ಮತ್ತು ಜವಾಬ್ದಾರಿಯುತ ಪ್ರಗತಿ” ಎಂದರ್ಥ ಬರುತ್ತದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಜಿ20 ಔತಣಕೂಟದ ಆಹ್ವಾನದಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ’ ಎಂದು ಉಲ್ಲೇಖಿಸಿದ್ದು ಇಷ್ಟೆಲ್ಲ ವಿವವಾದಕ್ಕೆ ಕಾರಣವಾಗಿದೆ. ಈ ಕುರಿತಾಗಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಿದ್ದು ಮೋದಿ ಸರ್ಕಾರ ಇಂಡಿಯಾವನ್ನು ಕೈಬಿಟ್ಟು ಕೇವಲ ಭಾರತವನ್ನು ದೇಶದ ಹೆಸರಾಗಿ ಉಳಿಸಿಕೊಳ್ಳಲು ಯೋಜಿಸುತ್ತಿದೆ ಎಂದು ಆರೋಪಿಸಿವೆ.
‘ಎಕ್ಸ್’ನಲ್ಲಿ (ಹಿಂದೆ ಟ್ವಿಟರ್) ಮಾಡಿದ ಪೋಸ್ಟ್ನಲ್ಲಿ ಶಶಿ ತರೂರ್, “ನಾವು ಖಂಡಿತವಾಗಿಯೂ ನಮ್ಮನ್ನು ಭಾರತ್ ಮೈತ್ರಿ ಎಂದು ಕರೆದುಕೊಳ್ಳಬಹುದು. ಆಗ ಬಹುಶಃ ಆಡಳಿತ ಪಕ್ಷವು ಹೆಸರುಗಳನ್ನು ಬದಲಾಯಿಸುವ ಈ ಕಪಟ ಆಟವನ್ನು ನಿಲ್ಲಿಸಬಹುದು” ಎಂದು ಹೇಳಿದರು. ಕಾಂಗ್ರೆಸ್, ವಿರೋಧ ಪಕ್ಷಗಳ ಬಣವಾದ ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈಯನ್ಸ್ ನ (ಇಂಡಿಯಾ) ಒಂದು ಭಾಗವಾಗಿದೆ.
We could of course call ourselves the Alliance for Betterment, Harmony And Responsible Advancement for Tomorrow (BHARAT).Then perhaps the ruling party might stop this fatuous game of changing names.— Shashi Tharoor (@ShashiTharoor)September 6, 2023
We could of course call ourselves the Alliance for Betterment, Harmony And Responsible Advancement for Tomorrow (BHARAT).Then perhaps the ruling party might stop this fatuous game of changing names.
ಮಂಗಳವಾರ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಪ್ರಧಾನಿ ಮೋದಿ ಇತಿಹಾಸವನ್ನು ತಿರುಚುವುದನ್ನು ಮುಂದುವರಿಸಬಹುದು. ಅವರು ಇಂಡಿಯಾವನ್ನು ವಿಭಜಿಸಬಹುದು. ಭಾರತ, ಅಂದರೆ ರಾಜ್ಯಗಳ ಒಕ್ಕೂಟ. ಆದರೆ ನಾವು ಹಿಂಜರಿಯುವುದಿಲ್ಲ. ಅಷ್ಟಕ್ಕೂ, ಇಂಡಿಯಾ ಮೈತ್ರಿ ಪಕ್ಷಗಳ ಉದ್ದೇಶವೇನು? ಇದು ಭಾರತ – ಸಾಮರಸ್ಯ, ಸೌಹಾರ್ದತೆ, ಸಾಮರಸ್ಯ ಮತ್ತು ವಿಶ್ವಾಸವನ್ನು ತರುತ್ತದೆ. ಜುಡೇಗಾ ಭಾರತ್. ಜೀತೇಗಾ ಇಂಡಿಯಾ!” ಎಂದು ಹೇಳಿದ್ದರು.
ದೇಶವನ್ನು ‘ಭಾರತ್’ ಎಂದು ಕರೆಯಲು ಯಾವುದೇ ಸಾಂವಿಧಾನಿಕ ಆಕ್ಷೇಪಣೆ ಇಲ್ಲವಾದರೂ, ಲೆಕ್ಕಿಸಲಾಗದ ಬ್ರಾಂಡ್ ಮೌಲ್ಯವನ್ನು ಹೊಂದಿರುವ ‘ಭಾರತ’ವನ್ನು ಸಂಪೂರ್ಣವಾಗಿ ತೊಡೆದುಹಾಕಲು ಸರ್ಕಾರವು ಅಷ್ಟು ಮೂರ್ಖವಾಗುವುದಿಲ್ಲ ಎಂದು ತರೂರ್ ಮಂಗಳವಾರ ಹೇಳಿದ್ದರು.(ಏಜೆನ್ಸೀಸ್)
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × 3 =
Remember me
