ನವದೆಹಲಿ: ಕೇಂದ್ರ ಸಚವೆ ಸ್ಮೃತಿ ಇರಾನಿ ಇಂದು ಮಾಡಿದ ಟ್ವೀಟ್ ಒಂದು ದೇಶದ ಗಮನಸೆಳೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ತವರಿನಂತಿದ್ದ ಅಮೇಠಿ ಕ್ಷೇತ್ರ ದಶಕಗಳ ಕಾಲ ಹಿಂದುಳಿದ ಬಗೆಯನ್ನು ಸ್ಮೃತಿ ಇರಾನಿಯವರ ಟ್ವೀಟ್ ಪರೋಕ್ಷವಾಗಿ ಬಿಂಬಿಸಿದೆ.
ಅವರ ಟ್ವೀಟ್​ನಲ್ಲಿರುವ ಅಂಶಗಳಿಷ್ಟೆ- ಗೌರಿ ಗಂಜ್ ರೈಲ್ವೆ ನಿಲ್ದಾಣದ ಹಳೆಯ ಚಿತ್ರ ಮತ್ತು ಅಭಿವೃದ್ಧಿ ಹೊಂದಿದ ಈಗಿನ ಚಿತ್ರಗಳಿವೆ. ಜತೆಗೆ ಸಚಿವ ಸಂಪುಟ ಸಹೋದ್ಯೋಗಿ ಪಿಯೂಷ್ ಗೋಯೆಲ್ ಅವರಿಗೆ ಬದಲಾವಣೆಗೆ ಅಗತ್ಯ ಕ್ರಮ ತೆಗೆದುಕೊಂಡದ್ದಕ್ಕಾಗಿ ಧನ್ಯವಾದವನ್ನು ಅವರು ಸಮರ್ಪಿಸಿದ್ದಾರೆ.
ಇದನ್ನೂ ಓದಿ:ಗ್ರಾಪಂ ಚುನಾವಣೆ ಅಕ್ಟೋಬರ್​ನಲ್ಲಿ?
ರಾಹುಲ್ ಗಾಂಧಿ 1999ರಿಂದ 2019ರ ತನಕವೂ ಅಮೇಠಿಯ ಸಂಸದರಾಗಿದ್ದರು. ಅವರ ಪಕ್ಷದ ಸರ್ಕಾರವೇ 2014ರ ತನಕ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿತ್ತು. 2014ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ರಾಹುಲ್ ವಿರುದ್ಧ ಸ್ಮೃತಿ ಇರಾನಿ ಸ್ಪರ್ಧಿಸಿದ್ದರಾದರೂ ಸೋತಿದ್ದರು. ಆದರೂ ಪಟ್ಟು ಬಿಡದೆ 2019 ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ಗೆಲುವು ದಾಖಲಿಸಿದ್ದು ಈಗ ಇತಿಹಾಸ. ಸೋಲಿನ ಭೀತಿಯಿಂದ ರಾಹುಲ್ ಗಾಂಧಿ ಅಮೇಠಿಯ ಹೊರತಾಗಿ ಕೇರಳದ ವಯನಾಡ್​ನಿಂದ ಸ್ಪರ್ಧಿಸಿದ್ದರು. ಅಲ್ಲಿ ಅವರು ಗೆಲುವು ದಾಖಲಿಸಿ ಸಂಸದರಾಗಿ ಮುಂದುವರಿದ್ದಾರೆ.
ಆದಾಗ್ಯೂ, ಅಮೇಠಿ ಜನರ ಕೈಬಿಟ್ಟಿಲ್ಲ ಎಂದು ಹೇಳುತ್ತಿರುವ ರಾಹುಲ್ ಗಾಂಧಿ, ಲಾಕ್​ಡೌನ್ ಅವಧಿಯಲ್ಲಿ ಏಪ್ರಿಲ್ ತಿಂಗಳಲ್ಲಿ 12,000 ಸ್ಯಾನಿಟೈಸರ್​ಗಳು, 20,000 ಫೇಸ್​ಮಾಸ್ಕ್​, 10,000 ಸೋಪುಗಳನ್ನು ವಿತರಿಸಿದ್ದಾಗಿ ವರದಿ ಇದೆ. (ಏಜೆನ್ಸೀಸ್)
वर्षों से जर्जर स्थिति और नागरिक सुविधाओं के अभाव में जूझ रहे अमेठी के गौरीगंज स्टेशन का कायाकल्प करने हेतु रेल मंत्री@PiyushGoyalजी का हार्दिक धन्यवाद।
स्टेशन पर यात्रियों के लिए Wi-Fi, कोच जानकारी प्रणाली जैसी सुविधाओं के सफल कार्यान्वयन हेतु @drmlko25 जी के प्रति भी आभार।pic.twitter.com/ewzUPooRWz
— Smriti Z Irani (@smritiirani)July 9, 2020

ವಯಸ್ಸಾದ ಮಹಿಳೆ ಎಂದೂ ನೋಡದೆ ಫೇಸ್​ಬುಕ್​ ಫ್ರೆಂಡ್ ಹೀಗಾ ವಂಚಿಸೋದಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 5 =
Remember me
